ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಪ್ರಣಾಳಿಕೆ

ಬಂಧುಗಳೇ,

ಇದೇ ಜೂನ್ 11, 2018 ರಂದು ನಡೆಯಲಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು, ಕ್ಷೇತ್ರದ ಅಭಿವೃಧ್ಧಿಗೆ ನನ್ನ ಕನಸು ಮತ್ತು ಯೋಜನೆಗಳೇನು, ಹಾಗೂ ಶಾಸಕನಾಗಿ ನನ್ನ ಕರ್ತವ್ಯ ಮತ್ತು ನಡತೆ ಹೇಗಿರುತ್ತದೆ ಎಂಬ ವಿವರಗಳನ್ನು ನೆನ್ನೆ (02-06-2018) ಬಿಡುಗಡೆ ಮಾಡಲಾದ ಈ ಪ್ರಣಾಳಿಕೆಯ ಮೂಲಕ ಜನರ ಮುಂದಿಡುತ್ತಿದ್ದೇನೆ. ಜಯನಗರ ಕ್ಷೇತ್ರದ ಜನತೆ ಇದನ್ನು ಗಮನಿಸಿ, ಪ್ರಜಾಪ್ರಭುತ್ವವನ್ನು ಕಟ್ಟುವ ನಮ್ಮೆಲ್ಲರ ನೈತಿಕ ಜವಾಬ್ದಾರಿಯನ್ನು ಮನಗಂಡು, ವಿಷಯಾಧಾರಿತವಾಗಿ, ದುಷ್ಟ-ಭ್ರಷ್ಟ ರಾಜಕಾರಣದ ವಿರುದ್ಧವಾಗಿ ಮತ್ತು ಸ್ವಚ್ಚ ಹಾಗೂ ಯೋಗ್ಯ ರಾಜಕಾರಣದ ಪರವಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಬೇಕೆಂದು ಈ ಮೂಲಕ ಕೋರುತ್ತೇನೆ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ಪಕ್ಷೇತರ ಅಭ್ಯರ್ಥಿ, ಜಯನಗರ ವಿಧಾನಸಭಾ ಕ್ಷೇತ್ರ

ಕನ್ನಡ ಪಿಡಿಎಫ಼್
English PDF

Both comments and pings are currently closed.

Comments are closed.

Powered by WordPress