-ಡಾ. ಸಿದ್ದಲಿಂಗಯ್ಯ. ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು […]
– ಪ್ರಸಾದ್ ರಕ್ಷಿದಿ ಈ ವರ್ಷ ಮಲೆನಾಡಿಗೆ ಆಪತ್ತು ತಂದು ಮಳೆ “ಶತಮಾನದ ಮಳೆ” ಎಂದೇ ಪ್ರಖ್ಯಾತವಾಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅನಾಹುತ ತಂದ ಈ ಮಳೆಗಾಲದಲ್ಲಿ ಅತಿ ಹೆಚ್ಚು ತೊಂದರೆಯಾದದ್ದು ಕೊಡಗಿಗೆ, ನಂತರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳು ಮತ್ತು ಅಲ್ಲಲ್ಲಿ ಕೆಲವು ಕಡೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. (ಕೇರಳದ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ) ಕಾಫಿ ನಾಡಿನಲ್ಲಿ ಮಳೆಯನ್ನು […]
ಸ್ನೇಹಿತರೆ, www.vartamaana.com ವರ್ತಮಾನ - ಇಂದಿನ ಸವಾಲು ಮತ್ತು ಭವಿಷ್ಯದ ಕನಸು ಇಂತಹುದೊಂದು ಪ್ರಯತ್ನ ಆರಂಭವಾಗಿದೆ. ಕೇವಲ ನಮ್ಮ ಬದ್ಧತೆ ಮತ್ತು ನಾವು ಒಂದಷ್ಟು ಜನ ಕೊಡಬಹುದಾದ ಬಿಡುವಿನ ಸಮಯದ ಮೇಲೆ ಈ ಪ್ರಯತ್ನ ಸಾಗುತ್ತದೆ. ಇದು ವೈಯಕ್ತಿಕ ನೆಲೆಯಲ್ಲಿ ಆರಂಭವಾದದ್ದೇ ಆದರೂ ಇದು ಅಂತಿಮವಾಗಿ ಸಂಘಟಿತ ಯತ್ನ. ಇದನ್ನು ಆರಂಭಿಸಿದಾಗ ಬರೆದ ಪೀಠಿಕೆ ಇಲ್ಲಿದೆ. ಭೇಟಿ ಕೊಡಿ. ಇನ್ನು ಮೇಲೆ, ನನ್ನ ಲೇಖನಗಳು ವರ್ತಮಾನದಲ್ಲಿಯೇ ಪ್ರಕಟವಾಗಲಿವೆ. […]