<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಏನೇ ಆಗಲಿ, ಒಳ್ಳೆಯದನ್ನೇ ಮಾಡಿ...</title>
	<atom:link href="http://www.ravikrishnareddy.com/anyway-kannada/?feed=rss2" rel="self" type="application/rss+xml" />
	<link>http://www.ravikrishnareddy.com/anyway-kannada</link>
	<description>ಇಂಗ್ಲಿಷ್ ಮೂಲ: ಕೆಂಟ್ ಕೀತ್</description>
	<lastBuildDate>Wed, 24 Jun 2009 04:31:07 +0000</lastBuildDate>
	<generator>http://wordpress.org/?v=2.9.1</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಏನೇ ಆಗಲಿ ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ.</title>
		<link>http://www.ravikrishnareddy.com/anyway-kannada/?p=106</link>
		<comments>http://www.ravikrishnareddy.com/anyway-kannada/?p=106#comments</comments>
		<pubDate>Mon, 26 Jan 2009 23:16:22 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=106</guid>
		<description><![CDATA[
ಪ್ರಸ್ತಾಪ
ಕೇಳಿ:

ಇದೊಂದು ವಿಚಿತ್ರ ಪ್ರಪಂಚ
ಕೇಳಿ:

ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು.
ಏನೇ ಇರ್ಲಿ, ಅವರನ್ನು ಪ್ರೀತಿಸಿ.
ಕೇಳಿ:

ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.
ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
ಕೇಳಿ:

ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.
ಆದ್ರೂ ಯಶಸ್ವಿಯಾಗಿ.
ಕೇಳಿ:

ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ. 
ಆದ್ರೂ ಒಳ್ಳೆಯದನ್ನು ಮಾಡಿ.
ಕೇಳಿ:

ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.
ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.
ಕೇಳಿ:

ಉನ್ನತವಾದ [...]]]></description>
			<content:encoded><![CDATA[<p><big><big><center><br />
<span style="color: #cc0033;"><a href="?p=8">ಪ್ರಸ್ತಾಪ</a></span><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Introduction.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;"><a href="?p=15">ಇದೊಂದು ವಿಚಿತ್ರ ಪ್ರಪಂಚ</a></span><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%201.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು.</span><br />
<a href="?p=24">ಏನೇ ಇರ್ಲಿ, ಅವರನ್ನು ಪ್ರೀತಿಸಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%202.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.</span><br />
<a href="?p=30">ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%203.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.</span><br />
<a href="?p=36">ಆದ್ರೂ ಯಶಸ್ವಿಯಾಗಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%204.mp3'/><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ. </span><br />
<a href="?p=39">ಆದ್ರೂ ಒಳ್ಳೆಯದನ್ನು ಮಾಡಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%205.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.</span><br />
<a href="?p=47">ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%206.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು. </span><br />
<a href="?p=50">ಆದ್ರೂ ದೊಡ್ಡದಾಗಿಯೇ ಆಲೋಚಿಸಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%207.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ. </span><br />
<a href="?p=53">ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%208.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.</span><br />
<a href="?p=55">ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%209.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು.</span><br />
<a href="?p=59">ಆದ್ರೂ, ಸಹಾಯ ಮಾಡಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%2010.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;">ನಿಮ್ಮ ಕೈಲಾದುದನ್ನು ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.</span><br />
<a href="?p=62">ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%2012.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center></p>
<hr /><center><span style="color: #cc0033;"><a href="?p=64">ಇಂತಹ ಅಸಂಗತಸತ್ಯದ ಜೀವನವನ್ನು ಜೀವಿಸುವುದು ಹೇಗೆ?</a><br />
<small>ಕೇಳಿ:</small><span style='text-align:left;display:block;'>
<p><object type='application/x-shockwave-flash' data='http://support.wordpress.com/wp-content/plugins/audio-player/player.swf' width='290' height='24' id='audioplayer1'><param name='movie' value='http://support.wordpress.com/wp-content/plugins/audio-player/player.swf' /><param name='FlashVars' value='&amp;bg=0xf8f8f8&amp;leftbg=0xeeeeee&amp;lefticon=0x666666&amp;rightbg=0xcccccc&amp;rightbghover=0x999999&amp;righticon=0x666666&amp;righticonhover=0xffffff&amp;text=0x666666&amp;slider=0x666666&amp;track=0xFFFFFF&amp;border=0x666666&amp;loader=0x9FFFB8&amp;soundFile=http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%2012.mp3' /><param name='quality' value='high' /><param name='menu' value='false' /><param name='bgcolor' value='#FFFFFF' /></object></span></center><br />
<hr /><center></big></big></p>
<hr />
<ul>
<li><a href="http://www.ravikrishnareddy.com/anyway-kannada/wp-content/audio/Anyway_32kbps.mp3">ಸಂಪೂರ್ಣ ಕೇಳು ಪುಸ್ತಕ &#8211; Mp3</a></li>
<li><a href="http://www.ravikrishnareddy.com/anyway-kannada/wp-content/audio/Do Good Anyway-Quicktime.m4b">ಸಂಪೂರ್ಣ ಕೇಳು ಪುಸ್ತಕ &#8211; Apple ಕ್ವಿಕ್‌ಟೈಮ್‍ಗಾಗಿ (.m4b)</a></li>
</ul>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=106</wfw:commentRss>
		<slash:comments>0</slash:comments>
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%201.mp3" length="8349696" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Introduction.mp3" length="10174464" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%202.mp3" length="7929856" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%203.mp3" length="9107456" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%204.mp3" length="12286080" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%205.mp3" length="7110656" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%206.mp3" length="11855872" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%207.mp3" length="13691008" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%208.mp3" length="9465856" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%209.mp3" length="4859904" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%2010.mp3" length="7436416" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Do%20Good%20Anyway%20-%20Chapter%2012.mp3" length="20316160" type="audio/mpeg" />
<enclosure url="http://www.ravikrishnareddy.com/anyway-kannada/wp-content/audio/Anyway_32kbps.mp3" length="31932544" type="audio/mpeg" />
		</item>
		<item>
		<title>ಈ ಅಸಂಗತಸತ್ಯದ ಜೀವನವನ್ನು ಜೀವಿಸುವುದು ಹೇಗೆ?</title>
		<link>http://www.ravikrishnareddy.com/anyway-kannada/?p=64</link>
		<comments>http://www.ravikrishnareddy.com/anyway-kannada/?p=64#comments</comments>
		<pubDate>Wed, 14 Jan 2009 23:14:47 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=64</guid>
		<description><![CDATA[ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್‌ಗಳನ್ನು ನೀವು ಒಪ್ಪಿಕೊಂಡದ್ದೇ ಆದರೆ, ಈ ಹುಚ್ಚು ಪ್ರಪಂಚದಲ್ಲಿ ಆತ್ಮಾರ್ಥವನ್ನು ಕಂಡುಕೊಳ್ಳುತ್ತೀರಿ. ಆ ಮೂಲಕ ಈ ಅಸಂಗತ ಮಾತುಗಳ, ವಿರುದ್ಧಾರ್ಥದ ಜೀವನವನ್ನು ಜೀವಿಸಲು ಸ್ವತಂತ್ರರಾಗುತ್ತೀರಿ.
ಉತ್ತಮ ಜೀವನಕ್ಕೆ ಹತ್ತು ಸೂತ್ರಗಳಾದ ಇವನ್ನು ಪಾಲಿಸಿದರೆ ನೀವು ನಿಜವಾಗಲೂ ಯಾವ ಮನುಷ್ಯನಾಗಬೇಕಿದೆಯೊ ಅದು ಆಗಲು ಸಾಧ್ಯವಾಗುತ್ತದೆ. ನಿಮಗೆ ತೃಪ್ತಿ ಕೊಡದ, ಜೀವನದ ಪರಮಾರ್ಥಗಳಲ್ಲದ ಲೌಕಿಕ ವಿಷಯಗಳಿಂದ ಇದು ನಿಮ್ಮನ್ನು ವಿಮೋಚನೆ ಗೊಳಿಸುತ್ತದೆ. ಈ ಬದುಕಿನಲ್ಲಿ ನಿಜವಾಗಲೂ ಯಾವುದು ಮುಖ್ಯವೊ ಮತ್ತು ಯಾವುದು ಬದುಕನ್ನು ಸಂಪನ್ನಗೊಳಿಸುವುದೊ ಅದರ ಮೇಲೆ ನಿಮ್ಮ ಗಮನ [...]]]></description>
			<content:encoded><![CDATA[<p>ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್‌ಗಳನ್ನು ನೀವು ಒಪ್ಪಿಕೊಂಡದ್ದೇ ಆದರೆ, ಈ ಹುಚ್ಚು ಪ್ರಪಂಚದಲ್ಲಿ ಆತ್ಮಾರ್ಥವನ್ನು ಕಂಡುಕೊಳ್ಳುತ್ತೀರಿ. ಆ ಮೂಲಕ ಈ ಅಸಂಗತ ಮಾತುಗಳ, ವಿರುದ್ಧಾರ್ಥದ ಜೀವನವನ್ನು ಜೀವಿಸಲು ಸ್ವತಂತ್ರರಾಗುತ್ತೀರಿ.</p>
<p>ಉತ್ತಮ ಜೀವನಕ್ಕೆ ಹತ್ತು ಸೂತ್ರಗಳಾದ ಇವನ್ನು ಪಾಲಿಸಿದರೆ ನೀವು ನಿಜವಾಗಲೂ ಯಾವ ಮನುಷ್ಯನಾಗಬೇಕಿದೆಯೊ ಅದು ಆಗಲು ಸಾಧ್ಯವಾಗುತ್ತದೆ. ನಿಮಗೆ ತೃಪ್ತಿ ಕೊಡದ, ಜೀವನದ ಪರಮಾರ್ಥಗಳಲ್ಲದ ಲೌಕಿಕ ವಿಷಯಗಳಿಂದ ಇದು ನಿಮ್ಮನ್ನು ವಿಮೋಚನೆ ಗೊಳಿಸುತ್ತದೆ. ಈ ಬದುಕಿನಲ್ಲಿ ನಿಜವಾಗಲೂ ಯಾವುದು ಮುಖ್ಯವೊ ಮತ್ತು ಯಾವುದು ಬದುಕನ್ನು ಸಂಪನ್ನಗೊಳಿಸುವುದೊ ಅದರ ಮೇಲೆ ನಿಮ್ಮ ಗಮನ ಕೇಂದ್ರೀಕೃತವಾಗುತ್ತದೆ.</p>
<p>ಲೌಕಿಕ ಯಶಸ್ಸಿನ ಜನಪ್ರಿಯ ಉದಾಹರಣೆಗಳಾದ ಹಣ, ಅಧಿಕಾರ, ಅಥವ ಕೀರ್ತಿಯ ಮೇಲೆ ಈ ಸೂತ್ರಗಳು ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದಿಲ್ಲ. ಬದಲಿಗೆ, ನೀವು ಇತರರನ್ನು ಪ್ರೀತಿಸುವುದರಿಂದ ಸಿಗುವ ಸಂತೋಷದ ಮೇಲೆ, ಒಳ್ಳೆಯದನ್ನು ಮಾಡುವುದರ ಮೇಲೆ, ಪ್ರಾಮಾಣಿಕರಾಗಿ ಇರುವುದರ ಮೇಲೆ, ದೊಡ್ಡದಾಗಿ ಆಲೋಚನೆ ಮಾಡುವುದರ ಮೇಲೆ, ದೀನದುರ್ಬಲದಲಿತರ ಪರವಾಗಿ ಹೋರಾಡುವುದರ ಮೇಲೆ, ಕಟ್ಟುವುದರ ಮೇಲೆ, ಇತರರಿಗೆ ಸಹಾಯ ಮಾಡುವುದರ ಮೇಲೆ, ಮತ್ತು ನಿಮ್ಮಲ್ಲಿಯ ಅತ್ಯುತ್ತಮವಾದದ್ದನ್ನೆಲ್ಲ ಈ ಪ್ರಪಂಚಕ್ಕೆ ಕೊಡುವುದರ ಮೇಲೆ, ಅದು ಕೇಂದ್ರಿತವಾಗಿದೆ. ನೀವು ಮಾಡುವ ಕ್ರಿಯೆಯಿಂದ ಮುಂದಕ್ಕೆ ಏನಾದರೂ ಆಗುತ್ತದೊ ಬಿಡುತ್ತದೊ, ಆದರೆ, ನೀವು ಮಾಡುವ ಕ್ರಿಯೆ ತನ್ನಷ್ಟಕ್ಕೆ ತಾನೆ ಪರಿಪೂರ್ಣವಾದದ್ದು. ನೀವು ಈ ಹತ್ತು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವನ್ನೇ ಜೀವಿಸಿದಾಗ, ನೀವು ಮಾಡುವ ಪ್ರತಿಯೊಂದು ಕೆಲಸವೂ ಸಂಪೂರ್ಣವಾದದ್ದೆ ಆಗುತ್ತದೆ. ಯಾಕೆಂದರೆ, ಪ್ರತಿಯೊಂದು ಕಾರ್ಯವೂ ಅದರದೇ ಆದ ಅರ್ಥವನ್ನು ನಿಮಗೆ ಕೊಡುತ್ತ ಹೋಗುತ್ತದೆ.</p>
<p>ಈ ಅಸಂಗತ ಸೂತ್ರಗಳ ಜೀವನವನ್ನು ಜೀವಿಸುವುದು ಹೇಗೆ? ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವುದು ಹೇಗೆ? ಹೇಗೆಂದರೆ, ನಿಮ್ಮ ಗಮನವನ್ನು ಇತರರತ್ತ ಹರಿಸುವುದರ ಮೂಲಕ ಮತ್ತು ನಿಮಗಿಂತ ದೊಡ್ಡದರ ಭಾಗವಾಗುವುದರ ಮೂಲಕ. ಒಂದು ಆದರ್ಶಮಯ ಹೋರಾಟದಲ್ಲಿ ಪಾಲ್ಗೊಳ್ಳುವುದು, ಒಂದು ಸಂಘ-ಸಂಸ್ಥೆಯಲ್ಲಿ ತೊಡಗಿಕೊಳ್ಳುವುದು, ಅಥವ ಧರ್ಮವನ್ನು ಪಾಲಿಸುವುದು, ನಿಮಗಿಂತ ಹಿರಿದಾದುದರಲ್ಲಿ ಭಾಗವಾಗುವುದಕ್ಕೆ ಉದಾಹರಣೆಗಳು.</p>
<p>&#8220;ಅಂತರಂಗ&#8221;ಕ್ಕೆ ಬೇಕಾದ ಅರ್ಥವನ್ನು &#8220;ಬಹಿರಂಗ&#8221;ದಲ್ಲಿ, ಅಂದರೆ, ಪರರನ್ನು ಪ್ರೀತಿಸುವುದರ ಮತ್ತು ಅವರಿಗೆ ಸಹಾಯ ಮಾಡುವುದರ ಮೂಲಕ ನೀವು ಸಾಧಿಸಬಹುದು. ಒಂದು ಶತಮಾನದ ಹಿಂದೆಯೆ ಕವಯತ್ರಿ ಎಮಿಲಿ ಡಿಕಿನ್ಸನ್ ಹೀಗೆ ಹೇಳಿದ್ದಾರೆ:<br />
<span style="color: #0003aa;"><strong><br />
	ಒಂದು ಎದೆ ಒಡೆಯುವುದನ್ನು ನಾನು ತಡೆಯಬಹುದಾದರೆ<br />
	ನಾನು ವ್ಯರ್ಥವಾಗಿ ಬದುಕುವುದಿಲ್ಲ<br />
	ಒಂದು ಜೀವದ ನೋವನ್ನು ಶಮನ ಮಾಡುವಂತಾದರೆ<br />
	ಅಥವ ಒಬ್ಬರ ವೇದನೆಯನ್ನು ಕಮ್ಮಿ ಮಾಡುವಂತಾದರೆ<br />
	ಅಥವ ಅಶಕ್ತ ಗುಬ್ಬಚ್ಚಿಯೊಂದನ್ನು<br />
	ಅದರ ಗೂಡಿಗೆ ಮರಳಿಸಲು ಸಹಾಯ ಮಾಡುವಂತಾದರೆ<br />
	ನಾನು ವ್ಯರ್ಥವಾಗಿ ಬದುಕುವುದಿಲ್ಲ.<br />
</span></strong></p>
<p>ನಿಮ್ಮ ಸಹಾಯ ಯಾವ ಮಟ್ಟದ್ದೆ ಆಗಿರಲಿ, ಅದನ್ನು ನೀವು ಇನ್ನೊಬ್ಬರಿಗೆ ಮಾಡಿದಾಗ ನೀವು ವ್ಯರ್ಥವಾಗಿ ಬದುಕುತ್ತಿಲ್ಲ, ನಿಮ್ಮ ಬದುಕು ವ್ಯರ್ಥವಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಇನ್ನೊಬ್ಬರ ಜೀವನದಲ್ಲಿ ನೀವು ತರುವ ಅರ್ಥಪೂರ್ಣ ಬದಲಾವಣೆ ನಿಮ್ಮ ಬದುಕಿಗೂ ತನ್ನದೇ ಆದ ಆರ್ಥ ಕೊಡುತ್ತದೆ.</p>
<p>ಇನ್ನೊಬ್ಬರಿಗೆ ನಿಮ್ಮ ಸಹಾಯದ ಅಗತ್ಯ ಇದೆ ಎಂದು ತಿಳಿದಾಗ, ನಿಮಗೆ ಈ ಮೂರು ಆಯ್ಕೆಗಳಿರುತ್ತವೆ:<br />
<strong></p>
<ol>
<li>ಬೇರೆಯವರ ಅಗತ್ಯಗಳನ್ನು ನಿರ್ಲಕ್ಷಿಸಿ, ಏನನ್ನೂ ಮಾಡದಿರುವುದು &#8211; ಇದು ನೈತಿಕ ಸೋಲಿನ ಆಯ್ಕೆ; ಅಥವ</li>
<li>ಬೇರೆಯವರ ದೌರ್ಬಲ್ಯಗಳನ್ನು ನಿಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು, ಸಿನಿಕತೆಯಿಂದ ಅವರನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು &#8211; ಇದು ನೈತಿಕ ಸೋಲಿಗಿಂತ ಕೀಳಾದ ಆಯ್ಕೆ; ಅಥವ</li>
<li>ಸರಿಯಾದುದನ್ನು ಮಾಡುವುದು ಮತ್ತು ಜನರ ಅಗತ್ಯಗಳಿಗೆ ಸ್ಪಂದಿಸುವುದು.</li>
</ol>
<p></strong>ಈ ಕೊನೆಯ ಆಯ್ಕೆಯೆ ನೈತಿಕ ಜೀವನದ ಆಯ್ಕೆ. ಮೇಲಿನ ಮೂರು ಆಯ್ಕೆಗಳಲ್ಲಿ ಪ್ರೀತಿಯ ಮೇಲೆ ಆಧಾರಿತವಾದ ಆಯ್ಕೆ ಇದೊಂದೆ. ಜೀವನಕ್ಕೆ ಭರವಸೆಯನ್ನು ಕೊಡುವ ಆಯ್ಕೆಯೂ ಇದೆ. ನೀವು ಮಾಡಬೇಕೆಂದುಕೊಂಡಿದ್ದನ್ನು ಪೂರ್ತಿಯಾಗಿ ಮಾಡಲಿಕ್ಕಾಗದೆ ಹೋದರೂ ಇದೇ ಸರಿಯಾದ ಆಯ್ಕೆ. ಇದರ ಹೊರತಾಗಿ ಬೇರೆ ದಾರಿಯೆ ಇಲ್ಲ.</p>
<p>ಯಾವುದು ಸರಿಯಾದುದೊ, ಒಳ್ಳೆಯದೊ, ಸತ್ಯವಾದದ್ದೊ ಅದನ್ನು ಮಾಡಲು ಪ್ರಯತ್ನಿಸಿ, ಆ ಪ್ರಯತ್ನದಲ್ಲಿ ಸೋತೆ ಎಂಬ ಭಾವನೆ ನಿಮ್ಮಲ್ಲಿ ಬಂದುಬಿಟ್ಟರೆ, ಇತರರನ್ನು ನಿಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಪ್ರಲೋಭನೆ ಅಥವ ಏನನ್ನೂ ಮಾಡದೆ ಸುಮ್ಮನೆ ಇದ್ದುಬಿಡುವ ಆಲೋಚನೆ ನಿಮ್ಮಲ್ಲಿ ಬಂದುಬಿಡಬಹುದು. ಆದರೆ ನೀವು ಅಂದುಕೊಂಡ ಹಾಗೆ ಆಗಲಿಲ್ಲ ಎನ್ನುವುದು ಅಥವ ನೀವು ಯಾರಿಗೆ ಸಹಾಯ ಮಾಡಲು ಯತ್ನಿಸಿದಿರೊ ಅವರು ನಿಮ್ಮನ್ನು ಪ್ರಶಂಸಿಸಲಿಲ್ಲ ಎನ್ನುವುದು, ಮೇಲಿನ ಆ ಎರಡು ಅನೈತಿಕ ಕೆಲಸಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಮರ್ಥನೆಯಾಗುವುದಿಲ್ಲ.</p>
<p>ನಾವು ಮಾಡುವ ಕೆಲಸಕ್ಕೆ ಫಲಿತಾಂಶ ಇರಬೇಕು ಮತ್ತು ಅದನ್ನು ಪಡೆಯಲು ಗಮನ ಹರಿಸಬೇಕು. ನಾವು ಮಾಡುತ್ತಿರುವ ಕೆಲಸಕ್ಕೆ ನಕಾರಾತ್ಮಕ ಟೀಕೆಗಳು ಬಂದಾಗ ನಾವು ಏನನ್ನು ಮಾಡುತ್ತಿದ್ದೇವೊ ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರೀಕ್ಷಿಸಿಕೊಳ್ಳಬೇಕು. ಈಗ ಮಾಡುತ್ತಿರುವುದರಿಂದ ನಾವು ಕಲಿತದ್ದು ಏನು? ಮುಂದಿನ ಸಲ ಅದನ್ನು ಬೇರೆ ರೀತಿ ಮಾಡಬೇಕೆ? ನಾವು ಮಾಡುತ್ತಿರುವ ಕೆಲಸದಿಂದ ಇತರರಿಗೆ ನಿಜವಾಗಲೂ ಸಹಾಯ ಆಗುತ್ತಿದೆಯೆ? ಸಹಾಯ ಮಾಡಲು ಇದಕ್ಕಿಂತ ಬೇರೆ ದಾರಿ ಇದೆಯೆ? ಈ ಸಹಾಯ ಮಾಡಲು ನಮಗಿಂತಲೂ ಯೋಗ್ಯರಾದವರು ಇದ್ದಾರೆಯೆ? ಹೀಗೆ ಎಲ್ಲವನ್ನೂ ತಾಳ್ಮೆಯಿಂದ ಗಮನಿಸುವುದು, ಇನ್ನೊಬ್ಬರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುವುದು, ವಿಚಾರ ಮಾಡುವುದು, ಮತ್ತು ಸಮಂಜಸವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು, ಇವೆಲ್ಲ ಬಹಳ ಮುಖ್ಯವಾದವು. ಸುಮ್ಮನೆ ಕೈಚೆಲ್ಲಿ ಬಿಡುವುದಕ್ಕಿಂತ ಕಲಿಯುವುದು ಮತ್ತು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಮುಖ್ಯವಾದದ್ದು. ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಥವ ನಿಮ್ಮ ಪ್ರಯತ್ನಗಳು ನೀವಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ ನೀವು ಕೈಚೆಲ್ಲಿ ಬಿಡಬಾರದು.</p>
<p>ನಾವು ಮಾಡುವ ಕೆಲಸವನ್ನು ಬೇರೆಯವರು ಮೆಚ್ಚಬೇಕು ಎನ್ನುವುದು ಮುಖ್ಯವಾದ ವಿಷಯವೆ. ನಾನು ಇಷ್ಟೆಲ್ಲ ಮಾಡಿದರೂ ಯಾರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ನಮ್ಮಲ್ಲಿ ಬಹಳ ಜನ ಅಂದುಕೊಳ್ಳುತ್ತೇವೆ. ನಾವು ಸಹಾಯ ಮಾಡುವ ಜನ ನಮ್ಮನ್ನು ಪ್ರಶಂಸಿಸುತ್ತಿಲ್ಲ, ಹಾಗಿರುವಾಗ ಯಾಕೆ ನಾವು ನಮ್ಮ ಕೈಲಾದದ್ದನ್ನೆಲ್ಲ ಮಾಡಬೇಕು? ಇದಕ್ಕೆ ಉತ್ತರ ಏನೆಂದರೆ, ನಮಗೆ ನಮ್ಮದೆ ಆದ ವೈಯಕ್ತಿಕ ಬದ್ಧತೆ ಇದೆ ಮತ್ತು ನಮ್ಮ ಕೈಲಿ ಸಾಧ್ಯವಾದಷ್ಟೂ ಉತ್ತಮ ಕೆಲಸ ಮಾಡುವುದರಿಂದ ನಮಗೆ ಆತ್ಮತೃಪ್ತಿ ಲಭಿಸುತ್ತದೆ. ನಾವು ಮಾಡುವ ಒಳ್ಳೆಯ ಕೆಲಸ ಇತರರಿಗೆ ಗೊತ್ತಾಗುತ್ತದೆ ಅಥವ ನಮಗೆ ಪ್ರಶಂಸೆ ಲಭಿಸುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ನಮ್ಮ ಕೈಯಲ್ಲಿ ಏನೆಲ್ಲ ಸಾಧ್ಯವಿದೆಯೊ ಅದನ್ನು ನಾವು ಯಾವಾಗಲೂ ಮಾಡಬೇಕಾಗುತ್ತದೆ. ಇದು ಬೇರೆಯವರ ಬಗ್ಗೆ ಅಲ್ಲ, ನಮ್ಮ ಬಗ್ಗೆ. ಇದು ನಮಗೆ ಎಷ್ಟು ಕಾಳಜಿ ಇದೆ ಎನ್ನುವುದರ ಬಗ್ಗೆಯೆ ಹೊರತು ಇನ್ನೊಬ್ಬರಿಗೆ ಎಷ್ಟು ಕಾಳಜಿ ಇದೆ ಎನ್ನುವುದರ ಬಗ್ಗೆಯಲ್ಲ.</p>
<p>ಇನ್ನೊಬ್ಬರಿಂದ ಪ್ರಶಂಸಿಸಲ್ಪಡಬೇಕು ಎಂದುಕೊಳ್ಳುವ ಬಯಕೆ ಸಹಜವಾದದ್ದೆ. ಆದರೆ ನಾವು ಅಂತಹುದಕ್ಕೆ ಹಪಹಪಿಸುತ್ತ ಹೋದರೆ ಜೀವನಾರ್ಥ ಕಂಡುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ. ಮೆಚ್ಚಿಗೆಗೆ ಹಪಹಪಿಸುವ ಮನುಷ್ಯ ಇನ್ನೊಬ್ಬರ ಅಗತ್ಯಗಳನ್ನು ಪೂರೈಸುವುದರ ಮೇಲೆ ದೃಷ್ಟಿ ಹರಿಸದೆ ತನ್ನ ಹಪಹಪಿ ಪೂರೈಸುಕೊಳ್ಳುವುದರತ್ತ ದೃಷ್ಟಿ ಹರಿಸುತ್ತಾನೆ. ನೀವು ಮೆಚ್ಚಿಗೆಗಾಗಿ ಕಾತರಿಸುತ್ತಿದ್ದರೆ, ನಿಮ್ಮ ಸಂತೋಷ ಬೇರೆಯವರ ಮರ್ಜಿಯನ್ನು ಅವಲಂಬಿಸಿರುತ್ತದೆ. ಅದರ ಬದಲಿಗೆ, ಬೇರೆಯವರು ಮೆಚ್ಚುತ್ತಾರೊ ಬಿಡುತ್ತಾರೊ, ನೀವು ಪರರಿಗೆ ಸಹಾಯ ಮಾಡುವುದರಿಂದ ಬರುವ ಆತ್ಮಸಂತೋಷ ಮತ್ತು ತೃಪ್ತಿ ಯಾವಾಗಲೂ ನಿಮ್ಮದೇ ಆಗಿರುತ್ತದೆ.</p>
<p>ಹೀಗೆ ಮಾಡುವುದೆಲ್ಲ &#8220;ಸಂತತ್ವ&#8221; ಎಂತಲೊ, &#8220;ಸಾತ್ವಿಕ&#8221; ಎಂತಲೊ, ಸಾಧುಸಂತರಿಂದ ಮಾತ್ರ ಸಾಧ್ಯ ಅಂತಲೊ ನಿಮಗೆ ಅನ್ನಿಸಬಹುದು. ಈ ವಿಪರ್‍ಯಾಸಾರ್ಥದ ಸೂತ್ರಗಳ ಪಾಲನೆ ಸಂತತ್ವವನ್ನು ಪಡೆಯುವುದರ ಬಗ್ಗೆ ಅಲ್ಲ, ಬದಲಿಗೆ ಮಾನಸಿಕ ಶಾಂತಿಯನ್ನು ಪಡೆಯುವುದರ ಬಗ್ಗೆ, ನಮ್ಮ ವಿವೇಕವನ್ನು ಉಳಿಸಿಕೊಳ್ಳುವುದರ ಬಗ್ಗೆ. ಇತರರಿಗೆ ಸಹಾಯ ಮಾಡುವುದರಿಂದ ಮತ್ತು ಅವರನ್ನು ಪ್ರೀತಿಸುವುದರಿಂದ ದೊರಕುವ ಖುಷಿಗಿಂತ ಹೆಚ್ಚಿನದು ಇತರರು ನಮ್ಮನ್ನು ಗುರುತಿಸುವುದರಿಂದ ಅಥವ ಅವರ ಪ್ರಶಂಸನೆಗಳಿಂದ ಬರುವುದಿಲ್ಲ ಎನ್ನುವುದರ ಬಗ್ಗೆ ಇದು. ಇತರರು ನಿಮ್ಮನ್ನು ಪ್ರಶಂಸಿಸುವಂತೆ ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ನೀವು ಪ್ರೀತಿಸುವುದನ್ನು ಮತ್ತು ಸಹಾಯ ಮಾಡುವುದನ್ನು ನಿಲ್ಲಿಸಿಬಿಡಬಾರದು.</p>
<p><span style="color: #0000aa;"><span style="color: #0000aa;"><strong>ಈ ಅಸಂಗತಸತ್ಯದ ಜೀವನವನ್ನು ಜೀವಿಸುವ ನಿರ್ಧಾರ ಮತ್ತೇನೂ ಅಲ್ಲ; ಅದು ಒಂದು ಬಗೆಯ ವ್ಯಕ್ತಿಯಾಗಲು ತೀರ್ಮಾನಿಸುವ ನಿರ್ಧಾರ. ಸಮಾಜ ಅಥವ ನಿಮ್ಮ ಸಂಸ್ಥೆ ನೀವು ಏನಾಗಬೇಕೆಂದು ನಿಮ್ಮ ಮೇಲೆ ಒತ್ತಡ ಹಾಕುತ್ತಿದೆಯೊ ಅದಾಗದೆ, ನೀವು ನಿಜವಾಗಲೂ ಯಾರೊ ಅದಾಗಲು, ಅಥವ ನೀವು ನಿಜವಾಗಲೂ ಏನಾಗಬೇಕಿದೆಯೊ ಅದು ಆಗಲು ತೆಗೆದುಕೊಂಡ ನಿರ್ಧಾರವದು. ಅದು ನಿಮ್ಮ ಹೃದಯಕ್ಕೆ ಹತ್ತಿರವಾದ ಮೌಲ್ಯಗಳಿಗೆ ಸಂಬಂಧಿಸಿದ್ದು; ಆ ಮೌಲ್ಯಗಳನ್ನು ಹೇಗೆ ಪಾಲಿಸುವುದು, ಅವನ್ನೆ ಹೇಗೆ ಜೀವಿಸುವುದು ಎನ್ನುವುದಕ್ಕೆ ಸಂಬಂಧಿಸಿದ್ದು. ಅದು ನಿಮ್ಮ ಬದ್ಧತೆ, ಪ್ರಾಮಾಣಿಕತೆ, ಮತ್ತು ನಿಮ್ಮ ಸಂಪೂರ್ಣತೆಯ ಬಗ್ಗೆ; ನೀವು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹರು ಎನ್ನುವ ಬಗ್ಗೆ.</strong></span></span><strong></strong></p>
<p>ಇದರ ಜೊತೆಗೇ, ನೀವು ಎಷ್ಟು ಮಾತ್ರದ ದೃಢಮನಸ್ಸಿನವರು, ನಂಬಿದ ಮೌಲ್ಯಗಳಿಗಾಗಿ ಎಷ್ಟು ದೂರ ಹೋಗಬಲ್ಲಿರಿ ಎನ್ನುವುದನ್ನೂ ಈ ನಿರ್ಧಾರ ತೋರಿಸುತ್ತದೆ. ನೀವು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ಬೇರೆಯವರನ್ನೂ ಬಹಳ ಕಾಲ ಪ್ರೀತಿಸಿ, ದೀರ್ಘಕಾಲ ಅವರಿಗೆ ಸಹಾಯ ಮಾಡಬಲ್ಲವರಾಗುತ್ತೀರಿ. ನಿಯಮಿತವಾಗಿ ವ್ಯಾಯಾಮ ಮಾಡಿ; ಸರಿಯಾದ, ಆರೋಗ್ಯಕರವಾದ ಆಹಾರವನ್ನು ತಿನ್ನಿ; ಅಗತ್ಯವಾದಷ್ಟು ಸಮಯ ನಿದ್ದೆ ಮಾಡಿ. ನಿಮ್ಮ ಹುಮ್ಮಸ್ಸನ್ನು ನವೀಕರಿಸಿಕೊಳ್ಳಲು ಸ್ವಲ್ಪ ಬಿಡುವು ಮಾಡಿಕೊಳ್ಳಿ. ಬೌದ್ಧಿಕವಾಗಿ ಬೆಳೆಯಲು, ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಹೊಸಹೊಸ ದಾರಿಗಳನ್ನು ಕಂಡುಕೊಳ್ಳಿ. ಹಾಗೆಯೆ, ನಿಮ್ಮ ಬಳಿಗೆ ಬರುವ ಅಥವ ನಿಮಗೆ ಕಾಣಿಸುವ ಪ್ರತಿಯೊಂದು ಕೆಲಸವನ್ನೂ, ಪ್ರತಿಯೊಂದು ಹೋರಾಟವನ್ನೂ ಒಪ್ಪಿಕೊಂಡುಬಿಟ್ಟು ನಿಮ್ಮ ಮಿತಿಗೆ ಮೀರಿದ ಭಾಧ್ಯತೆಗಳನ್ನು ನಿಭಾಯಿಸಲು ಹೆಣಗಬೇಡಿ. ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ; ಎಲ್ಲವೂ ಸಮತೋಲನವಾಗಿರಲಿ. ಸಿಕ್ಕಾಪಟ್ಟೆ ದಣಿವಾಗುವಂತೆ ಎಲ್ಲದರಲ್ಲೂ ತೊಡಗಿಸಿಕೊಂಡು ಬಿಟ್ಟರೆ ಇತರರನ್ನು ಪ್ರೀತಿಸಲು ಹಾಗು ಸಹಾಯ ಮಾಡಲು ನಿಮಗೆ ತ್ರಾಣವೆ ಇರುವುದಿಲ್ಲ.</p>
<p>ನಾವು ಪ್ರತಿಯೊಬ್ಬರೂ ಯಾವುದೊ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜನಿಸಿದ್ದೇವೆ, ಹಾಗೂ ಆ ಉದ್ದೇಶ ಯಾವುದೆಂದು ಕಂಡುಕೊಂಡು ಅದನ್ನು ಈಡೇರಿಸುವುದರಿಂದ ನಮಗೆ ಅಪಾರವಾದ ನೆಮ್ಮದಿ, ಅರ್ಥ ಮತ್ತು ಆತ್ಮಸಂತೋಷ ದೊರಕುತ್ತದೆ ಎಂದು ನಾನು ನಂಬಿದ್ದೇನೆ. ಆ ಉದ್ದೇಶ ಬೇರೇನೂ ಆಗಿರದೆ ನಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ, ಅಥವ ಸಮಾಜಕ್ಕೆ ಸಕಾರಾತ್ಮಕ ಪರಿಣಾಮ ಉಂಟು ಮಾಡುವುದೆ ಆಗಿರುತ್ತದೆ.</p>
<p>ಈ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದು ಹೇಗೆ? ಪರಿಹರಿಸಬೇಕಾದ ದೊಡ್ಡದೊಡ್ಡ ಸಮಸ್ಯೆಗಳೆ ಇವೆ. ಯುದ್ಧ, ಹಸಿವು, ರೋಗರುಜಿನಗಳು, ಅಧಃಪತನವಾಗುತ್ತಿರುವ ಪರಿಸರ, ಅಪರಾಧಗಳು, ನಿರುದ್ಯೋಗ, ಜಾತಿಭೇದ, ವರ್ಣಭೇದ, ಶೋಷಣೆ, ಸರ್ವರಿಗೂ ಶಿಕ್ಷಣ ಮತ್ತು ಸ್ವಾಸ್ಥ್ಯದ ಲಭ್ಯತೆ; ಇವೆಲ್ಲವೂ ದೊಡ್ಡ, ಗಂಭೀರ ಸಮಸ್ಯೆಗಳು.</p>
<p>ತಮಗೆ ಅಥವ ತಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ, ಅಥವ ನೆರೆಹೊರೆಯವರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಕೆಲವೊಮ್ಮೆ ಜನರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ. ತಾವು ಪ್ರತ್ಯಕ್ಷವಾಗಿ ಕಂಡ ಅಥವ ಅನುಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಇವರು ಶ್ರಮಿಸುತ್ತಾರೆ. ಬೈಬಲ್ಲಿನ ನೀತಿಕತೆಯೊಂದರಲ್ಲಿ ಬರುವ ಸಜ್ಜನ ಪರೋಪಕಾರಿ ಮನುಷ್ಯನ ಹಾಗೆ ಇವರು. ಕಳ್ಳರಿಂದ ಹಲ್ಲೆಗೊಳಗಾಗಿ ತನ್ನಲ್ಲಿ ಇದ್ದದ್ದನ್ನೆಲ್ಲ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ್ನನ್ನು ನೋಡಿದ ಆ ಪರೋಪಕಾರಿ ಸಮೇರಿಟನ್, ಅಪರಿಚಿತ ಗಾಯಾಳುವನ್ನು ಛತ್ರವೊಂದಕ್ಕೆ ಕರೆದುಕೊಂಡು ಹೋಗಿ ಅವನ ಶುಶ್ರೂಷೆ ಮಾಡುತ್ತಾನೆ. ಅಪರಿಚಿತರಿಗೆ, ಅನಾಥರಿಗೆ, ದುರ್ಬಲರಿಗೆ ಕಾಳಜಿ ತೋರಿಸುವುದು ಲೋಕೋತ್ತರ ಮಾನವೀಯ ಗುಣ. ನಮ್ಮ ಹೆಚ್ಚಿನ ನೀತಿಕತೆಗಳ ಸಾರಾಂಶ ಇಂತಹ ಬಡವರ, ದುರ್ಬಲರ, ಮುದುಕರ, ಹಾಗೂ ಅನಾಥರ ಬಗ್ಗೆ ವಿಶೇಷ ಕಾಳಜಿ ತೋರುವುದೇ ಆಗಿದೆ.</p>
<p>ನೀವು ಗಮನ ಕೊಡಲು ತೀರ್ಮಾನಿಸಿದ ಸಮಸ್ಯೆ ದೊಡ್ಡದೇ ಇರಲಿ ಸಣ್ಣದೇ ಇರಲಿ, ತತ್ಸಮಯದ್ದೇ ಆಗಿರಲಿ ದೀರ್ಘಕಾಲೀನವಾದದ್ದೆ ಆಗಿರಲಿ, ಹತ್ತಿರದ್ದೆ ಆಗಿರಲಿ ಇಲ್ಲವೆ ದೂರದಲ್ಲಿರುವುದೇ ಆಗಿರಲಿ, ಪ್ರತಿಯೊಂದು ಕಾರ್ಯದಲ್ಲೂ ಸಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ನೀವು ಮನುಷ್ಯನ ಮೂಲಭೂತ ಅಗತ್ಯಗಳನ್ನು ಪರಿಹರಿಸಲು ತೊಡಗಿಕೊಂಡಾಗ, ಅದರ ಪರಿಣಾಮ ಖಂಡಿತವಾಗಿ ಗಣನೀಯವಾಗಿರುವ ಸಾಧ್ಯತೆಯೆ ಹೆಚ್ಚು. ಈ ಅಗತ್ಯಗಳು ಪ್ರಪಂಚದ ಎಲ್ಲಾ ಕಡೆಯೂ ಒಂದೇ ತೆರನಾದವು. ಜನರಿಗೆ ತಿನ್ನಲು ಆಹಾರ (ಅಶನ) ಬೇಕು, ಹೊದೆಯಲು ಬಟ್ಟೆ (ವಸನ) ಬೇಕು, ಹಾಗೂ ತಲೆಯ ಮೇಲೊಂದು ಸೂರು (ಆಶ್ರಯ) ಇರಬೇಕು. ಹಾಗೆಯೆ ಉತ್ತಮ ಆರೋಗ್ಯ, ಸುರಕ್ಷಿತ ಪರಿಸರ, ಕಲಿಯಲು ಮತ್ತು ಬೆಳೆಯಲು ಅನುಕೂಲವಾದ ಅವಕಾಶಗಳು, ಅರ್ಥಪೂರ್ಣ ಉದ್ಯೋಗ, ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬೆರೆಯಲು ಅಗತ್ಯವಾದಷ್ಟು ಬಿಡುವು, ಮತ್ತು ಸಮುದಾಯದಲ್ಲಿ ತಾನೂ ಒಬ್ಬ ಎನ್ನುವ ಭಾವನೆ, ಇವೂ ಸಹ ಅವರಿಗೆ ಬೇಕು. ಹಾಗೆಯೆ, ಘನತೆ, ಶಾಂತಿ ಮತ್ತು ನ್ಯಾಯವೂ ಸಹ.</p>
<p>ಜನರಿಗೆ ಮೂಲಭೂತ ಅಗತ್ಯಗಳನ್ನು ಒದಗಿಸಲು ಪ್ರಯತ್ನಿಸುವುದರಿಂದ ಅಪಾರವಾದ ನೆಮ್ಮದಿ ಸಿಗುತ್ತದೆ. ಹಾಗಾಗಿ ಅದನ್ನು ಮಾಡಿ. ವಿಶ್ವಶಾಂತಿಗಾಗಿ ದುಡಿಯಿರಿ. ನ್ಯಾಯಕ್ಕಾಗಿ ಹೋರಾಡಿ. ಪರಿಸರವನ್ನು ರಕ್ಷಿಸಿ. ಹಸಿವು ಮತ್ತು ಕಾಯಿಲೆಗಳ ವಿರುದ್ಧ ಹೋರಾಡಿ. ಜನರಿಗೆ ಓದಲು ಕಲಿಸಿ. ಪುಟ್ಟ ಮಗುವಿಗೆ ಹಾಡೊಂದನ್ನು ಹಾಡಿ. ಹುಡುಗರಿಗೆ ಮಾರ್ಗದರ್ಶನ ಮಾಡಿ. ಪ್ರತಿನಿತ್ಯ ಏನಾದರೂ ಒಂದನ್ನು ಮಾಡಿ. ನಿಲ್ಲಿಸದೆ ಪ್ರತಿದಿನವೂ ಮಾಡುತ್ತಲೆ ಇರಿ.</p>
<p>ಫ್ರೆಂಚ್ ಕತೆಗಾರ ಜೀನ್ ಜಿಯೋನೊ ಬರೆದ &#8220;ಭರವಸೆಯನ್ನು ಬಿತ್ತಿ ಸಂತೋಷವನ್ನು ಬೆಳೆದ ಮನುಷ್ಯ&#8221; ಎಂಬ ಅದ್ಭುತವಾದ ಕತೆಯೊಂದಿದೆ. ಆ ಕತೆಯಲ್ಲಿ ಬರುವ ಮನುಷ್ಯ ಇಪ್ಪತ್ತನೆ ಶತಮಾನದ ಆದಿ ಭಾಗದಲ್ಲಿ ಆಗ್ನೇಯ ಫ್ರಾನ್ಸ್‌ನಲ್ಲಿ ವಾಸವಾಗಿದ್ದಾತ. ಅದಕ್ಕೆ ಮೊದಲು ಊರುಗಳ ಸಮೇತ ಸುಂದರ ಅರಣ್ಯ ಪ್ರದೇಶವಾಗಿದ್ದ, ಆದರೆ ಈಗ ಬಂಜರು ಬಿದ್ದಿದ್ದ ಜಾಗದಲ್ಲಿ ಆತನೊಬ್ಬನೇ ವಾಸವಾಗಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಪ್ರತಿದಿನವೂ ಆತ ತಾನೊಬ್ಬನೆ ಆ ಪ್ರದೇಶದಲ್ಲೆಲ್ಲ ಗಿಡಮರಗಳನ್ನು ನೆಡುತ್ತ, ಬೀಜಗಳನ್ನು ಬಿತ್ತುತ್ತ ಬಂದ. ವರ್ಷಗಳು ಉರುಳಿದವು. ದಶಕಗಳು ಕಳೆದವು. ಈತ ಮಾತ್ರ ಬೀಜವಾದ ಮೇಲೆ ಬೀಜ ಬಿತ್ತುತ್ತ ಬಂದ. ಗಿಡಮರಗಳು ಕಾಡಾಗಲು ಆರಂಭವಾಯಿತು. ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಮತ್ತಷ್ಟು ಗಿಡಗಳು ಬೆಳೆಯಲು ಬೆಳೆದ ಮರಗಳು ಸಹಾಯ ಮಾಡಿದವು. ಪಕ್ಷಿಗಳು ಗೂಡು ಕಟ್ಟಿಕೊಳ್ಳಲು ಮರಗಳ ಆಸರೆ ಸಿಕ್ಕಿತು. ಹಳ್ಳ ತೊರೆಗಳು ಹರಿಯಲು ಆರಂಭವಾದವು. ಮತ್ತೆ ಮರಳಿ ಬಂದ ಜನ ಅಲ್ಲೆಲ್ಲ ಮನೆಗಳನ್ನು ಕಟ್ಟಲು ಆರಂಭಿಸಿದರು. ತನ್ನ ಕೊನೆ ದಿನಗಳು ಸಮೀಪಿಸುವಷ್ಟರಲ್ಲಿ ಆ ಇಡೀ ಬಂಜರು ಭೂಮಿಯನ್ನು ಮಾರ್ಪಡಿಸಿ, ಆ ಪರಿಸರವನ್ನು ಮತ್ತೆ ಮೂಲಸ್ಥಿತಿಗೆ ಆ ಮನುಷ್ಯ ಮರಳಿಸುತ್ತಾನೆ.</p>
<p>ಸುಂದರವಾದ, ಅರ್ಥಪೂರ್ಣವಾದ ಬದುಕಿಗೆ ಈ ಕತೆ ಒಂದು ರೂಪಕ; ಅತ್ಯುತ್ತಮ ಉದಾಹರಣೆ. ಪರರಿಗೆ ಸಂತೋಷವನ್ನು ಬೆಳೆಯಲು ಪ್ರತಿದಿನವೂ ಕನಸನ್ನು ಬಿತ್ತಿ; ಭರವಸೆಯನ್ನು ನೆಡಿ. ತಮ್ಮ ಮಕ್ಕಳಿಗೆ ದಿನಪ್ರತಿದಿನ ಸಹಾಯ ಮಾಡುವ ಹೆತ್ತವರು ಮತ್ತು ಪೋಷಕರಿಗಂತೂ ಇದೊಂದು ವಿಶೇಷವಾದ ಉದಾಹರಣೆ. ಆ ಕೆಲಸ ಸರಳವಾದದ್ದು ಮತ್ತು ಸಾಮಾನ್ಯವಾದದ್ದು ಆಗಿರಬಹುದು. ಆದರೂ ಆದರ ಪರಿಣಾಮ ಬಹಳ ಗಂಭೀರವಾದದ್ದು ಮತ್ತು ದೀರ್ಘಕಾಲೀನ ವಾದದ್ದು.</p>
<p><span style="color: #0000aa;"><span style="color: #0000aa;"><strong>ಕೂಲಂಕಷವಾಗಿ ವಿಶ್ಲೇಷಿಸಿದಾಗ, ಯಾರು ಗುರುತರವಾದ ಪ್ರಭಾವ, ಪರಿಣಾಮ ಹೊಂದಿರುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ದೊರಕುತ್ತದೆ. ಸ್ಥಳೀಯ, ರಾಷ್ಟ್ರೀಯ, ಆಂತರರಾಷ್ಟ್ರೀಯ ನಾಯಕರು ಪ್ರಭಾವ ಹೊಂದಿರುತ್ತಾರೆ. ಆದರೆ ಇವರಲ್ಲಿನ ಬಹಳಷ್ಟು ಜನ ಕೆಲವೆ ಜನರ ಮೇಲೆ ದೊಡ್ಡ ಪ್ರಭಾವ ಬೀರುತ್ತಾರೆ ಎನ್ನುವುದಕ್ಕಿಂತ ಬಹುಸಂಖ್ಯೆಯ ಜನರ ಮೇಲೆ ಕಮ್ಮಿ ಎನ್ನುವಷ್ಟು ಪ್ರಮಾಣದ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಪೋಷಕರು, ಸಂಬಂಧಿಕರು, ಹಾಗೂ ಸ್ನೇಹಿತರು ಕೆಲವೆ ಎನ್ನಬಹುದಾದಷ್ಟು ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ, ದೊಡ್ಡದಾದ, ಗಂಭೀರವಾದ ಪ್ರಭಾವ ಬೀರುತ್ತಾರೆ.</strong></span></span><strong></strong></p>
<p>ಮಕ್ಕಳಿಗೆ ಏನಾಗುತ್ತದೆ ಎನ್ನುವುದಕ್ಕಿಂತ ಮುಖ್ಯವಾದದ್ದು ಬೇರೇನೂ ಇಲ್ಲ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಭರವಸೆಯಿದ್ದರೆ ಆಗ ಪ್ರತಿಯೊಂದರ ಬಗ್ಗೆಯೂ ಭರವಸೆ ಇಟ್ಟುಕೊಳ್ಳಬಹುದು. ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಭರವಸೆ ಇಲ್ಲದೆ ಹೋಗಿ ಬಿಟ್ಟರೆ ಯಾವುದರ ಬಗ್ಗೆಯೂ ಭರವಸೆ ಇಲ್ಲವಾಗಿಬಿಡುತ್ತದೆ. ಇವತ್ತಿನ ಮಕ್ಕಳು ನಾಳೆ ಯಾವ ತರಹದ ಮನುಷ್ಯರಾಗುತ್ತಾರೆ ಎನ್ನುವುದರ ಮೇಲೆ ವಿಶ್ವದ ಭವಿಷ್ಯ ನಿಂತಿರುತ್ತದೆ.</p>
<p>ಮಕ್ಕಳಿಗೆ ಸಾಕಷ್ಟು ಪ್ರೀತಿ ಮತ್ತು ಗಮನ ಬೇಕು ಎನ್ನುವುದು ನಮಗೆಲ್ಲ ಗೊತ್ತು. ಪುಟ್ಟ ಕಂದಮ್ಮಗಳಿಗೆ ಬಹಳ ಉತ್ತೇಜನ ಬೇಕು. ಬೆಳೆದ ಮಕ್ಕಳಿಗೆ ಮಾರ್ಗದರ್ಶನ ಮತ್ತು ಸ್ನೇಹ ಬೇಕು. ಇರುವ ಇಬ್ಬರು ಪೋಷಕರೂ ಕೆಲಸಕ್ಕೆ ಹೊರಗೆ ಹೋಗುವ, ಒಂಟಿ ಪೋಷಕರು ಮಕ್ಕಳನ್ನು ಬೆಳೆಸುವ ಕಡೆಗೆ ಸಮಾಜ ಬದಲಾಗುತ್ತಿರುವಾಗ, ಬಹಳಷ್ಟು ಮಕ್ಕಳಿಗೆ ಅವರಿಗೆ ಅಗತ್ಯವಾದಷ್ಟು ಉತ್ತೇಜನ, ಮಾರ್ಗದರ್ಶನ, ಮತ್ತು ಸ್ನೇಹ ಸಿಗುತ್ತಿಲ್ಲ. ಇವೆಲ್ಲವುಗಳ ನಕಾರಾತ್ಮಕ ಪರಿಣಾಮ ಗಂಭೀರವೂ, ದೀರ್ಘಕಾಲೀನವೂ ಆಗಿಬಿಡುವ ಸಂಭವ ಇರುತ್ತದೆ.</p>
<p>ಮೆದುಳಿನ ಬೆಳವಣಿಗೆಯ ಬಗ್ಗೆ ಕಳೆದ ಮುವ್ವತ್ತು ವರ್ಷಗಳಲ್ಲಿ ನಾವು ತಿಳಿದುಕೊಂಡಿರುವ ಜ್ಞಾನ ಅಗಾಧವಾದದ್ದು. ಮಗು ಹುಟ್ಟಿದಾಗ ಅದರ ಮೆದುಳಿನಲ್ಲಿನ ಕೋಟ್ಯಾಂತರ ನ್ಯೂರಾನ್‌ಗಳು ಪ್ರೊಗ್ರ್ಯಾಮ್ ಆಗಿರದೆ ಖಾಲಿ ಇರುತ್ತವೆ. ಬಾಹ್ಯ ಪ್ರಚೋದನೆಯಿಂದ, ಉದ್ದೀಪನೆಯಿಂದ ಮಾತ್ರ ಆ ನ್ಯೂರಾನ್‌ಗಳು ಮೆದುಳಿನ ಮಂಡಲದೊಂದಿಗೆ (ಸರ್ಕ್ಯೂಟ್) ಸಂಪರ್ಕ ಏರ್ಪಡಿಸಿಕೊಳ್ಳಬಲ್ಲವು. ಈ ಉದ್ದೀಪನೆಯ ವೈವಿಧ್ಯಶ್ರೀಮಂತಿಕೆಯೆ ಮಗುವಿನ ಮೆದುಳಿನ ರಚನೆ ಮತ್ತು ಸಾಮರ್ಥ್ಯಗಳನ್ನು ನಿರ್ಧರಿಸುತ್ತದೆ.</p>
<p>ಮಗುವಿನ ಬೆಳವಣಿಗೆಯಲ್ಲಿ ಸಕಾರಾತ್ಮಕ ವ್ಯತ್ಯಾಸಗಳನ್ನು ಉಂಟು ಮಾಡುವ ಕೆಲಸಗಳನ್ನೆ ನಾವೆಲ್ಲರೂ ಮಾಡಬೇಕಾದದ್ದು. ನಮ್ಮಲ್ಲಿನ ಪ್ರತಿಯೊಬ್ಬರೂ ಮಗುವೊಂದನ್ನು ಅಪ್ಪಿಕೊಳ್ಳಬಹುದು; ಅದರೊಂದಿಗೆ ಮಾತನಾಡಬಹುದು; ಅದಕ್ಕೆ ಲಾಲಿ ಹಾಡಬಹುದು; ಅದರ ಜೊತೆಗೆ ಆಟವಾಡಬಹುದು. ಮಗುವೊಂದು ವಿವಿಧಾಕೃತಿಯ, ವಿವಿಧ ಬಣ್ಣಗಳ, ವಿವಿಧ ತೆರನ ವಸ್ತುಗಳನ್ನು ಮುಟ್ಟಲು, ಅವನ್ನು ಅನ್ವೇಷಿಸಲು ನಾವೆಲ್ಲರೂ ಸಹಾಯ ಮಾಡಬಹುದು. ನಾವೆಲ್ಲರೂ ಮಗುವೊಂದಕ್ಕೆ ಸಂಗೀತ ನುಡಿಸಬಹುದು, ಅದರೊಂದಿಗೆ ಸಣ್ಣ ಸುತ್ತಾಟಕ್ಕೆ ಹೋಗಬಹುದು, ಅಥವ ಯಾವುದಾದರೂ ಚೆಂಡಾಟ ಆಡಬಹುದು. ಇದರರ್ಥ ಏನೆಂದರೆ, ನಮಗೆಲ್ಲರಿಗೂ ಮಾಡಲು ಗೊತ್ತಿರುವ ಸರಳವಾದ, ಪ್ರೇಮಮಯವಾದ ಕೆಲಸಗಳನ್ನು ಮಾಡುವ ಮೂಲಕ ನಾವು ಬದುಕುಗಳನ್ನೆ ಬದಲಾಯಿಸಬಹುದು.</p>
<p>ಹಾಗೆಯೆ, ಇದೆಲ್ಲವೂ ಚಿಕ್ಕ ಮಕ್ಕಳೊಂದಿಗೇ ಕೊನೆಯಾಗುವುದಿಲ್ಲ. ಚಿಕ್ಕ ವಯಸ್ಸಿನ ಹುಡುಗರನ್ನು ನಿಮಗೆ ಬೇಕಾದದ್ದು ಏನು ಎಂದು ಸಂಶೋಧಕರು ಕೇಳಿದರೆ, ಬಹಳಷ್ಟು ಹುಡುಗಹುಡುಗಿಯರು ತಮ್ಮ ಪೋಷಕರೊಂದಿಗೆ, ಪಾಲಕರೊಂದಿಗೆ, ಅಥವ ತಮ್ಮ ನೆಚ್ಚಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಹೇಳಿದರು. ಮೂರರಲ್ಲಿ ಎರಡರಷ್ಟು ಮಕ್ಕಳು ತಾವು ಗೌರವಿಸುವ ಮತ್ತು ನಂಬುವ ಹಿರಿಯರ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಇಚ್ಚೆ ತೋರಿದರು.</p>
<p>ವಯಸ್ಸಿನ ಆಧಾರದ ಮೇಲೆ ಪ್ರತ್ಯೇಕಿಸಲ್ಪಟ್ಟಿರುವ ಈಗಿನ ಸಮಾಜದಲ್ಲಿ ಹದಿಹರೆಯದವರ ಮತ್ತು ವಯಸ್ಕರ ನಡುವೆ ಸಾಕಷ್ಟು ಉತ್ತಮ ಸಂಬಂಧಗಳು ಏರ್ಪಡುತ್ತಿಲ್ಲ. ನಾವು ಅದನ್ನು ಬದಲಾಯಿಸಬಹುದು. ಪ್ರತಿಯೊಬ್ಬ ಹದಿವಯಸ್ಕಳಿಗೆ ತಾನು ಹೇಳುವುದನ್ನು ಕೇಳಿಸಿಕೊಳ್ಳುವ, ತನಗೆ ಕಲಿಸುವ, ತನ್ನನ್ನು ಉತ್ತೇಜಿಸುವ, ಹಾಗೂ ತನ್ನ ಸಾಧನೆಗಳನ್ನು ಪ್ರಶಂಸಿಸುವ ಆತ್ಮೀಯ ವಯಸ್ಕರೊಬ್ಬರ ಅವಶ್ಯಕತೆ ಇರುತ್ತದೆ. ನಾವು ಪ್ರತಿಯೊಬ್ಬರೂ ಮಾರ್ಗದರ್ಶಕರಾಗಬಹುದು. ಹಿತೈಷಿಗಳಾಗಬಹುದು. ಯುವಕ ಇಲ್ಲವೆ ಯುವತಿಯೊಬ್ಬಳು ಜೀವನದ ಗುಟ್ಟುಗಳನ್ನು ಕಲಿಯಲು, ಸಮಾಜ ಬಯಸುವ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು, ಹಾಗೂ ಪ್ರತಿರೋಧಶಕ್ತಿಯನ್ನು ಬೆಳೆಸುವ ಆರೋಗ್ಯಕರ ಮನೋಭಾವವನ್ನು ಕಲಿಯಲು ನಾವೆಲ್ಲರೂ ಅವರ ಜೊತೆ ವಾರಕ್ಕೆ ಒಂದೆರಡು ಗಂಟೆಗಳನ್ನು ಕಳೆಯಬಹುದು. ತಮ್ಮ ಸಮಯ, ವಿವೇಕ, ಜ್ಞಾನ, ಮುಂತಾದವುಗಳನ್ನು ನೀಡುವ ಹಿತೈಷಿಗಳು, ಮಾರ್ಗದರ್ಶಕರು, ಗುರುಗಳು, ಯುವಗುಂಪುಗಳೊಂದಿಗೆ ತೊಡಗಿಕೊಳ್ಳುವ ಹಿರಿಯರು, ಹಾಗೂ ವಯಸ್ಕರ ಶಿಕ್ಷಣದ ಕಾರ್ಯಕರ್ತರು ಗಣನೀಯ ಪರಿಣಾಮ ಉಂಟುಮಾಡುವವರಿಗೆ ಉದಾಹರಣೆಗಳು. ಇಂತಹವರ ಜೀವನವೆ ಯುವಕರಿಗೆ ಒಂದು ಪ್ರತ್ಯಕ್ಷ ಉದಾಹರಣೆಯಾಗಿರುತ್ತದೆ. ನಮ್ಮ ಹದಿಹರಯದವರಿಗೆ ಭರವಸೆ ಹುಟ್ಟಿಸುವ ಹಾಗೂ ಅವರು ಕೆಲವು ತಪ್ಪುಗಳನ್ನು ಮಾಡದಂತೆ ಕಾಪಾಡುವ ಹಿತೈಷಿ ಹಿರಿಯರು ನಾವಾಗಬಹುದು.</p>
<p><span style="color: #0000aa;"><span style="color: #0000aa;"><strong>ಈ ಅಸಂಗತಸತ್ಯದ ಜೀವನವನ್ನು ನೀವು ಜೀವಿಸಿದಾಗ, ಇತರರನ್ನು ಪ್ರೀತಿಸುವುದರ ಮತ್ತು ಅವರಿಗೆ ಸಹಾಯ ಮಾಡುವುದರ ಮೂಲಕ ಹಿರಿದಾದ ಅರ್ಥವನ್ನು ಕಂಡುಕೊಳ್ಳುತ್ತೀರಿ. ಇತರರೂ ಈ ಅರ್ಥವನ್ನು ಪಡೆದುಕೊಳ್ಳಲು ಅವರಿಗೆ ಸಹಾಯ ಮಾಡುವುದರ ಮೂಲಕವೂ ನೀವು ಈ ಆತ್ಮಾರ್ಥವನ್ನು ಪಡೆಯುತ್ತೀರಿ. ನೀವು ಏನು ಕಲಿತಿದ್ದೀರೊ ಅದನ್ನು ಇತರರೂ ಕಲಿತುಕೊಳ್ಳಲು ಸಹಾಯ ಮಾಡಿ. ಅವರು ನಿಮ್ಮ ತರಹವೇ ತಮ್ಮ ಸ್ವಂತ ಅಸಂಗತಸತ್ಯ ಜೀವನವನ್ನು ಕಂಡುಕೊಳ್ಳಲು ಮತ್ತು ಜೀವಿಸಲು ಸಾಧ್ಯವಾಗುವಂತಹ ಉದಾಹರಣೆ ನೀವಾಗಿ.</strong></span></span><strong></strong></p>
<p>ಹೀಗೆ ಮಾಡುವುದರಲ್ಲಿ ಅಪಾರವಾದ ಭರವಸೆಯಿದೆ. ಆಶಾಭಾವವಿದೆ. &#8220;ಯಶಸ್ಸಿನ&#8221; ಮೇಲೆ ಗಮನ ಹರಿಸುವುದಕ್ಕಿಂತ ಹೆಚ್ಚಿನ ಗಮನವನ್ನು ಜೀವನದ ಅರ್ಥಪೂರ್ಣತೆಯ ಮೇಲೆ ಹೆಚ್ಚು ಹೆಚ್ಚು ಜನರು ಹರಿಸಲು ತೊಡಗಿಕೊಂಡಾಗ ಈ ಪ್ರಪಂಚ ಅಸಂಬದ್ಧವೆನಿಸದೆ ಸುಸಂಬದ್ಧವಾಗುತ್ತ ಹೋಗುತ್ತದೆ. ಯಾರಿಗೆ ಹೆಸರು ಸಿಕ್ಕಿಬಿಡುತ್ತದೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಜನ ಸಹಾಯ ಮಾಡಲು ಮುಂದಾಗುತ್ತಾರೆ. ತಮಗಿಂತ ಮೇಲಿನ ಸ್ಥಾನಗಳಿಗೆ ಹೋಗಿಬಿಡುತ್ತಾರೆ ಎನ್ನುವುದರತ್ತ ಗಮನ ಹರಿಸದೆ ತಮ್ಮ ಸಂಘಸಂಸ್ಥೆಗಳಲ್ಲಿ ಪರಸ್ಪರ ಸಹಾಯ ಮಾಡುತ್ತ ಹೋಗುತ್ತಾರೆ. ತಾವು ಮಾಡುವ ಕೆಲಸಗಳಿಂದ ಅಧಿಕಾರ, ಆಸ್ತಿ, ಅಂತಸ್ತು ಬರದೆ ಇದ್ದರೂ, ತಮ್ಮ ಮೌಲ್ಯಗಳನ್ನು ಜೀವಿಸಿ, ತಮ್ಮ ಹೃದಯಕ್ಕೆ ಹತ್ತಿರವಾದದ್ದರ ಹಿಂದೆ ಹೋಗುತ್ತಾರೆ. ತಾವು ಏನು ಮಾಡಲು ಹುಟ್ಟಿದ್ದಾರೊ ಅದನ್ನು ಮಾಡಲು ತೊಡಗುತ್ತಾರೆ. ಯಾರ ಅಧಿಕಾರ ಹೆಚ್ಚು ಎನ್ನುವ ಸಂಕುಚಿತ ಹಿನ್ನೆಲೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಜನ-ಸಂಸ್ಥೆ-ಸಮುದಾಯ-ಸಮಾಜಕ್ಕೆ ಯಾವುದು ಅತ್ಯಂತ ಹಿತವಾದದ್ದೊ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜನ ಆಗ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ತಮ್ಮ ಆತ್ಮಾರ್ಥವನ್ನು ಹೆಚ್ಚಿಸಿಕೊಳ್ಳಲು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಇಂತಹ ವ್ಯಕ್ತಿಗಳು ಮುಂದೆ ಬಂದು ಅತ್ಯಗತ್ಯವಾದ ವಿಷಯಗಳತ್ತ ಗಮನ ಹರಿಸಿದಾಗ ಮತ್ತು ಪ್ರಶಂಸೆಗಳ ಬಗ್ಗೆ ಯೋಚಿಸದೆ ಸಮಸ್ಯೆಗಳನ್ನು ಪರಿಹರಿಸಲು ತೊಡಗಿಕೊಂಡಾಗ ಈ ಪ್ರಪಂಚದ ಹುಚ್ಚಾಟ ಬಹಳಷ್ಟು ಕಮ್ಮಿ ಆಗಿರುತ್ತದೆ.</p>
<p>ನೀವು ಏನೇ ಮಾಡಲು ನಿರ್ಧರಿಸಿದರೂ, ಒಂದಂತೂ ಖಂಡಿತ: ಈ ಅಸಂಗತಸತ್ಯ ಜೀವನವನ್ನು ನೀವು ಜೀವಿಸಿದಾಗ ನಿಮಗೆ ಈ ತಿಕ್ಕಲು ಹುಚ್ಚು ಪ್ರಪಂಚದಲ್ಲಿ ಆರ್ಥ ಮತ್ತು ಆತ್ಮಸಂತೋಷ ದೊರಕುತ್ತದೆ. ನೀವು ಗುರುತರವಾದ ಸಕಾರಾತ್ಮಕ ವ್ಯತ್ಯಾಸವನ್ನು ಉಂಟುಮಾಡುತ್ತೀರಿ. ಬದುಕುಗಳನ್ನು ಬದಲಾಯಿಸುತ್ತೀರಿ.</p>
<p style="text-align: center;"><strong><big><span style="color: #ff0055;">ಹಾಗೆ ನೀವು ಬದಲಾಯಿಸುವ ಬದುಕುಗಳಲ್ಲಿ ಒಂದು ಬದುಕು ನಿಮ್ಮದೇ ಆಗಿರುತ್ತದೆ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object classid="clsid:d27cdb6e-ae6d-11cf-96b8-444553540000" width="200" height="30" codebase="http://download.macromedia.com/pub/shockwave/cabs/flash/swflash.cab#version=6,0,40,0"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2012.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><embed id="audioplayer1" type="application/x-shockwave-flash" width="200" height="30" src="http://audio-pro-central.com/WordPress/wp-content/plugins/audio-player/player.swf" flashvars="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2012.mp3" menu="false" quality="high" bgcolor="#FFFFFF"></embed></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=64</wfw:commentRss>
		<slash:comments>5</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%2012.mp3" length="20316160" type="audio/mpeg" />
		</item>
		<item>
		<title>ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.</title>
		<link>http://www.ravikrishnareddy.com/anyway-kannada/?p=62</link>
		<comments>http://www.ravikrishnareddy.com/anyway-kannada/?p=62#comments</comments>
		<pubDate>Sun, 11 Jan 2009 20:04:19 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=62</guid>
		<description><![CDATA[&#8220;ಹೈ ನೂನ್&#8221; ಎಂಬ ಪ್ರಸಿದ್ಧ ಚಲನಚಿತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸುವ ಪೋಲಿಸ್ ಮುಖ್ಯಸ್ಥ ಕೇನ್ ಎನ್ನುವವನ ಪಾತ್ರದಲ್ಲಿ ಗ್ಯಾರಿ ಕೂಪರ್ ನಟಿಸಿದ್ದಾನೆ. ತನ್ನ ಪಟ್ಟಣಕ್ಕೆ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಮೇಲೆ, ಮದುವೆಯಾಗಲು ತೀರ್ಮಾನಿಸುವ ಕೇನ್, ಮದುವೆಯ ನಂತರ ಪೋಲಿಸ್ ಕೆಲಸವನ್ನು ಬಿಟ್ಟು ಬೇರೆ ಊರಿಗೆ ಹೋಗಲು ತೀರ್ಮಾನಿಸುತ್ತಾನೆ. ಅಂದು ಆತನ ಮದುವೆಯ ದಿನ. ಮದುವೆಯ ಸಮಾರಂಭ ಆದ ಕೆಲವೆ ನಿಮಿಷಗಳಲ್ಲಿ ಕೇನ್‌ಗೆ ಒಂದು ಸುದ್ದಿ ಬರುತ್ತದೆ. ಆತ ಹಲವಾರು ವರ್ಷಗಳ ಹಿಂದೆ ಬಂಧಿಸಿ ಜೈಲಿಗೆ [...]]]></description>
			<content:encoded><![CDATA[<p>&#8220;ಹೈ ನೂನ್&#8221; ಎಂಬ ಪ್ರಸಿದ್ಧ ಚಲನಚಿತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸುವ ಪೋಲಿಸ್ ಮುಖ್ಯಸ್ಥ ಕೇನ್ ಎನ್ನುವವನ ಪಾತ್ರದಲ್ಲಿ ಗ್ಯಾರಿ ಕೂಪರ್ ನಟಿಸಿದ್ದಾನೆ. ತನ್ನ ಪಟ್ಟಣಕ್ಕೆ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಮೇಲೆ, ಮದುವೆಯಾಗಲು ತೀರ್ಮಾನಿಸುವ ಕೇನ್, ಮದುವೆಯ ನಂತರ ಪೋಲಿಸ್ ಕೆಲಸವನ್ನು ಬಿಟ್ಟು ಬೇರೆ ಊರಿಗೆ ಹೋಗಲು ತೀರ್ಮಾನಿಸುತ್ತಾನೆ. ಅಂದು ಆತನ ಮದುವೆಯ ದಿನ. ಮದುವೆಯ ಸಮಾರಂಭ ಆದ ಕೆಲವೆ ನಿಮಿಷಗಳಲ್ಲಿ ಕೇನ್‌ಗೆ ಒಂದು ಸುದ್ದಿ ಬರುತ್ತದೆ. ಆತ ಹಲವಾರು ವರ್ಷಗಳ ಹಿಂದೆ ಬಂಧಿಸಿ ಜೈಲಿಗೆ ತಳ್ಳಿದ್ದ ರೌಡಿಯೊಬ್ಬ ಈಗ ಜೈಲಿನಿಂದ ಬಿಡುಗಡೆಯಾಗಿದ್ದು, ಸೇಡು ತೀರಿಸಿಕೊಳ್ಳಲು ಆತ ಇನ್ನು ಕೇವಲ ಎರಡು ಗಂಟೆಗಳಲ್ಲಿ ನಗರಕ್ಕೆ ಬರಲಿದ್ದಾನೆ ಎನ್ನುವುದೇ ಆ ಸುದ್ದಿ. ಆ ಗೂಂಡಾನ ಮೂವರು ಚೇಲಾಗಳು ರೈಲು ಸ್ಟೇಷನ್‌ನಲ್ಲಿ ಆತ ಬಂದಿಳಿಯುವುದನ್ನೆ ಕಾಯುತ್ತಿರುತ್ತಾರೆ. ಆ ಗೂಂಡಾ ರೈಲಿನಿಂದ ಇಳಿದ ತಕ್ಷಣ ಆ ಮೂವರೂ ಅವನ ಜೊತೆ ಸೇರಿಕೊಂಡು ಕೇನ್‌ನನ್ನು ಕೊಲ್ಲಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬರಲಿದ್ದಾರೆ.</p>
<p>ಇದನ್ನು ಕೇಳಿದ ಕೇನ್, ಊರನ್ನು ಬಿಟ್ಟು ಓಡಿಹೋಗುವ ಬದಲಿಗೆ ಅವರನ್ನು ಎದುರಿಸಿ ಹೋರಾಡಲು ತೀರ್ಮಾನಿಸುತ್ತಾನೆ. ಕಳಚಿದ್ದ ತನ್ನ ಪೋಲಿಸ್ ಬ್ಯಾಡ್ಜ್ ಅನ್ನು ಮತ್ತೆ ಧರಿಸಿ, ಹೋರಾಟದಲ್ಲಿ ತನಗೆ ಹೆಗಲು ನೀಡುವಂತೆ ಪಟ್ಟಣದ ನಾಗರಿಕರನ್ನು ಕೇಳಿಕೊಳ್ಳುತ್ತಾನೆ. ಆದರೆ ಪಟ್ಟಣದ ನಾಗರಿಕರೆಲ್ಲ ನಿರಾಕರಿಸಿಬಿಡುತ್ತಾರೆ. ಕೊನೆಗೆ, ಆ ನಾಲ್ಕೂ ಜನರನ್ನು ಕೇನ್ ಏಕಾಂಗಿಯಾಗಿ ಎದುರಿಸುವಂತಾಗಿ ಬಿಡುತ್ತದೆ.</p>
<p>ಕೇನ್‌ನನ್ನು ಪಟ್ಟಣದ ಜನ ಗೌರವಿಸುತ್ತಿದ್ದರು. ತಮ್ಮೂರಿಗೆ ಶಾಂತಿಯನ್ನು ಮರಳಿಸಿದ, ಅದನ್ನು ಹಲವಾರು ವರ್ಷಗಳ ಕಾಲ ಕಾಪಾಡಿದ ಕೇನ್‌ನ ಬಗ್ಗೆ ಅವರಲ್ಲಿ ಬಹಳಷ್ಟು ಜನ ಕೃತಜ್ಞರೂ ಆಗಿದ್ದರು. ಆದರೆ ಈಗ, ಆತನಿಗೆ ಅವರ ಸಹಾಯ ತೀರ ಅಗತ್ಯವಾಗಿರುವ ಸಮಯದಲ್ಲಿ ಅವನನ್ನು ಒಂಟಿ ಮಾಡಿಬಿಡುತ್ತಾರೆ. ಆತ ಆ ಪಟ್ಟಣಕ್ಕೆ ತನ್ನ ಕೈಲಾದುದನ್ನೆಲ್ಲ ಮಾಡಿದ್ದ. ಈಗಲೂ ಆತ ಅಲ್ಲಿಯೇ ಉಳಿದ ಮತ್ತು ತಾನು ಮಾಡಲೇ ಬೇಕಾಗಿದ್ದ ಹೋರಾಟವನ್ನು ಮಾಡಿದ.</p>
<p>ನೀವು ನಿಮ್ಮ ಕೈಲಾದುದನ್ನೆಲ್ಲ, ನಿಮ್ಮ ಅತ್ಯುತ್ತಮ ಪರಿಶ್ರಮವನ್ನೆಲ್ಲ, ನಿಮ್ಮ ಒಳ್ಳೆಯತನವನ್ನೆಲ್ಲ ಧಾರೆಯೆರೆದಿದ್ದರೂ ಅದರಿಂದ ಏನು ಸಿಗಬಹುದು ಎಂದು ಹೇಳುವುದು ಕಷ್ಟ. ನೀವು ಮಾಡಿದ ಕೆಲಸವನ್ನು ಬಹುಶಃ ಜನ ಪ್ರಶಂಸಿಸಬಹುದು. ನಿಮಗೆ ಬೆಂಬಲ ಕೊಡಬಹುದು. ಆದರೆ, ನೀವು ಕೊಡುವ ನಿಮ್ಮೆಲ್ಲ ಒಳ್ಳೆಯತನ ಕೆಲವೊಮ್ಮೆ ಜನರಲ್ಲಿ ಹೊಟ್ಟೆಕಿಚ್ಚು ಮತ್ತು ವೈರವನ್ನು ಬೆಳೆಸಬಹುದು. ಇದನ್ನೆಲ್ಲ ನೀವು ಸ್ವಾರ್ಥದ ದುರುದ್ದೇಶ ಇಟ್ಟುಕೊಂಡು ಮಾಡುತ್ತಿದ್ದೀರಿ ಎಂದು ಕೆಲವರು ಅನ್ನಬಹುದು; ನಿಮಗೆ ನಿಜವಾದ ಶತ್ರುಗಳೂ, ಖೊಟ್ಟಿ ಸ್ನೇಹಿತರೂ ಹುಟ್ಟಬಹುದು; ಕೀಳು ಮನಸ್ಸಿನ ಜನ ನಿಮ್ಮನ್ನು ಹೊಡೆದುರುಳಿಸಲೂಬಹುದು; ನೀವು ವರ್ಷಗಟ್ಟಲೆ ಕಟ್ಟಿದ್ದು ನಿಮ್ಮ ಕಣ್ಣ ಮುಂದೆಯೆ ನಾಶವಾಗುವುದನ್ನು ಕಾಣಬೇಕಾಗಿ ಬರಬಹುದು; ನಿಮ್ಮಿಂದ ಸಹಾಯ ಪಡೆದ ಜನರೆ ನಿಮ್ಮ ಮೇಲೆ ಹಲ್ಲೆ ಮಾಡಬಹುದು; ಒಳ್ಳೆಯದಕ್ಕಾಗಿ ಮಾಡಬೇಕಾಗಿರುವ ಹೋರಾಟವನ್ನು ನೀವೊಬ್ಬರೆ ಏಕಾಂಗಿಯಾಗಿ ಮಾಡಬೇಕಾಗಿ ಬರಬಹುದು.</p>
<p><span style="color: #000080;"><strong>ನೀವು ನಿಮ್ಮದೆಲ್ಲವನ್ನೂ ಸಮಾಜಕ್ಕೆ ಕೊಟ್ಟಿದ್ದರೂ ಅದಕ್ಕೆ ನೀವು ತೆರಬೇಕಾದ ಬೆಲೆ ದುಬಾರಿ ಆಗಿರಬಹುದು. ಆದರೆ ಅದಕ್ಕಿಂತ ಹೆಚ್ಚಿನ ದುಬಾರಿ ಯಾವುದೆಂದರೆ, ನಿಮ್ಮಲ್ಲಿನ ಶ್ರೇಷ್ಠವಾದುದನ್ನೆಲ್ಲ, ನಿಮ್ಮ ಕೈಲಾದುದನ್ನೆಲ್ಲ ಮಾಡದೆ ಹೋಗಿ ಬಿಡುವುದು. ನೀವು ನಿಮ್ಮಿಂದ ಸಾಧ್ಯವಾದದ್ದನ್ನೆಲ್ಲ ನೀಡದೆ ಇದ್ದಲ್ಲಿ, ನೀವು ಏನು ಆಗಬೇಕಾಗಿದೆಯೊ ಅದು ನೀವಾಗಿಲ್ಲ.</p>
<p>ನೀವು ವಿಶಿಷ್ಟವಾದವರು, ಅನನ್ಯವಾದವರು ಎನ್ನುವುದನ್ನು ಎಂದೂ ಮರೆಯಬೇಡಿ. ನೀವು ವಂಶವಾಹಿನಿಗಳ ಸಹಿತವಾಗಿ ಜೈವಿಕವಾಗಿಯೂ ಅನನ್ಯರು. ನಿಮ್ಮ ಪ್ರತಿಭೆ ಮತ್ತು ಅನುಭವಗಳ ಸಂಯೋಗವೂ ವಿಶಿಷ್ಟವಾದದ್ದು. ಇದರ ಅರ್ಥ ಏನೆಂದರೆ, ವಿಶಿಷ್ಟವಾದ, ವಿಶೇಷವಾದ ಏನೋ ಒಂದನ್ನು ನೀವು ಈ ಜಗತ್ತಿಗೆ ಕೊಡಬಹುದಾಗಿದೆ ಎಂದು. ನಿಮ್ಮ ಕೈಯಲ್ಲಿ ಏನೆಲ್ಲ ಸಾಧ್ಯವೊ ಅದನ್ನೆಲ್ಲ ನೀಡಿದಾಗ ಮಾತ್ರ ನಿಮ್ಮ ಪಾಲಿನ ಕರ್ತವ್ಯವನ್ನು ನೀವು ಮಾಡಿದಂತಾಗುತ್ತದೆ.</strong></span></p>
<p>ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ತನ್ನ ಕೈಲಾದುದನ್ನು, ತನ್ನೆಲ್ಲ ಒಳ್ಳೆಯದನ್ನು ಯಾವ ತರಹದ ಮನುಷ್ಯ ತಾನೆ ಕೊಡದೆ ಇರಬಲ್ಲ? ಯಾಕೆ ತಾನೆ ಯಾರಾದರೂ ಹಾಗೆ ಮಾಡಲು ಹಿಂಜರಿಯುತ್ತಾರೆ? ಯಾರು ತಾನೆ ಯಾಕಾದರೂ ಎರಡನೆ ದರ್ಜೆಯ ಕೆಲಸ ಮಾಡಲು ಬಯಸುತ್ತಾರೆ?</p>
<p>ಯಾವ ಸಮಯದಲ್ಲಿ ಏನನ್ನು ಮಾಡಬೇಕೆಂಬ ಸಮಯೋಚಿತ ಜಾಣ್ಮೆ ಮತ್ತು ತಂತ್ರ ಬಹಳ ಮುಖ್ಯವಾದದ್ದು ಎನ್ನುವುದೇನೊ ನಿಜ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಒಳ್ಳೆಯ ಅವಕಾಶಕ್ಕಾಗಿ ನೀವು ಎದುರು ನೋಡುತ್ತಿರಬಹುದು, ಅಥವ ಅಂತಹ ಸದವಕಾಶವನ್ನು ನೀವೆ ಸೃಷ್ಟಿಸಿಕೊಳ್ಳಲೂ ಬಹುದು. ಆದರೆ, ಭವಿಷ್ಯದಲ್ಲಿ ಇನ್ನೂ ಚೆನ್ನಾಗಿ ಕಾರ್ಯ ನಿರ್ವಹಿಸಲು ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರುವಾಗ, ಈ ಕ್ಷಣದಲ್ಲಿ ಮಾಡಬೇಕಾದದ್ದು ಏನೋ ಒಂದು ಇರುತ್ತದೆ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡುವುದೆಂದರೆ ಯಾವತ್ತೊ ಭವಿಷ್ಯದಲ್ಲಿ ನೀಡಬಹುದಾದದ್ದು ಅಲ್ಲ. ಬದಲಿಗೆ ಪ್ರತಿದಿನ ಮಾಡಬೇಕಿರುವುದು. ನೀವು ಈಗಾಗಲೆ ವಿಶಿಷ್ಟವಾದವರಾಗಿದ್ದೀರಿ. ಕೊಡಲು ಈಗಾಗಲೆ ನಿಮ್ಮ ಬಳಿ ಏನೋ ಒಂದು ವಿಶಿಷ್ಟವಾದದ್ದು ಇದೆ.</p>
<p><span style="color: #000080;"><strong>ನೀವು ನಿಮ್ಮೆಲ್ಲ ಶ್ರೇಷ್ಠತೆಯನ್ನು, ನಿಮ್ಮೆಲ್ಲ ಒಳ್ಳೆಯದನ್ನು ಕೊಡದೆ ಇದ್ದ ಪಕ್ಷದಲ್ಲಿ, ಯಾರಿಗಾಗಿ, ಇನ್ಯಾವ ಪ್ರಪಂಚಕ್ಕಾಗಿ ಅದನ್ನು ಉಳಿಸಿಕೊಂಡಿದ್ದೀರಾ?</strong></span></p>
<p>ನಿಮಗೆ ಸಿಕ್ಕಿರುವ ಈಗಿನ ಜೀವನದಲ್ಲಿ ಏನೆಲ್ಲ ಸಾಧ್ಯವೊ ಅದನ್ನೆಲ್ಲ ಮಾಡುವುದೆ ನಿಮ್ಮ ಕೆಲಸ. ನೀವು ಮಾಡುವುದಕ್ಕೆ ಪ್ರತಿಯಾಗಿ ಪ್ರಪಂಚ ನಿಮಗೇನು ಮಾಡುತ್ತದೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಮಿಕ್ಕದ್ದೆಲ್ಲ ಹೇಗೇ ಇರಲಿ, ನೀವು ಪ್ರಪಂಚಕ್ಕೆ ನಿಮ್ಮೆಲ್ಲ ಒಳ್ಳೆಯತನವನ್ನು ಹಾಗೂ ನಿಮ್ಮಿಂದ ಸಾಧ್ಯವಾದುದನ್ನು ಮಾಡುವುದರಿಂದ ನಿಮಗೆ ಈ ಜೀವನದ ಅರ್ಥ ಮತ್ತು ಆತ್ಮಾರ್ಥ ದೊರಕುತ್ತದೆ.</p>
<p style="text-align: center;"><strong><big>ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.<br />
<span style="color: #00e055;">ಆದ್ರೂ, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2011.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2011.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=62</wfw:commentRss>
		<slash:comments>1</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%2011.mp3" length="5191680" type="audio/mpeg" />
		</item>
		<item>
		<title>ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.</title>
		<link>http://www.ravikrishnareddy.com/anyway-kannada/?p=59</link>
		<comments>http://www.ravikrishnareddy.com/anyway-kannada/?p=59#comments</comments>
		<pubDate>Wed, 07 Jan 2009 20:31:06 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=59</guid>
		<description><![CDATA[ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬಹಳ ವಯಸ್ಸಾಗಿದ್ದ ಹಿರಿಯರೊಬ್ಬರಿಗೆ ಡ್ರೈವರ್ ಆಗಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದೆ. ಅವರು ಜೀವನದಲ್ಲಿ ಸಾಧನೆ ಮಾಡಿದ್ದ ದೊಡ್ಡ ಮನುಷ್ಯರಾಗಿದ್ದರು. ಒಂದು ದೊಡ್ಡ ಉದ್ದಿಮೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹಳ ಬುದ್ಧಿವಂತರೂ ಆಗಿದ್ದ ಅವರು ಆ ಮುಪ್ಪಿನಲ್ಲಿಯೂ ತಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಿದ್ದರಾದರೂ ಅಷ್ಟೇನೂ ಚೆನ್ನಾಗಿ ಕೆಲಸ ಮಾಡುತ್ತಿಲ್ಲದ ದೇಹದಲ್ಲಿ ಬಂಧಿಯಾಗಿಬಿಟ್ಟಿದ್ದರು. ಅವರಿಗೆ ನಡೆಯಲು ಬಹಳ ಕಷ್ಟವಾಗುತ್ತಿತ್ತು. ಮೆಟ್ಟಲುಗಳನ್ನು ಹತ್ತಲು ಆಗುತ್ತಲೆ ಇರಲಿಲ್ಲ. ಅನ್ನನಾಳದ ತೊಂದರೆಯಿಂದಾಗಿ ಊಟತಿಂಡಿ ತಿನ್ನಲು ಬಹಳ ತ್ರಾಸವಾಗುತ್ತಿತ್ತು. ತಿನ್ನುವಾಗ [...]]]></description>
			<content:encoded><![CDATA[<p>ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬಹಳ ವಯಸ್ಸಾಗಿದ್ದ ಹಿರಿಯರೊಬ್ಬರಿಗೆ ಡ್ರೈವರ್ ಆಗಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದೆ. ಅವರು ಜೀವನದಲ್ಲಿ ಸಾಧನೆ ಮಾಡಿದ್ದ ದೊಡ್ಡ ಮನುಷ್ಯರಾಗಿದ್ದರು. ಒಂದು ದೊಡ್ಡ ಉದ್ದಿಮೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹಳ ಬುದ್ಧಿವಂತರೂ ಆಗಿದ್ದ ಅವರು ಆ ಮುಪ್ಪಿನಲ್ಲಿಯೂ ತಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಿದ್ದರಾದರೂ ಅಷ್ಟೇನೂ ಚೆನ್ನಾಗಿ ಕೆಲಸ ಮಾಡುತ್ತಿಲ್ಲದ ದೇಹದಲ್ಲಿ ಬಂಧಿಯಾಗಿಬಿಟ್ಟಿದ್ದರು. ಅವರಿಗೆ ನಡೆಯಲು ಬಹಳ ಕಷ್ಟವಾಗುತ್ತಿತ್ತು. ಮೆಟ್ಟಲುಗಳನ್ನು ಹತ್ತಲು ಆಗುತ್ತಲೆ ಇರಲಿಲ್ಲ. ಅನ್ನನಾಳದ ತೊಂದರೆಯಿಂದಾಗಿ ಊಟತಿಂಡಿ ತಿನ್ನಲು ಬಹಳ ತ್ರಾಸವಾಗುತ್ತಿತ್ತು. ತಿನ್ನುವಾಗ ಆಗಾಗ್ಗೆ ವಾಂತಿಯಾಗಿಬಿಡುತ್ತಿತ್ತು. ಮುಖಕ್ಷೌರ ಮಾಡಿಕೊಳ್ಳುವುದಾಗಲಿ, ಸ್ನಾನ ಮಾಡುವುದಾಗಲಿ ಪ್ರಯಾಸವಾಗಿದ್ದರಿಂದ ವೇಷಭೂಷಣಗಳಲ್ಲಿ ಒಪ್ಪಓರಣವಿರಲಿಲ್ಲ. ಗಲೀಜಾಗಿ, ಅವಲಕ್ಷಣವಾಗಿ ಕಾಣಿಸುತ್ತಿದ್ದರು. ಆಗಾಗ್ಗೆ ಗಬ್ಬೂ ಹೊಡೆಯುತ್ತಿದ್ದರು.</p>
<p>ಅವರನ್ನು ಪಾರ್ಕಿಗೆ, ಹೋಟೆಲಿಗೆ, ಅಥವ ಅವರು ಇಷ್ಟಪಟ್ಟ ಜಾಗಕ್ಕೆ ಕರೆದುಕೊಂಡು ಹೋಗುವುದು ನನ್ನ ಕೆಲಸವಾಗಿತ್ತು. ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಿಲ್ಲದ, ಸಲೀಸಾಗಿ ನಡೆದು ಹೋಗಬಹುದಾದ ದಾರಿಯಲ್ಲಿ ಅವರನ್ನು ಕರೆದುಕೊಂಡು ಹೋಗುವುದು ನನ್ನ ಕರ್ತವ್ಯವಾಗಿತ್ತು. ಹಾಗಾಗಿ, ಆ ಸಮಯದಲ್ಲಿ ಮೆಟ್ಟಿಲು, ಪಾದಚಾರಿ ರಸ್ತೆಯಲ್ಲಿಯ ಏರಿಳಿತಗಳು, ಎಲಿವೇಟರ್‌ಗಳ ಮೂಲಕ ಪ್ರಪಂಚವನ್ನು ನೋಡಲು ಕಲಿತೆ. ಅವರು ಕಾರಿನಿಂದ ಇಳಿಯಲು, ಹತ್ತಲು ಸಹಾಯ ಮಾಡುತ್ತಿದ್ದೆ. ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದೆ. ಊಟ ಮಾಡುತ್ತ ಮೈಮೇಲೆಲ್ಲ ಚೆಲ್ಲಿಕೊಳ್ಳುತ್ತಿದ್ದರಿಂದ ಆ ಸಮಯದಲ್ಲಿ ಅವರ ಅಂಗಿ ಮತ್ತು ಪ್ಯಾಂಟ್ ಒರೆಸಲು ಹಾಗೂ ವಾಂತಿ ಮಾಡಿಕೊಂಡಾಗ ಟೇಬಲ್ ಒರೆಸಲು ಸದಾ ಸಿದ್ಧನಾಗಿ ಇರುತ್ತಿದ್ದೆ. ಪ್ರತಿ ಏರುತಗ್ಗಿನಲ್ಲೂ, ಪ್ರತಿ ಹೆಜ್ಜೆಗೂ ಅವರಿಗೆ ಸಹಾಯ ಮಾಡುತ್ತಿದ್ದೆ.</p>
<p>ಇದೆಲ್ಲದರಿಂದಾಗಿ ನಾವು ನಿಜಕ್ಕೂ ಸ್ನೇಹಿತರಂತೆ ಇರಬೇಕಿತ್ತು. ನನಗೆ ಅವರು ಇಷ್ಟವಾಗುತ್ತಿದ್ದರು. ಅವರ ಅನುಭವಗಳನ್ನು ಕೇಳಲು ಇಷ್ಟವಾಗುತ್ತಿತ್ತು. ಅವರ ಸಾಧನೆಗಳಿಂದ ನಾನು ನಿಜಕ್ಕೂ ಪ್ರಭಾವಿತನಾಗಿದ್ದೆ. ಹೀಗಿದ್ದರೂ, ನನ್ನ ಬಗ್ಗೆ ಅವರು ಯಾವಾಗಲೂ ಅಸಮಧಾನದಿಂದ ಸಿಡುಕುತ್ತಿದ್ದದ್ದನ್ನು ಮಾತ್ರ ಒಪ್ಪಿಕೊಳ್ಳಲು ಕಷ್ಟವಾಗುತ್ತಿತ್ತು. ಅವರು ಕಾರಿನಿಂದ ಇಳಿಯುವಾಗ ಸರಿಯಾಗಿ ಸಹಾಯ ಮಾಡಲಿಲ್ಲ; ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಬಿಟ್ಟಿದ್ದೆ; ಕೈಯನ್ನು ಬಹಳ ಸಡಿಲವಾಗಿ ಹಿಡಿದುಕೊಂಡಿದ್ದೆ; ಊಟಕ್ಕೆ ಕೆಟ್ಟ ಹೋಟೆಲ್ ಅನ್ನು ಆಯ್ಕೆ ಮಾಡಿರುವೆ; ಕಿಟಕಿಯ ಹತ್ತಿರದ, ಚಳಿಯಾಗುತ್ತಿರುವ ಟೇಬಲ್ ಹಿಡಿದಿದ್ದೇವೆ; ಅವರು ಬಯಸಿದ್ದ ತಿಂಡಿ ಅಲ್ಲಿ ಸಿಗಲಿಲ್ಲ; ಹೀಗೆ ದೂರುಗಳೋ ದೂರುಗಳು. ನಾನು ಅವರಿಗೆ ಸಹಾಯ ಮಾಡಲು ಆರಂಭಿಸಿ ವಾರಗಳು ಉರುಳಿದವು. ಅನೇಕ ಕಡೆ ಹೋಗಿ ಬರುತ್ತಲೆ ಇದ್ದೇವೆ. ಆದರೆ ಅವರ ಪ್ರಕಾರ ಯಾವಾಗಲೂ ನಾನು ತಪ್ಪನ್ನೆ ಮಾಡುತ್ತಿದ್ದೇನೆ. ಒಮ್ಮೊಮ್ಮೆ ನನಗೆ ವಿಪರೀತ ಕೋಪ ಬಂದು ಬಿಡುತ್ತಿತ್ತು. ಅಂತಹ ಸಮಯದಲ್ಲೆಲ್ಲ &#8220;ಛೇ, ನಾನು ಏನೊ ಸಹಾಯ ಮಾಡಲು ಎಂದು ಬಂದರೆ,&#8221; ಎಂದು ಅರಚಲು ಬಾಯಿಗೆ ಬಂದು ಬಿಡುತ್ತಿತ್ತು. ಆದರೂ ನಾನು ಬಾಯಿ ಮುಚ್ಚಿಕೊಂಡು ಇರುತ್ತಿದ್ದೆ.</p>
<p>ಒಂದು ದಿನ ಊಟಕ್ಕೆಂದು ಹೊರಗೆ ಹೋಗಲು ಅವರು ಸಿದ್ಧವಾಗುತ್ತಿದ್ದರು. ನಾನು ಕಾಯುತ್ತ ನಿಂತಿದ್ದೆ. ಆಗ, ಅವರಿರುವ ಪರಿಸ್ಥಿತಿಯಲ್ಲಿ ಯಾರೇ ಇರಲಿ, ಅವರಿಗೆ ತಮ್ಮ ಬಗ್ಗೆ ಏನನ್ನಿಸುತ್ತದೆ ಎಂದು ಯೋಚಿಸಲು ಪ್ರಾರಂಭಿಸಿದೆ. ತನ್ನ ಕೆಲಸವನ್ನೂ ಮಾಡಿಕೊಳ್ಳಲಾಗದ ಸ್ಥಿತಿ ಒಬ್ಬ ಮನುಷ್ಯನಿಗೆ ಆಗಿಬಿಟ್ಟಾಗ ಆತನಿಗೆ ಹೇಗೆ ಅನ್ನಿಸುತ್ತದೆ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಆಗ ನನಗೆ ಅರ್ಥವಾದದ್ದು ಏನೆಂದರೆ, ಆ ಮುದುಕಪ್ಪನಿಗೆ ನನ್ನ ಬಗ್ಗೆ ಕಿರಿಕಿರಿ ಆಗುತ್ತಿಲ್ಲ. ಬದಲಿಗೆ, ಕಾರಿನಿಂದ ಸ್ವತಃ ತಾವೆ ಇಳಿಯಲಾಗದ್ದಕ್ಕೆ, ಯಾರ ಆಸರೆಯೂ ಇಲ್ಲದೆ ನಡೆಯಲಾಗದ್ದಕ್ಕೆ, ಮೆಟ್ಟಲುಗಳನ್ನು ಹತ್ತಲಾಗದ್ದಕ್ಕೆ, ವಾಂತಿ ಮಾಡದೆ ತಿನ್ನಲು ಆಗದೆ ಇರುವುದಕ್ಕೆ, ಅವರಿಗೆ ತಮ್ಮ ಬಗ್ಗೆಯೇ ಕಿರಿಕಿರಿ ಆಗುತ್ತಿದೆ. ಅವರಿಗೆ ನನ್ನ ಮೇಲೆ ಕೋಪ ಇಲ್ಲ. ಬದಲಿಗೆ ತಮ್ಮ ಜೀವನದ ಬಗ್ಗೆಯೇ ಕೋಪ ಇದೆ. ಇದು ಅರ್ಥವಾದ ಮೇಲೆ ನನಗೆ ಎಲ್ಲವೂ ಸುಲಭವಾಗಿಬಿಟ್ಟಿತು. ಆಮೇಲೆಯೂ ಅವರು ಗೊಣಗುವುದನ್ನು, ರೇಗುವುದನ್ನು ನಿಲ್ಲಿಸಲಿಲ್ಲ, ಆದರೆ ಅವರ ಗೊಣಗಾಟ ನನಗೆ ಅಸಮಧಾನ ಉಂಟು ಮಾಡುತ್ತಿರಲಿಲ್ಲ.</p>
<p>ಯಾವುದೊ ಒಂದು ವಿಷಯಕ್ಕೆ ಒಂದಲ್ಲ ಒಂದು ಸಮಯದಲ್ಲಿ ನಮಗೆಲ್ಲರಿಗೂ ಸಹಾಯ ಬೇಕಿರುತ್ತದೆ. ಹೊಸದನ್ನು ಕಲಿಯಲು, ಸಮಸ್ಯೆಗಳನ್ನು ನಿಭಾಯಿಸಲು, ಸಮಯ ಹೊಂದಿಸಿಕೊಳ್ಳಲು, ಹಣದ ತಾಪತ್ರಯಗಳಿಗೆ, ಜೀವನದಲ್ಲಿನ ಬೇರೆಬೇರೆ ತೊಂದರೆಗಳಿಗೆ ಅನೇಕ ರೀತಿಯಲ್ಲಿ ಅನೇಕರಿಂದ ಸಹಾಯ ಬೇಕಾಗಿರುತ್ತದೆ. ನಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು, ನೈತಿಕ ದ್ವಂದ್ವಗಳನ್ನು ಪರಿಹರಿಸಿಕೊಳ್ಳಲು ಇನ್ನೊಬ್ಬರ ಸಹಾಯ ಬೇಕೇ ಬೇಕು. ಯಾರಿಗೂ ಎಲ್ಲವೂ ಗೊತ್ತಿರುವುದಿಲ್ಲ ಹಾಗೂ ಎಲ್ಲವನ್ನೂ ಒಬ್ಬರೇ ಮಾಡಲು ಸಾಧ್ಯವೂ ಇಲ್ಲ. ಯಾವಾಗ ನಮಗೆ ಸಹಾಯ ಬೇಕು ಮತ್ತು ಅದು ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳುವುದು ನಮ್ಮ ಉಳಿವಿಗೆ, ಅಸ್ತಿತ್ವಕ್ಕೆ, ಸಂತೋಷಕ್ಕೆ ಅತ್ಯವಶ್ಯಕ.</p>
<p><span style="color: #000080;"><strong>ಸಹಾಯದ ಅಗತ್ಯ ಇದ್ದರೂ ಕೆಲವರು ತಮಗೆ ಅದರ ಅಗತ್ಯ ಇಲ್ಲ ಎಂದು ನಿರಾಕರಿಸುತ್ತಾರೆ. ಅವರು ತಮ್ಮ ಅಸಾಮರ್ಥ್ಯಗಳನ್ನು ಎದುರಿಸಲು ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ ತಮಗೆ ಸಹಾಯದ ಅವಶ್ಯಕತೆ ಇದೆ ಎಂದು ಗೊತ್ತಿರುತ್ತದೆ, ಆದರೆ ಯಾರಾದರು ಸಹಾಯ ಮಾಡಲು ಬಂದರೆ ಸಿಟ್ಟಾಗುತ್ತಾರೆ. ಅಸಹಾಯಕರಂತೆ ಕಾಣುವುದಾಗಲಿ, ಇನ್ನೊಬ್ಬರ ಮೇಲೆ ಅವಲಂಬಿತವಾಗುವುದಾಗಲಿ ಅವರಿಗೆ ಇಷ್ಟವಾಗುವುದಿಲ್ಲ್ಲ. ಅವರಿಗೆ ಸಹಾಯದ ಅಗತ್ಯವಿರುವುದು ಎದ್ದು ಕಾಣಿಸುತ್ತಿದ್ದರೂ, ನೀವು ಸಹಾಯ ಮಾಡಲು ಮುಂದಾದ ತಕ್ಷಣ ಅದಕ್ಕೆ ಕೆಟ್ಟದಾಗಿ ಪ್ರತಿಕ್ರಿಯಿಸಿ ಬಿಡುತ್ತಾರೆ. ಕೆಲವೊಮ್ಮೆ ನಿಮ್ಮ ಮೇಲೆ ಹಲ್ಲೆಯೂ ಮಾಡಿ ಬಿಡುತ್ತಾರೆ.</strong></span></p>
<p>ಆಗೆಲ್ಲ ಅವರು ತಮ್ಮ ಆತ್ಮಾಭಿಮಾನದೊಂದಿಗೆ, ತಾವೆ ಕಟ್ಟಿಕೊಂಡಿರುವ ತಮ್ಮ ಇಮೇಜಿನೊಂದಿಗೆ ಗುದ್ದಾಡುತ್ತಿರಬಹುದು. ತಾವೀಗ ಏನು ಮಾಡಬೇಕು ಎಂದಾಗಲಿ, ತಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂಬುದಾಗಲಿ, ಹಿಂದೆ ತಾವು ಚೆನ್ನಾಗಿದ್ದಾಗ ಇದ್ದಂತೆ ಈಗ ಬದುಕು ಇಲ್ಲ ಎಂಬುದಾಗಲಿ ಅವರಿಗೆ ಗೊತ್ತಾಗದೆ ಹೋಗಿರಬಹುದು.</p>
<p>ಕೆಲವೊಮ್ಮೆ ಸಿಗುವ ಸಹಾಯಗಳೂ ಕೆಟ್ಟದಾಗಿರುತ್ತವೆ, ಅಥವ ಕೆಟ್ಟ ರೀತಿಯಲ್ಲಿ ಕೊಡಲಾಗಿರುತ್ತದೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡುವಾಗ ಅವರ ಘನತೆಯನ್ನು ಕಾಪಾಡುವ ಹಾಗೆ ಮತ್ತು ಅವರಿಗೆ ಅದನ್ನು ಸ್ವೀಕರಿಸಲು ಇಲ್ಲವೆ ನಿರಾಕರಿಸಲು ಆಯ್ಕೆ ಇರುವ ಹಾಗೆ ಕೊಡಬೇಕು. ಸಹಾಯ ಕೊಡಲು ಮುಂದಾಗುವುದಕ್ಕಿಂತ ಮೊದಲು ಅವರಿಗೆ ಅದರ ಅವಶ್ಯಕತೆ ನಿಜವಾಗಲೂ ಇದೆ ಎನ್ನುವುದನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕು. ನಾವು ನೀಡುವ ಸಹಾಯ ಸಮಂಜಸವಾಗಿರುವಂತೆ, ಗೌರವಯುತವಾಗಿರುವಂತೆ ನೋಡಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯದ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಏನೋ ದೊಡ್ಡ ಉಪಕಾರ ಮಾಡುತ್ತಿರುವಂತೆ ಆಗಲಿ, ದೊಡ್ಡಸ್ತಿಕೆ, ಯಜಮಾನಿಕೆ ಮಾಡುವುದಾಗಲಿ ಮಾಡಬಾರದು. ಸಹಾಯದ ಅಗತ್ಯ ಇರುವ ಕೆಲವರು ಈ ಮುಂಚೆ ವಿಶ್ವಾಸದ್ರೋಹಕ್ಕೆ ಒಳಗಾಗಿರಬಹುದು, ಅವರ ನಿರೀಕ್ಷೆಗಳು ಸುಳ್ಳಾಗಿರಬಹುದು. ಹಾಗಾಗಿ, ಮತ್ತೊಮ್ಮೆ ಆಶಾಭಂಗಕ್ಕೊಳಗಾಗುವುದನ್ನಾಗಲಿ, ದ್ರೋಹಕ್ಕೊಳಗಾಗುವುದನ್ನಾಗಲಿ ಅವರು ಬಯಸುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಅವರು ಸಹಾಯಕ್ಕೆ ತೆರೆದುಕೊಳ್ಳದೆ ಹೋಗಬಹುದು. ನಮ್ಮನ್ನು ಬೇಗನೆ ನಂಬದೆ ಇರಬಹುದು.</p>
<p>ಇನ್ನೊಬ್ಬರಿಗೆ ನಿಜವಾಗಲೂ ಸಹಾಯದ ಅವಶ್ಯಕತೆ ಇದೆಯಾ ಎಂದು ನಿಮಗೆ ಸಂದೇಹ ಹುಟ್ಟಿದ ಸಮಯದಲ್ಲಿ ಮೂಲಭೂತ ಅಗತ್ಯಗಳ ಬಗ್ಗೆ ಯೋಚಿಸಿ ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಊಟ, ಬಟ್ಟೆ, ವಸತಿ, ಇವು ಮನುಷ್ಯನಿಗೆ ಮೂಲಭೂತ ಅಗತ್ಯಗಳು. ಅದರ ಮೇಲೆ ಮನುಷ್ಯನಿಗೆ ಸ್ನೇಹಿತರು ಬೇಕು. ಅರ್ಥಪೂರ್ಣವಾದ ಚಟುವಟಿಕೆಗಳು ಬೇಕು. ಜನರನ್ನು ಗಮನಿಸುವುದರಿಂದ, ಪ್ರಶ್ನೆಗಳನ್ನು ಕೇಳುವುದರಿಂದ, ಅವರು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳುವುದರಿಂದ, ಅವರಿಗೆ ಬೇಕಾದ ಅಗತ್ಯಗಳು ಏನು ಎಂದು ನೀವು ಕಂಡುಕೊಳ್ಳಬಹುದು. ಅದಾದ ಮೇಲೆ ಅದನ್ನು ನೀಡುವ ಅತ್ಯುತ್ತಮ ವಿಧಾನದ ಬಗ್ಗೆ ಯೋಚಿಸಿ.</p>
<p>ನೀವು ಯಾವ ಕಡೆ ನೋಡಿದರೂ ಸಹಾಯದ ಅಗತ್ಯ ಇರುವ ಜನ ನಿಮಗೆ ಕಾಣಿಸುತ್ತಾರೆ. ಯಾವಾಗಲೂ ನಿಮ್ಮ ಕೈಲಾದ ಸಹಾಯ ಮಾಡುತ್ತಲೆ ಇರಿ. ಸಹಾಯ ಮಾಡಲು ಮುಂದಾದ ತಕ್ಷಣ ಅಥವ ನಂತರ ಕೆಲವೊಮ್ಮೆ ಅವರು ನಿಮ್ಮ ಮೇಲೆಯೆ ದಾಳಿ ಮಾಡಬಹುದು. ಆದರೆ ನೆನಪಿಡಿ, ಆ ದಾಳಿ ನಿಮ್ಮ ಮೇಲೆ ಮಾಡಿದ ದಾಳಿ ಆಗಿಲ್ಲದೆ ಇರಬಹುದು. ಅವರು ತಮ್ಮ ಸ್ಥಿತಿಯ ಮೇಲೆಯೆ ಕೋಪಗೊಂಡಿರಬಹುದು. ಅಥವ ತಮ್ಮ ಅಸಹಾಯಕ ಭಾವನೆಗಳ ವಿರುದ್ಧ ಹೋರಾಡುತ್ತಿರಬಹುದು. ಅದರೆ ಆ ದಾಳಿಗಳು ನಿಮ್ಮನ್ನು ನಿಲ್ಲಿಸಲು ಬಿಡಬೇಡಿ. ಬೇರೆಯವರು ನಿಮಗೆ ಅನೇಕ ಸಲ ಸಹಾಯ ಮಾಡಿದ್ದಾರೆ. ಮಾಡುತ್ತಲೆ ಇದ್ದಾರೆ. ಈಗ ನಿಮ್ಮ ಸರದಿ. ಅವಶ್ಯಕತೆ ಇರುವವರಿಗೆ ಸಮಂಜಸವಾದ ರೀತಿಯಲ್ಲಿ ಸಹಾಯ ಮಾಡುವುದರಿಂದ ಹಾಗೂ ಅವರ ಜೀವನದ ಗುಣಮಟ್ಟ ಉತ್ತಮವಾಗಲು ಶ್ರಮಿಸುವುದರಿಂದ ನಿಮ್ಮಲ್ಲಿ ಆಳವಾದ ಅರ್ಥ ಹುಟ್ಟುತ್ತದೆ. ಅದನ್ನು ಸಂತೋಷದಿಂದ ಅನುಭವಿಸಿ.</p>
<p style="text-align: center;"><strong><big>ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.<br />
<span style="color: #00e055;">ಆದ್ರೂ, ಸಹಾಯ ಮಾಡಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2010.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%2010.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=59</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%2010.mp3" length="7436416" type="audio/mpeg" />
		</item>
		<item>
		<title>ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.</title>
		<link>http://www.ravikrishnareddy.com/anyway-kannada/?p=55</link>
		<comments>http://www.ravikrishnareddy.com/anyway-kannada/?p=55#comments</comments>
		<pubDate>Sun, 04 Jan 2009 22:22:03 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=55</guid>
		<description><![CDATA[ದುರದೃಷ್ಟವಶಾತ್, ಇಂತಹದ್ದು ಪ್ರತಿದಿನ ಆಗುತ್ತಲೆ ಇರುತ್ತದೆ. ಯಾವುದೊ ಒಂದು ಮನೆ ಸುಟ್ಟು ಹೋಗುತ್ತದೆ. ಒಂದು ವ್ಯವಹಾರ, ಕಂಪನಿ ಮುಳುಗುತ್ತದೆ. ಹಣ, ಆಸ್ತಿಯೆಲ್ಲ ಹೋಗಿಬಿಡುತ್ತದೆ. ಪ್ರವಾಹ ಒಂದು ಸಮುದಾಯವನ್ನೆ ನಾಶ ಮಾಡಿ ಬಿಡುತ್ತದೆ. ಪ್ರತಿದಿನವೂ ಏನೋ ಒಂದು ಅನಾಹುತ ಘಟಿಸುತ್ತಲೆ ಇರುತ್ತದೆ. ಜನ ವರ್ಷಗಟ್ಟಲೆ ದುಡಿದು ಕಟ್ಟಿದಂತಹವು ಇದ್ದಕ್ಕಿದ್ದಂತೆ ನಾಶವಾಗಿ ಬಿಡುತ್ತವೆ. ಇಂತಹ ದುರಂತಗಳಿಗೆ ಒಳಗಾಗಿ ಮತ್ತೆ ಅವನ್ನು ಧೈರ್ಯದಿಂದ ಎದುರಿಸುವ ಜನರ ಸ್ಥೈರ್ಯವನ್ನು ನಾವು ಮೆಚ್ಚುತ್ತೇವೆ. ಅವರಿಗಾಗಿ ನಮ್ಮ ಹೃದಯಗಳು ಮಿಡಿಯುತ್ತವೆ. ಅವರ ನೋವು ಆಳವಾದದ್ದು ಎಂದು [...]]]></description>
			<content:encoded><![CDATA[<p>ದುರದೃಷ್ಟವಶಾತ್, ಇಂತಹದ್ದು ಪ್ರತಿದಿನ ಆಗುತ್ತಲೆ ಇರುತ್ತದೆ. ಯಾವುದೊ ಒಂದು ಮನೆ ಸುಟ್ಟು ಹೋಗುತ್ತದೆ. ಒಂದು ವ್ಯವಹಾರ, ಕಂಪನಿ ಮುಳುಗುತ್ತದೆ. ಹಣ, ಆಸ್ತಿಯೆಲ್ಲ ಹೋಗಿಬಿಡುತ್ತದೆ. ಪ್ರವಾಹ ಒಂದು ಸಮುದಾಯವನ್ನೆ ನಾಶ ಮಾಡಿ ಬಿಡುತ್ತದೆ. ಪ್ರತಿದಿನವೂ ಏನೋ ಒಂದು ಅನಾಹುತ ಘಟಿಸುತ್ತಲೆ ಇರುತ್ತದೆ. ಜನ ವರ್ಷಗಟ್ಟಲೆ ದುಡಿದು ಕಟ್ಟಿದಂತಹವು ಇದ್ದಕ್ಕಿದ್ದಂತೆ ನಾಶವಾಗಿ ಬಿಡುತ್ತವೆ. ಇಂತಹ ದುರಂತಗಳಿಗೆ ಒಳಗಾಗಿ ಮತ್ತೆ ಅವನ್ನು ಧೈರ್ಯದಿಂದ ಎದುರಿಸುವ ಜನರ ಸ್ಥೈರ್ಯವನ್ನು ನಾವು ಮೆಚ್ಚುತ್ತೇವೆ. ಅವರಿಗಾಗಿ ನಮ್ಮ ಹೃದಯಗಳು ಮಿಡಿಯುತ್ತವೆ. ಅವರ ನೋವು ಆಳವಾದದ್ದು ಎಂದು ನಮಗೆ ಗೊತ್ತು.</p>
<div><span style="color: #000080;"></p>
<div><strong>ನೀವು ಕಟ್ಟಿದಂತಹವು ನಿಮ್ಮ ಕಣ್ಣಮುಂದೆಯೆ ನಾಶವಾಗಿ ಬಿಡುವುದು ನಿಜಕ್ಕೂ ಬಾಧಿಸುವಂತಹ ವಿಷಯ. ಕೆಲವನ್ನು ರಾತ್ರೋರಾತ್ರಿ ಕಳೆದುಕೊಳ್ಳಬಹುದು. ಇನ್ನು ಕೆಲವು ನೀವು ಬದುಕಿರುವ ತನಕ ಇದ್ದರೂ, ಕಾಲಕ್ರಮೇಣ ಅವೂ ನಾಶವಾಗಿಯೇ ತೀರುತ್ತವೆ.</strong></div>
<p></span></div>
<p><span style="color: #000080;"><strong>ಅಷ್ಟಾದರೂ, ಅವು ಕಟ್ಟಲು ಯೋಗ್ಯ. ಕಟ್ಟುವ ಕೆಲಸ ಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತದೆ.</p>
<p></strong></span></p>
<p>ನಾಲ್ಕು ವರ್ಷದ ನಮ್ಮ ಮಗಳೊಡನೆ ಬೀಚಿನಲ್ಲಿ ಕಳೆದ ಒಂದು ದಿನ ನನ್ನ ಹೆಂಡತಿಯ ಮರೆಯಲಾಗದ ನೆನಪುಗಳಲ್ಲಿ ಒಂದು. ಮರಳಿನಲ್ಲಿ ಅರಮನೆ ಕಟ್ಟುವ ಬದಲು ನನ್ನ ಹೆಂಡತಿ ಮತ್ತು ಮಗಳು ಅಂದು ಮರಳಿನ ಆಮೆ ಮಾಡಲು ತೀರ್ಮಾನಿಸಿದರು. ಎದ್ದು ಕಾಣಿಸುವ ಚಿಪ್ಪು, ಅದರ ಸುಂದರ ಪುಟ್ಟಪಾದದ ಕಾಲುಗಳು, ಎಲ್ಲಾ ಗೊತ್ತಿದೆ ಎನ್ನುವಂಥ ಭಾವದ ಕಣ್ಣುಗಳು; ಇವೆಲ್ಲಾ ಸ್ಪಷ್ಟವಾಗಿ ಕಾಣಿಸುವಂತಹ ದೊಡ್ಡ ಆಮೆಯನ್ನೆ ಮಾಡಲಾರಂಭಿಸಿದರು. ಅವರು ಅದನ್ನು ಮಾಡುತ್ತ ಹೋದಂತೆ ಅತ್ತ ಸಮುದ್ರದ ಅಲೆಗಳು ಏರುತ್ತ ಹೋದವು. ಅವರು ಮರಳಿನ ಆಮೆಯನ್ನು ಸಂಪೂರ್ಣವಾಗಿ ಮಾಡಿದ ಮೇಲೆ ಏರುತ್ತ ಬಂದ ಅಲೆಯೊಂದು ಅದರ ಮೇಲೆ ಹರಿಯಿತು.</p>
<p>ಮರಳಿನ ಆಮೆ ನೀರಿನಲ್ಲಿ ಕರಗಿ ಕಣ್ಮರೆಯಾಗುತ್ತ ಹೋಗುತ್ತಿದ್ದಂತೆ, &#8220;ಬೈ-ಬೈ, ಆಮೆ,&#8221; ಎಂದ ನಮ್ಮ ಮಗಳು, &#8220;ಅದು ಸಮುದ್ರಕ್ಕೆ ವಾಪಸು ಹೋಯಿತು,&#8221; ಎಂದು ಅವರಮ್ಮನಿಗೆ ತಿಳಿಸಿದಳು. ಆಮೆ ಸಹಜವಾಗಿ ಸಮುದ್ರಕ್ಕೆ ವಾಪಸು ಹೋಗುವ ಕ್ರಿಯೆಯಂತೆ ನಮಗದು ಕಾಣಿಸಿತು.</p>
<p>ಬೀಚುಗಳಲ್ಲಿ ಮಕ್ಕಳೊಡನೆ, ಸ್ನೇಹಿತರೊಡನೆ ಮರಳಿನ ಪ್ರತಿಮೆಗಳನ್ನು ಮಾಡುವಾಗ ಏನೋ ಒಂದನ್ನು ಸೃಷ್ಟಿಸುತ್ತಿರುವ ಮತ್ತು ನಮ್ಮವರೊಡನೆ ಇರುವ ಸಂತೋಷ ನಮ್ಮದಾಗಿರುತ್ತದೆ. ಆ ಸಂತೋಷ ಮರಳಿನ ಪ್ರತಿಮೆಯ ಶಾಶ್ವತೆಯಿಂದಾಗಿ ಬರುವಂತಹುದಲ್ಲ. ಸಮುದ್ರದ ಅಲೆಗಳು ಮೇಲೇರುತ್ತವೆ ಮತ್ತು ಅವು ಮರಳಿನ ಪ್ರತಿಮೆಗಳನ್ನು ಕರಗಿಸುತ್ತವೆ ಎಂದು ನಮಗೆ ಗೊತ್ತಿರುತ್ತದೆ. ಆದರೆ ನಾವು ಕಳೆದ ಒಳ್ಳೆಯ ಸಮಯವನ್ನಾಗಲಿ, ಅಥವ ನೆನಪುಗಳನ್ನಾಗಲಿ ಅದು ಬದಲಾಯಿಸುವುದಿಲ್ಲ. ನಮ್ಮ ಆ ಸಂತೋಷ ಮತ್ತು ತೃಪ್ತಿ ಕಟ್ಟುವುದರಲ್ಲಿರುತ್ತದೆ.</p>
<p>ಅದೃಷ್ಟವಶಾತ್, ಬಹಳಷ್ಟು ಕೆಲಸಗಳು ಮರಳಿನ ಪ್ರತಿಮೆಗಳಿಗಿಂತ ಹೆಚ್ಚಿನ ಕಾಲ ಬಾಳುತ್ತವೆ. ಕೆಲವಂತೂ ಶತಮಾನಗಳ ಕಾಲ ಇರುತ್ತವೆ. ಮೈಕೆಲಾಂಜೆಲೊ ಐದು ನೂರು ವರ್ಷಗಳ ಹಿಂದೆ ಇದ್ದವನು. ಆದರೆ ಅವನು ಕೆತ್ತಿದ ಅಮೃತಶಿಲೆಯ ಅನೇಕ ಶಿಲ್ಪಗಳು ಹಾಗೂ ವರ್ಣಚಿತ್ರಗಳು ಇನ್ನೂ ಇವೆ ಹಾಗು ಇಂದಿಗೂ ನಮ್ಮ ಮನಸ್ಸಂತೋಷಪಡಿಸುತ್ತ, ನಮ್ಮ ಸಾಂಸ್ಕೃತಿಕ ಜ್ಞಾನವನ್ನು ಹೆಚ್ಚಿಸುತ್ತ ಇವೆ. ಎಂಟುನೂರು ವರ್ಷಗಳ ಹಿಂದಿನ ಯೂರೋಪಿನ ಚರ್ಚುಗಳನ್ನು, 1200 ವರ್ಷಗಳ ಹಿಂದಿನ ಜಪಾನಿನ ದೇವಾಲಯಗಳನ್ನು, 3000 ವರ್ಷಗಳ ಹಿಂದೆ ಕಟ್ಟಲ್ಪಟ್ಟಿರುವ ಈಜಿಪ್ಟಿನ ಪಿರಮಿಡ್ಡುಗಳನ್ನು ನಾವು ಈಗಲೂ ಸಂದರ್ಶಿಸಬಹುದು. ಹಾಗೆಯೆ, ಸಾವಿರಾರು ವರ್ಷಗಳ ಹಿಂದಿನ ಪುರಾತನ ಧಾರ್ಮಿಕ ಗ್ರಂಥಗಳು, ಸ್ಮೃತಿಗಳು, ನಿಯಮಾವಳಿಗಳು ಇಂದಿಗೂ ನಮ್ಮಲ್ಲಿವೆ. ಸಂಪೂರ್ಣವಾಗಿ ಲಭ್ಯವಿರುವ ಕಾನೂನು ಗ್ರಂಥಗಳಲ್ಲಿ ಅತಿ ಪ್ರಾಚೀನವಾದ ಹಮ್ಮುರಾಬಿಯ ನಿಯಮಾವಳಿ ಬ್ಯಾಬಿಲೋನಿನ ಕಾಲದಷ್ಟು, ಅಂದರೆ ಕ್ರಿಸ್ತಪೂರ್ವ 1750 ರಷ್ಟು ಹಿಂದಿನದು.</p>
<p>ಕೆಲವು ಶತಮಾನಗಳ ಕಾಲ ಬಾಳಿದರೆ, ನಾವು ಮಾಡುವ ಬಹಳಷ್ಟು ಕೆಲಸಗಳು ನಮ್ಮ ಜೀವಮಾನದ ಆಚೆಗೆ ಬಾಳುವುದಿಲ್ಲ. ಜ್ಞಾನಾಧಾರಿತ ಉದ್ಯಮದಲ್ಲಿ ನಾವು ಇಂದು ಏನನ್ನು ಸೃಷ್ಟಿಸುತ್ತೇವೆಯೊ ಅದು ಮುಂದಿನ ಅನ್ವೇಷಣೆಯಿಂದ, ಹೊಸ ಸತ್ಯದಿಂದ, ತಂತ್ರಜ್ಞಾನದ ಹೊಸ ಬೆಳವಣಿಗೆಯಿಂದ ಕೆಲವೆ ದಿನಗಳಲ್ಲಿ ಉಪಯೋಗಕ್ಕೆ ಬಾರದೆ ಹೋಗುತ್ತದೆ. ಸಂಘಸಂಸ್ಥೆಗಳಲ್ಲಂತೂ ನಮ್ಮ ಸಾಧನೆಗಳು ಬಹಳ ಬೇಗ ಮಸುಕಾಗಬಹುದು. ಅಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲರನ್ನೂ ಸೇರಿಸಿಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸುವ ತಂಡಗಳನ್ನು ತಯಾರು ಮಾಡಿ, ಒಂದು ನಿರ್ದಿಷ್ಟ ಗುರಿಯತ್ತ ಕಂಪನಿಯನ್ನು ಕೊಂಡೊಯ್ದಿರುತ್ತೇವೆ. ನಮ್ಮ ಸೇವಾವಧಿ ಮುಗಿದಾಗ ಕಂಪನಿಯ ಕಾರ್ಯಸಂಸ್ಕೃತಿಯಲ್ಲಿ ನಮ್ಮದೇ ಆದ ಪರಂಪರೆಯನ್ನು ಬಿಟ್ಟು ಹೋಗಿರುತ್ತೇವೆ. ಆದರೆ ವರ್ಷಗಳು ಉರುಳಿದಂತೆ, ಅವುಗಳಲ್ಲಿ ಕೆಲವೇ ಕೆಲವು ಪರಂಪರೆಗಳು ಮಾತ್ರ ಉಳಿದಿರುತ್ತವೆ. ಕೆಲವೊಮ್ಮೆ ಸಂದರ್ಭಗಳು ಹೇಗೆ ಬರುತ್ತವೆ ಅಂದರೆ ಎಲ್ಲವೂ ವರ್ಷಗಳ ಬದಲು ತಿಂಗಳುಗಳಲ್ಲಿಯೆ ಬದಲಾಗಿ ಬಿಡುತ್ತವೆ. ಆದರೆ, ನಮ್ಮದಾಗಿದ್ದ ಕಾಲದಲ್ಲಿ ಅರ್ಥಪೂರ್ಣವಾಗಿದ್ದನ್ನು ನಾವು ಮಾಡಿದ್ದೆವು ಎನ್ನುವುದಷ್ಟೆ ಆಗ ಮುಖ್ಯವಾಗುತ್ತದೆ.</p>
<p>ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು. ಆದರೆ ನೀವು ಏನನ್ನು ಸಾಧಿಸಿದ್ದಿರೊ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಹೆಮ್ಮೆಯಿಂದ, ಸಂತೋಷದಿಂದ ನೆನಪಿಸಿಕೊಳ್ಳಬಹುದಾದ್ದನ್ನು ನೀವು ಮಾಡಿದ್ದೀರಿ.</p>
<p>ನೀವು ಕಟ್ಟಿದ್ದು ಭವಿಷ್ಯದಲ್ಲಿಯೂ ಅನೇಕ ಕಾಲ ಬಾಳಿದರೆ ಅದು ಖುಷಿ ಕೊಡುತ್ತದೆ ಎನ್ನುವುದೇನೊ ಸರಿ. ಆದರೆ, ಬಹಳ ಕಾಲ ಬರುವುದಿಲ್ಲ ಎಂದು ಕಟ್ಟುವುದನ್ನು ನಿಲ್ಲಿಸಬೇಡಿ. ಕಟ್ಟುವುದರಿಂದ ಸಿಗುವ ಅರ್ಥ ಮತ್ತು ಆನಂದ ಬಹಳ ಕಾಲ ಇರುತ್ತದೆ. ಅದು ಎಂದೆಂದಿಗೂ ನಿಮ್ಮದಾಗಿರುತ್ತದೆ.</p>
<p style="text-align: center;"><strong><big>ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.<br />
<span style="color: #00e055;">ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%209.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%209.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=55</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%209.mp3" length="4859904" type="audio/mpeg" />
		</item>
		<item>
		<title>ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.</title>
		<link>http://www.ravikrishnareddy.com/anyway-kannada/?p=53</link>
		<comments>http://www.ravikrishnareddy.com/anyway-kannada/?p=53#comments</comments>
		<pubDate>Wed, 31 Dec 2008 19:14:15 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=53</guid>
		<description><![CDATA[ಅದು 1945 ರ ಸುಮಾರು. ಎರಡನೆ ವಿಶ್ವಯುದ್ಧ ಮುಗಿಯುತ್ತ ಬಂದಿದ್ದ ಸಮಯವದು. ಅಮೆರಿಕೆಯ ನೌಕಾದಳದ ಕ್ಯಾಪ್ಟನ್ ಒಬ್ಬ ಚೀನಾದ ತ್ಸಿಂಗ್ಟಾವೊ ನಗರದಲ್ಲಿ ಬಂದಿಳಿದ. ಆ ಊರಿನಲ್ಲಿ ಯಾರೂ ಅಮೆರಿಕನ್ನರಿರಲಿಲ್ಲ. ಹಾಗಾಗಿ ಸ್ಥಳೀಯ ಹೋಟೆಲ್‌ನಲ್ಲಿ ಇಳಿದುಕೊಂಡ. ಉತ್ತರ ಚೀನಾದಲ್ಲಿದ್ದ ಜಪಾನಿ ಸೈನ್ಯಪಡೆಗಳ ಶರಣಾಗತಿಗೆ ಏರ್ಪಾಟು ಮಾಡುವುದು ಆ ಕ್ಯಾಪ್ಟನ್‌ನ ಮುಖ್ಯ ಜವಾಬ್ದಾರಿಯಾಗಿತ್ತು. ಆ ನಿಟ್ಟಿನಲ್ಲಿ ತನ್ನ ಹಡಗಿನಲ್ಲಿನ ಸರುಕುಗಳನ್ನು ಇಳಿಸಿಕೊಳ್ಳುವುದಕ್ಕೆ ಕೂಲಿಗಳನ್ನು ನೇಮಿಸಿಕೊಳ್ಳುವುದು ಮತ್ತು ತನ್ನ ಸೈನಿಕರಿಗೆ ವಸತಿ ಏರ್ಪಾಟು ಮಾಡುವುದು ಆತ ತಕ್ಷಣ ಮಾಡಬೇಕಾದ ಕೆಲಸವಾಗಿತ್ತು.
ಅದು ಯುದ್ಧಕಾಲದಿಂದ [...]]]></description>
			<content:encoded><![CDATA[<p>ಅದು 1945 ರ ಸುಮಾರು. ಎರಡನೆ ವಿಶ್ವಯುದ್ಧ ಮುಗಿಯುತ್ತ ಬಂದಿದ್ದ ಸಮಯವದು. ಅಮೆರಿಕೆಯ ನೌಕಾದಳದ ಕ್ಯಾಪ್ಟನ್ ಒಬ್ಬ ಚೀನಾದ ತ್ಸಿಂಗ್ಟಾವೊ ನಗರದಲ್ಲಿ ಬಂದಿಳಿದ. ಆ ಊರಿನಲ್ಲಿ ಯಾರೂ ಅಮೆರಿಕನ್ನರಿರಲಿಲ್ಲ. ಹಾಗಾಗಿ ಸ್ಥಳೀಯ ಹೋಟೆಲ್‌ನಲ್ಲಿ ಇಳಿದುಕೊಂಡ. ಉತ್ತರ ಚೀನಾದಲ್ಲಿದ್ದ ಜಪಾನಿ ಸೈನ್ಯಪಡೆಗಳ ಶರಣಾಗತಿಗೆ ಏರ್ಪಾಟು ಮಾಡುವುದು ಆ ಕ್ಯಾಪ್ಟನ್‌ನ ಮುಖ್ಯ ಜವಾಬ್ದಾರಿಯಾಗಿತ್ತು. ಆ ನಿಟ್ಟಿನಲ್ಲಿ ತನ್ನ ಹಡಗಿನಲ್ಲಿನ ಸರುಕುಗಳನ್ನು ಇಳಿಸಿಕೊಳ್ಳುವುದಕ್ಕೆ ಕೂಲಿಗಳನ್ನು ನೇಮಿಸಿಕೊಳ್ಳುವುದು ಮತ್ತು ತನ್ನ ಸೈನಿಕರಿಗೆ ವಸತಿ ಏರ್ಪಾಟು ಮಾಡುವುದು ಆತ ತಕ್ಷಣ ಮಾಡಬೇಕಾದ ಕೆಲಸವಾಗಿತ್ತು.</p>
<p>ಅದು ಯುದ್ಧಕಾಲದಿಂದ ಶಾಂತಿಗೆ ಬದಲಾಗುತ್ತಿದ್ದ ಕಾಲ. ಸೈನಿಕರು ರಣರಂಗದಿಂದ ಸೈನ್ಯದ ಕಚೇರಿಗಳಿಗೆ, ಬ್ಯಾರಕ್‌ಗಳಿಗೆ ಮರಳುತ್ತಿದ್ದರು. ತ್ಸಿಂಗ್ಟಾವೊದಲ್ಲಿ ಬಂದಿಳಿದ ನೌಕಾದಳದ ಸೈನಿಕರಲ್ಲಿ ಬಹುಪಾಲು ಜನ ಸೈನ್ಯಕ್ಕೆ ಸೇರಿಕೊಂಡಂದಿನಿಂದ ಇಲ್ಲಿಯತನಕ ರಣರಂಗದಲ್ಲಿಯೇ ತಮ್ಮ ಜೀವನವನ್ನು ಕಳೆದಿದ್ದರು. ಅವರಿಗೆ ಸೇನಾಶಿಬಿರಗಳಲ್ಲಿ ಕೆಲಸ ಮಾಡಿ ಅಭ್ಯಾಸವೇ ಇರಲಿಲ್ಲ. ಆಗ ತಾನೆ ಹೊಸದಾಗಿ ಸಾರ್ಜೆಂಟ್ ಆಗಿ ಬಡ್ತಿ ಪಡೆದಿದ್ದ ಅವರಲ್ಲಿನ ಒಬ್ಬ ಯುವ ಸೈನಿಕನಿಗೆ ಅಲ್ಲಿನ ಬ್ಯಾರಕ್‌ಗಳಿಗೆ ಕಾವಲು ಸಾರ್ಜೆಂಟ್ ಆಗಿ ನೇಮಿಸಲಾಗಿತ್ತು. ಆತನ ಕರ್ತವ್ಯದ ಭಾಗವಾಗಿ 35 ಸ್ವೆಟರ್ ತರಹದ ಉಣ್ಣೆಯ ಜಾಕೆಟ್‌ಗಳನ್ನು ಆತನ ಸುಪರ್ದಿಗೆ ಒಪ್ಪಿಸಲಾಗಿತ್ತು. ಮೊದಲ ದಿನದ ಕೆಲಸ ಮಾಡಿದ ಆತನನ್ನು ಮಾರನೆ ದಿನ ಕಾವಲು ಕೆಲಸದಿಂದ ಬಿಡುಗಡೆ ಮಾಡಿದಾಗ ಆ ಜಾಕೆಟ್‌ಗಳಲ್ಲಿ ಕೇವಲ ಎರಡು ಮಾತ್ರ ಲೆಕ್ಕಕ್ಕೆ ಸಿಕ್ಕವು. ಆಗ ಚಳಿಗಾಲ ಹತ್ತಿರ ಬರುತ್ತಿತ್ತು. ಸೈನಿಕರು ಇದ್ದ ಬಿಡಾರಗಳನ್ನು ಬಿಸಿ ಮಾಡುವ ವ್ಯವಸ್ಥೆಗಳೇನೂ ಇರಲಿಲ್ಲ. ಅಂತಹ ಸ್ಥಿತಿಯಲ್ಲಿ ಆ ಉಣ್ಣೆಯ ಜಾಕೆಟ್‌ಗಳು ಅಲ್ಲಿದ್ದ ಸೈನಿಕರಿಗೆ ಬಹಳ ಅಮೂಲ್ಯವಾಗಿದ್ದವು. ಹಾಗಾಗಿ ಮುವ್ವತ್ತಮೂರು ಜಾಕೆಟ್‌ಗಳು ರಾತ್ರೋರಾತ್ರಿ ಕಣ್ಮರೆಯಾಗಿದ್ದವು.</p>
<p>ಆ ಘಟನೆಯಾಗುವುದಕ್ಕೆ ಕೆಲವೆ ದಿನಗಳ ಮುಂಚೆ ನೌಕಾಪಡೆಯ ಮುಖ್ಯ ಕಚೇರಿಯಿಂದ ಶಿಬಿರದಲ್ಲಿನ ಸರಕುಸಾಮಗ್ರಿಗಳ ಲೆಕ್ಕ ಇಡಲು ಕಠಿಣ ಆದೇಶ ಹೊರಡಿಸಲಾಗಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಯಾರೂ ಲೆಕ್ಕವೇ ಇಡುತ್ತಿರಲಿಲ್ಲ, ಇಟ್ಟರೂ ಅದನ್ನು ಯಾರೂ ಗಮನಿಸುತ್ತಿರಲಿಲ್ಲ. ಸೈನಿಕರೆಲ್ಲ ಯುದ್ಧ ಮಾಡುವುದರಲ್ಲಿ ವ್ಯಸ್ತರಾಗಿದ್ದರಿಂದ ಸಾಮಾನುಗಳ ವಿವರಗಳನ್ನು ಕಾಲಕಾಲಕ್ಕೆ ಲೆಕ್ಕ ಇಡುವುದಾಗಲಿ, ತೆಗೆದುಕೊಂಡ ವಸ್ತುಗಳಿಗೆ ಫಾರಂ ತುಂಬುವುದಾಗಲಿ ಸೈನಿಕರಿಗೆ ಮುಖ್ಯವಾಗಿರಲಿಲ್ಲ. ಆದರೆ ಈಗ ಶಾಂತಿಸಮಯ. ಹೊಸ ಆದೇಶಗಳು ಜಾರಿಗೆ ಬಂದುಬಿಟ್ಟಿದ್ದವು. ಹಾಗಾಗಿ, ಕಣ್ಮರೆಯಾದ ಜಾಕೆಟ್‌ಗಳ ಕಾರಣಕ್ಕಾಗಿ ಸಾರ್ಜೆಂಟ್‌ನನ್ನು ಸೇನಾನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಯಿತು.</p>
<p>ಕೋರ್ಟ್-ಮಾರ್ಷಲ್‌ನಲ್ಲಿ ಸಾರ್ಜೆಂಟ್‌ನ ಪರವಾಗಿ ವಾದಿಸಲು ಆ ಕ್ಯಾಪ್ಟನ್ ಒಪ್ಪಿಕೊಂಡ. ಕೇಸಿನ ಹಿಂದೆಮುಂದೆಲ್ಲ ಪರಿಶೀಲಿಸಿದ ನಂತರ, ತುಕಡಿಯ ಸೇನಾಧಿಕಾರಿಯನ್ನು, ಫಿರಂಗಿದಳದ ಕಮ್ಯಾಂಡರ್‌ನನ್ನು, ಮತ್ತು ಇನ್ನೂ ಹಲವು ಸೇನಾ ಅಧಿಕಾರಿಗಳನ್ನು, ಇತರೆ ಕೆಲವು ಸಾರ್ಜೆಂಟ್‌ಗಳನ್ನು ವಿಚಾರಣೆಗಾಗಿ ಕಟಕಟೆಗೆ ಕರೆಯಲು ತೀರ್ಮಾನಿಸಿದ. ಇವರೆಲ್ಲರೂ ಜಾಕೆಟ್‌ಗಳು ಕಣ್ಮರೆಯಾದ ಮತ್ತು ಅದರ ಅಸುಪಾಸಿನ ದಿನಗಳಲ್ಲಿ ಅಲ್ಲಿನ ಉಸ್ತುವಾರಿ ವಹಿಸಿದ್ದವರು ಇಲ್ಲವೆ ಆ ಸ್ಥಳದಲ್ಲಿದ್ದವರು. ಅವರೆಲ್ಲರನ್ನೂ ಕಟಕಟೆಗೆ ಕರೆದರೆ ಅವರಿಗೆ ಸಂಬಂಧಪಟ್ಟ ವಿವರಗಳೆಲ್ಲ ಕೋರ್ಟ್‌ಮಾರ್ಷಲ್ ದಾಖಲೆಯಲ್ಲಿ ಸೇರಿಕೊಳ್ಳುತ್ತದೆ. ನಂತರ ಆ ವರದಿ ವಾಷಿಂಗ್ಟನ್ ಡಿ.ಸಿ.ಯ ಮುಖ್ಯಕಚೇರಿಗೆ ಪರಿಶೀಲನೆಗೆ ಹೋಗುತ್ತದೆ.</p>
<p>ಹಾಗಾಗಿ ಕಟಕಟೆ ಹತ್ತಬೇಕಾಗಿದ್ದ ಪ್ರತಿಯೊಬ್ಬ ಅಧಿಕಾರಿಗೂ ಇದು ಸೂಕ್ಷ್ಮವಾದ ವಿಷಯ. ಅವರಲ್ಲಿನ ಕೆಲವರು ಸೈನ್ಯದ ಕಾಯಂ ಉದ್ಯೋಗದಲ್ಲಿರದ ಮೀಸಲು ಗುಂಪಿನವರು ಹಾಗೂ ಯುದ್ಧದ ನಂತರ ಪೂರ್ಣಾವಧಿ ಕೆಲಸದ ಆಸೆಯಲ್ಲಿದ್ದರು. ಮಿಕ್ಕ ಕಾಯಂ ಸೇನಾಧಿಕಾರಿಗಳು ತಮ್ಮ ವೃತ್ತಿಯಲ್ಲಿ ಮೇಲೆ ಹೋಗಲು ಅನುಕೂಲವಾಗುವಂತಹ ಹುದ್ದೆಗಳನ್ನು ಬಯಸುತ್ತಿದ್ದವರು. ಅವರೆಲ್ಲರಿಂದಲೂ ಕ್ಯಾಪ್ಟನ್‌ಗೆ ಫೋನ್ ಕರೆಗಳು ಬರಲಾರಂಭಿಸಿದವು. ಯಾವನೋ ಒಬ್ಬ ನಗಣ್ಯ ಸಾರ್ಜೆಂಟ್‌ಗಾಗಿ ಯಾಕೆ ನೀವು ಇಷ್ಟೆಲ್ಲ ಪರಿಶ್ರಮವಹಿಸಿ, ಇದನ್ನು ಇಷ್ಟು ದೂರಕ್ಕೆ ಒಯ್ಯುತ್ತಿದ್ದೀರಿ ಎಂದು ಅವರೆಲ್ಲ ಕೇಳಲಾರಂಭಿಸಿದರು. ಕ್ಯಾಪ್ಟನ್‌ನನ್ನು ಆತನಿಗಿಂತ ಮೇಲಿದ್ದ ತುಕಡಿಯ ಮುಖ್ಯ ಸೇನಾಧಿಕಾರಿ, ಆತನ ಮೇಲಿನ ಅಧಿಕಾರಿ, ಕೊನೆಗೆ ತುಕಡಿಯ ಕಮ್ಯಾಂಡರ್ ಸಹ ತಮ್ಮತಮ್ಮ ಕಛೇರಿಗೆ ಕರೆಸಿಕೊಂಡು ಮಾತನಾಡಿಸಿದರು. ತಮ್ಮನ್ನು ಸಾಕ್ಷಿಗಳಾಗಿ ಕಟಕಟೆಗೆ ಕರೆಸದೇ ಇರುವುದರಿಂದ ಸಂಬಂಧಪಟ್ಟವರೆಲ್ಲರಿಗೂ ಒಳ್ಳೆಯದಾಗುತ್ತದೆಂದೂ, ಕ್ಯಾಪ್ಟನ್‌ಗೂ ಸಹ ಅದರಿಂದ ಒಳ್ಳೆಯದಾಗುತ್ತದೆಂದು ಆ ಮೂವರೂ ಮೇಲಧಿಕಾರಿಗಳು ಸಲಹೆ ಕೊಟ್ಟರು.</p>
<p>ಕ್ಯಾಪ್ಟನ್ ಸಹ ರಿಸರ್ವ್ ಗುಂಪಿನಲ್ಲಿದ್ದಾತ. ಆತನಿಗೂ ನೌಕಾದಳದಲ್ಲಿ ಮುಂದುವರೆಯಲು ಮನಸ್ಸಿತ್ತು. ಹಿರಿಯ ಅಧಿಕಾರಿಗಳಿಗೆ ಬೇಸರ ಉಂಟುಮಾಡುವುದರಿಂದ ತನಗೆ ಸಿಗಬಹುದಾದ ಕಾಯಂ ಉದ್ಯೋಗಕ್ಕೆ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಒಳ್ಳೆಯದಲ್ಲ ಎನ್ನುವುದು ಆತನಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಆದರೆ ಆತ ಹಿಂಜರಿಯಲಿಲ್ಲ. ಅವರೆಲ್ಲರನ್ನು ಕಟಕಟೆಗೆ ಕರೆಸುವುದರಿಂದ ಮಾತ್ರ ಮೊಕದ್ದಮೆಗೆ ಸಂಬಂಧಪಟ್ಟ ಸರಿತಪ್ಪುಗಳನ್ನು ಸಾಬೀತುಪಡಿಸಲು ಸಾಧ್ಯ ಎಂದು ಆತ ತನ್ನ ಮೇಲಧಿಕಾರಿಗಳಿಗೆ ನೇರವಾಗಿ ತಿಳಿಸಿದ.</p>
<p>ಒತ್ತಡ ಹೆಚ್ಚುತ್ತ ಹೋಯಿತು. ಅಲ್ಲಿನ ನೌಕಾ ವಿಭಾಗದ ಹಿರಿಯ ಅಧಿಕಾರಿಗಳೆಲ್ಲ ಒಂದು ಶನಿವಾರದ ಸಂಜೆ ಹೋಟೆಲ್ ಒಂದರಲ್ಲಿ ಪಾರ್ಟಿ ಏರ್ಪಡಿಸಿ, ಅದಕ್ಕೆ ಕ್ಯಾಪ್ಟನ್‌ನನ್ನು ಆಹ್ವಾನಿಸಿದರು. ಆತ ಅಲ್ಲಿಗೆ ಹೋದ ತಕ್ಷಣ ಸಹಾಯಕ ಡಿವಿಷನ್ ಕಮ್ಯಾಂಡರ್ ಹತ್ತಿರ ಹೋಗಿ ಮಾತನಾಡಲು ಸೂಚಿಸಲಾಯಿತು. ಆ ಸಹಾಯಕ ಡಿವಿಷನ್ ಕಮ್ಯಾಂಡರ್ ಬರಲಿರುವ ಕೋರ್ಟ್-ಮಾರ್ಷಲ್ ಬಗ್ಗೆ ಮಾತನಾಡುತ್ತ, ಕ್ಯಾಪ್ಟನ್ ಮಾಡುತ್ತಿರುವುದರ ಬಗ್ಗೆ ತಾನು ವೈಯಕ್ತಿಕವಾಗಿ ಚಿಂತೆಗೊಳಗಾಗಿದ್ದೇನೆಂತಲು, ಅದರಿಂದ ಕ್ಯಾಪ್ಟನ್‌ನ ಕಾಯಂ ಕೆಲಸಕ್ಕೆ ತೊಂದರೆಯಾಗಬಹುದೆಂತಲೂ ತಿಳಿಸಿದ. ಡಿವಿಷನ್ ಕಮ್ಯಾಂಡರ್‌ಗೆ ಸಹ ಈ ಕೇಸಿನ ಆಗುಹೋಗುಗಳ ಬಗ್ಗೆ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ ಎಂದೂ ಸಹ ಆ ಸಹಾಯಕ ಡಿವಿಷನ್ ಕಮ್ಯಾಂಡರ್ ಹೇಳಿದ. ಆ ಪಾರ್ಟಿಗೆ ಬಂದಿದ್ದ ಬೆಟಾಲಿಯನ್‌ನ ಕಮ್ಯಾಂಡರ್ ಸಹ ಕೇಸನ್ನು &#8220;ಹಗುರವಾಗಿ&#8221; ತೆಗೆದುಕೊಳ್ಳಲು ಕ್ಯಾಪ್ಟನ್‌ಗೆ ಸೂಚಿಸಿದ.</p>
<p>ಆವರೆಲ್ಲರ ಮಾತನ್ನೂ ಕ್ಯಾಪ್ಟನ್ ವಿನಮ್ರವಾಗಿ ಕೇಳಿಸಿಕೊಂಡ. ತನ್ನ ವೃತ್ತಿಜೀವನದ ಭವಿಷ್ಯವೆ ಇಲ್ಲಿ ಪಣವಾಗಿಬಿಟ್ಟಿರುವುದು ಆತನಿಗೆ ಗೊತ್ತಾಯಿತು. ಆದರೆ ಸಾರ್ಜೆಂಟ್ ಅಪರಾಧಿ ಎಂದು ಆತನಿಗೆ ಅನ್ನಿಸಿರಲಿಲ್ಲ ಮತ್ತು ತಾನು ಮಾಡಿರದ ಅಪರಾಧಕ್ಕಾಗಿ ಸಾರ್ಜೆಂಟ್ ಶಿಕ್ಷೆ ಅನುಭವಿಸುವುದು ಸರಿ ಎಂದೂ ಆತನಿಗೆ ಅನ್ನಿಸಲಿಲ್ಲ. ಮತ್ತೊಮ್ಮೆ ಆತ ನಿರ್ಧಾರ ಮಾಡಬೇಕಿತ್ತು. ಮಾಡಿದ. ಸಹಾಯಕ ಡಿವಿಷನ್ ಕಮ್ಯಾಂಡರ್‌ಗೂ, ಬೆಟಾಲಿಯನ್ ಕಮ್ಯಾಂಡರ್‌ಗೂ ತಾನು ಈ ಕೇಸನ್ನು ಹಗುರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದ.</p>
<p>ಅದಾದ ಮಾರನೆಯ ಸೋಮವಾರದ ಮಧ್ಯಾಹ್ನ ಆರೋಪಕ್ಕೊಳಗಾಗಿದ್ದ ಸಾರ್ಜೆಂಟ್ ಕ್ಯಾಪ್ಟನ್‌ನ ಕಚೇರಿಗೆ ಅಚ್ಚರಿಯ ಸುದ್ದಿಯೊಂದಿಗೆ ಓಡುತ್ತ ಬಂದ. ತಾನೀಗ ನೇರವಾಗಿ ಬ್ಯಾರಕ್‌ಗಳಿಂದ ಬರುತ್ತಿದ್ದೇನೆಂತಲೂ, ಅಲ್ಲಿ ತನಗೆ ಈಗ ತಾನೆ 33 ಉಣ್ಣೆಯ ಜಾಕೆಟ್‌ಗಳು ದೊರಕಿದವೆಂತಲೂ ತಿಳಿಸಿದ. ಅವು ಇವರ ನೌಕಾದಳದ ಜಾಕೆಟ್‌ಗಳಾಗಿದ್ದಂತೆ ಕಾಣಿಸದೆ, ಬದಲಿಗೆ ಅಲ್ಲಿದ್ದ ಅಮೆರಿಕದ ಬೇರೆ ನೌಕಾದಳದಿಂದ ತಂದಿದ್ದವಾಗಿದ್ದವು. ಕ್ಯಾಪ್ಟನ್ ಮತ್ತು ಸಾರ್ಜೆಂಟ್ ಇಬ್ಬರೂ ಆ ಜಾಕೆಟ್‌ಗಳನ್ನು ಹೊತ್ತುಕೊಂಡು ಸೈನ್ಯದ ಕಚೇರಿಗೆ ಹೋಗಿ ಅವರಿಂದ ಪಾವತಿಯ ರಸೀತಿ ಪಡೆದರು. ಅದನ್ನು ತೆಗೆದುಕೊಂಡು ತುಕಡಿಯ ಸೇನಾಧಿಕಾರಿಯ ಬಳಿಗೆ ಹೋದ ಸಾರ್ಜೆಂಟ್, ಜಾಕೆಟ್‌ಗಳು ಸಿಕ್ಕವೆಂತಲೂ, ಅವನ್ನು ಹಿಂದಿರುಗಿಸಿ ಲೆಕ್ಕಪತ್ರ ಚುಕ್ತಾ ಮಾಡಲಾಯಿತೆಂತಲೂ ತಿಳಿಸಿದ. ಮಾರನೆಯ ದಿನವೆ ಸಾರ್ಜೆಂಟ್ ಮತ್ತು ಕ್ಯಾಪ್ಟನ್ ಇಬ್ಬರಿಗೂ ಕೋರ್ಟ್-ಮಾರ್ಷಲ್ ಅನ್ನು ರದ್ದು ಮಾಡಲಾಗಿದೆಯೆಂದೂ, ಸಾರ್ಜೆಂಟ್ ಮೇಲಿನ ಅಪಾದನೆಗಳನ್ನು ಹಿಂದೆಗೆದುಕೊಳ್ಳಲಾಗಿದೆಯೆಂದೂ ಸುದ್ದಿ ಬಂತು.</p>
<p>ಅದಾದ ಕೆಲವು ವರ್ಷಗಳ ನಂತರ ಆ ಸಾರ್ಜೆಂಟ್ ಗೌರವಯುತವಾಗಿ ಸೈನ್ಯದ ಕೆಲಸದಿಂದ ಬಿಡುಗಡೆಯಾದ. ಅದಕ್ಕೆ ಮೊದಲು ಆತನಿಗೆ ಮತ್ತೊಮ್ಮೆ ಬಡ್ತಿ ಸಹ ದೊರಕಿತ್ತು. ನಗಣ್ಯನಾಗಿದ್ದ ಸಾರ್ಜೆಂಟ್‌ಗಾಗಿ ತನ್ನ ವೃತ್ತಿಯನ್ನೆ ಪಣಕ್ಕಿಟ್ಟಿದ್ದ ಕ್ಯಾಪ್ಟನ್‌ಗೆ ಸಹ ತಾನು ಬಯಸಿದ್ದ ಸೈನ್ಯದ ಕಾಯಂ ಕೆಲಸ ಸಿಕ್ಕಿತು. ಸೈನ್ಯದಲ್ಲಿ ಮುವ್ವತ್ತು ವರ್ಷ ಪ್ರಾಮಾಣಿಕವಾಗಿ ದುಡಿದ ಆ ಕ್ಯಾಪ್ಟನ್ ಹಂತಹಂತವಾಗಿ ಮೇಲೇರಿ ಕೊನೆಗೆ ಕರ್ನಲ್ ಆಗಿ ನಿವೃತ್ತಿ ಹೊಂದಿದ.</p>
<p>ಇಲ್ಲಿ, ಈ ಮೇಲಿನ ಕೇಸಿನ ಆಗುಹೋಗುಗಳ ಬಗ್ಗೆ ಡಿವಿಷನ್ ಕಮ್ಯಾಂಡರ್‌ಗೆ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ ಎಂದು ಹೇಳಲಾಗಿತ್ತಲ್ಲವೆ. ತ್ಸಿಂಗ್ಟಾವೊದ ಕೋರ್ಟ್-ಮಾರ್ಷಲ್ ಘಟನೆ ಆದ ಏಳೆಂಟು ವರ್ಷಗಳ ನಂತರ, ಆ ಡಿವಿಷನ್ ಕಮ್ಯಾಂಡರ್ ಜೊತೆ ನಿಕಟವಾಗಿ ಕೆಲಸ ಮಾಡಲು ಈ ಕ್ಯಾಪ್ಟನ್ ಆಯ್ಕೆಯಾದ. ಆ ಕಮ್ಯಾಂಡರ್ ಈಗ ನೌಕಾಪಡೆಯ ಕಮ್ಯಾಂಡಿಂಗ್ ಜನರಲ್ ಆಗಿದ್ದ. ಆತನಿಗೆ ತಾನು ಪ್ರಾಮಾಣಿಕವಾಗಿ ನಂಬಬಲ್ಲ ಒಬ್ಬ ನಂಬಿಕಸ್ಥ ಮನುಷ್ಯ ಬೇಕಾಗಿತ್ತು. ಕ್ಯಾಪ್ಟನ್‌ನನ್ನು ನಂಬಬಹುದು ಎಂದು ಕಮ್ಯಾಂಡರ್‌ಗೆ ಗೊತ್ತಿತ್ತು.</p>
<p>ಈ ಕತೆಗೇನೋ ಸುಖಾಂತ್ಯವಿದೆ. ಆದರೆ ಇದರಲ್ಲಿ ಬರುವ ಸ್ಥೈರ್ಯ, ಕೆಚ್ಚು ಮತ್ತು ತೊಂದರೆಗಳು ವಾಸ್ತವವಾದವು. ನನಗೆ ಈ ಕತೆ ಗೊತ್ತಿರಲು ಕಾರಣವೇನೆಂದರೆ, ಈ ಎಲ್ಲಾ ತೊಂದರೆಗಳನ್ನು ಎದುರಿಸುವ ಧೈರ್ಯ ತೋರಿದ ಆ ಮನುಷ್ಯನ ಪರಿಚಯ ನನಗಿತ್ತು. ಆತ ನನ್ನಪ್ಪ.</p>
<div><span style="color: #000080;"></p>
<div><strong>ನಾವು ದುರ್ಬಲರಿಗೆ ಸಹಾನುಭೂತಿ ತೋರಿಸುತ್ತೇವೆ. ಅವರೊಡನೆ ಗುರುತಿಸಿಕೊಳ್ಳುತ್ತೇವೆ. ಎಲ್ಲಾ ಎಡರುತೊಡರುಗಳನ್ನು ಎದುರಿಸಿ ಕೊನೆಗೂ ಗೆಲ್ಲುವ ದುರ್ಬಲರ ಮೇಲಿನ ಕತೆಗಳನ್ನು ಕೇಳಲು ಇಷ್ಟಪಡುತ್ತೇವೆ. ಅವರು ಗೆಲ್ಲಲೆಂದು ಬಯಸುತ್ತೇವೆ.</strong></div>
<p></span></div>
<p><span style="color: #000080;"><strong>ಆದರೆ ನಮ್ಮ ಕುಟುಂಬವಾಗಲಿ, ನಮ್ಮ ವೃತ್ತಿಯಾಗಲಿ, ಅಥವ ನಮ್ಮ ಹೆಸರಾಗಲಿ ಪಣವಾಗಿ ಬಿಟ್ಟಾಗ ಸಾಮಾನ್ಯವಾಗಿ ನಾವು ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ.</p>
<p></strong></span></p>
<p>ಯಾಕೆಂದರೆ, ದುರ್ಬಲನು ಗೆಲ್ಲುವ ಸಾಧ್ಯತೆಗಳಿಗಿಂತ ಸೋಲುವ ಸಾಧ್ಯತೆಗಳೆ ಜಾಸ್ತಿ. ಆ ದುರ್ಬಲ ಮನುಷ್ಯನು ಸತ್ಯವಂತನಾಗಿದ್ದರೂ, ನ್ಯಾಯ ಆತನ ಪರ ಇದ್ದರೂ, ನಮ್ಮ ಹೃದಯದಲ್ಲಿ ನಮ್ಮ ಬೆಂಬಲ ಆತನಿಗೇ ಇದ್ದರೂ, ಅವನನ್ನು ಬಹಿರಂಗವಾಗಿ ಬೆಂಬಲಿಸುವುದು ಸೋಲನ್ನು ನಮ್ಮ ಮೈಮೇಲೆ ಎಳೆದುಕೊಂಡಂತೆ; ಕೆಲವು ಜನರನ್ನು, ಪಟ್ಟಭದ್ರರನ್ನು ಎದುರುಹಾಕಿಕೊಂಡಂತೆ. ಅದರಿಂದ ಕೆಲವೊಮ್ಮೆ ನಮ್ಮ ಕೆಲಸವನ್ನೆ ಕಳೆದುಕೊಳ್ಳಬೇಕಾಗಬಹುದು; ಸಿಗಬೇಕಾದ ಬಡ್ತಿ ಸಿಗದೆ ಹೋಗಬಹುದು; ಅಥವ ವೃತ್ತಿಯಲ್ಲಿ ಯಶಸ್ಸು ಸಿಗದೆ ಹೋಗಬಹುದು. ಹಾಗಾಗಿ, ನಾವು ದುರ್ಬಲನನ್ನು ಪ್ರೀತಿಸುತ್ತೇವೆ, ಆದರೆ ಸಬಲರನ್ನು ಹಿಂಬಾಲಿಸುತ್ತೇವೆ. ಯಶಸ್ವಿಯಾಗಿ ಓಡುತ್ತಿರುವ ಬಂಡಿಯನ್ನು ಹತ್ತಿ, ಯಾವುದು ಮೇಲ್ನೋಟಕ್ಕೆ ಗೌರವನೀಯವಾಗಿ ಕಾಣಿಸುವುದೊ ಅದನ್ನಷ್ಟೆ ಮಾಡುತ್ತೇವೆ. ಎಲ್ಲವನ್ನು ಅನುಸರಿಸಿಕೊಂಡು ಹೋಗುತ್ತೇವೆ. ಎಲ್ಲದಕ್ಕೂ ತಲೆಯಾಡಿಸುತ್ತೇವೆ. ಗಾಳಿ ಎತ್ತ ಬೀಸುತ್ತದೊ ಅತ್ತ ಹಾರುತ್ತೇವೆ.</p>
<p>ಎಲ್ಲ ದುರ್ಬಲರೂ ಸತ್ಯವಂತರಲ್ಲದಿರಬಹುದು. ಹಾಗೆಯೆ ದೀನದುರ್ಬಲನ ಪ್ರತಿಯೊಂದು ಸಮಸ್ಯೆಯೂ ಅಷ್ಟೇನೂ ಮುಖ್ಯವಾದದ್ದು ಆಗಿಲ್ಲದೆ ಇರಬಹುದು. ಆದರೆ ಕೆಲವಂತೂ ಖಂಡಿತವಾಗಿ ಮುಖ್ಯವಾಗಿರುತ್ತವೆ. ನಿಮ್ಮ ಸಹಾಯಕ್ಕೆ ಯೋಗ್ಯನಾದ, ಅದು ಬಹಳ ಅಗತ್ಯವೂ ಆಗಿರುವ ದುರ್ಬಲನು ನಿಮಗೆ ಕಾಲಕಾಲಕ್ಕೆ ಕಾಣಿಸುತ್ತಿರುತ್ತಾನೆ. ನೀವು ಏನಾಗಿರುವಿರೊ, ಏನನ್ನು ನಂಬಿದ್ದೀರೊ, ಅದಕ್ಕಾಗಿಯಾದರೂ ನೀವು ಆತನಿಗೆ ಸಹಾಯ ಮಾಡಬೇಕು. ನಿಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ಒಮ್ಮೆ ಹಿಂದಿರುಗಿ ನಿಮ್ಮ ಜೀವನವನ್ನು ನೋಡಿಕೊಂಡಾಗ, ಆ ಕೆಲವಾದರೂ ದುರ್ಬಲರ, ದಲಿತರ ಪರವಾಗಿ ಹೋರಾಡಿದ್ದು ನೀವು ಮಾಡಿದ ಕೆಲಸಗಳಲ್ಲೆಲ್ಲ ಅತ್ಯಂತ ಅರ್ಥಪೂರ್ಣವಾದದ್ದು ಎಂದು ನಿಮಗೆ ಅರಿವಾಗುತ್ತದೆ.</p>
<p style="text-align: center;"><strong><big>ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.<br />
<span style="color: #00e055;">ಹಾಗಿದ್ರೂ, ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%208.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%208.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=53</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%208.mp3" length="9465856" type="audio/mpeg" />
		</item>
		<item>
		<title>ಅತ್ಯುನ್ನತವಾದ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.</title>
		<link>http://www.ravikrishnareddy.com/anyway-kannada/?p=50</link>
		<comments>http://www.ravikrishnareddy.com/anyway-kannada/?p=50#comments</comments>
		<pubDate>Sun, 28 Dec 2008 21:39:51 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=50</guid>
		<description><![CDATA[ಸಾಕ್ರಟೆಸ್&#8230;ಗೆಲಿಲಿಯೊ&#8230;ಕೊಲಂಬಸ್&#8230;ಲಿಂಕನ್&#8230;ಸುಸಾನ್ ಬಿ. ಆಂಥನಿ&#8230;ಗಾಂಧಿ&#8230;ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. ನಮ್ಮ ಇತಿಹಾಸದ ಪುಸ್ತಕಗಳು ಉನ್ನತವಾದ ವಿಚಾರಗಳನ್ನು, ಆಲೋಚನೆಗಳನ್ನು ಹೊಂದಿದ್ದ ಉನ್ನತ ಮನುಷ್ಯರ ಕತೆಗಳಿಂದ ಕೂಡಿದೆ. ಈ ಎಷ್ಟೋ ಜನ ಉನ್ನತ ಮನುಷ್ಯರನ್ನು ಸಣ್ಣ ಮನುಷ್ಯರು ಸಾಂಕೇತಿಕವಾಗಿ ಮತ್ತೆ ಕೆಲವೊಮ್ಮೆ ಅಕ್ಷರಶ: ಗುಂಡು ಹೊಡೆದು ಉರುಳಿಸಿದ್ದಾರೆ. ಈ ಸಣ್ಣ ಜನರು ಆ ದೊಡ್ಡವರನ್ನು ನೋಡಿ ನಕ್ಕಿದ್ದಾರೆ; ಕಾರಾಗೃಹದಲ್ಲಿ ಕೂಡಿ ಹಾಕಿದ್ದಾರೆ; ಗುಂಡು ಹಾರಿಸಿ ಕೊಂದಿದ್ದಾರೆ.
ಮುಕ್ತವಾಗಿ ಆಲೋಚಿಸಿ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರಗಳನ್ನು ಹುಡಕಬಲ್ಲ, ಅವಕಾಶಗಳನ್ನು ಬಳಸಿಕೊಳ್ಳಬಲ್ಲ, ಉದಾರಿಗಳಾದ, ನೀತಿವಂತ, ಹಾಗೂ [...]]]></description>
			<content:encoded><![CDATA[<p>ಸಾಕ್ರಟೆಸ್&#8230;ಗೆಲಿಲಿಯೊ&#8230;ಕೊಲಂಬಸ್&#8230;ಲಿಂಕನ್&#8230;ಸುಸಾನ್ ಬಿ. ಆಂಥನಿ&#8230;ಗಾಂಧಿ&#8230;ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. ನಮ್ಮ ಇತಿಹಾಸದ ಪುಸ್ತಕಗಳು ಉನ್ನತವಾದ ವಿಚಾರಗಳನ್ನು, ಆಲೋಚನೆಗಳನ್ನು ಹೊಂದಿದ್ದ ಉನ್ನತ ಮನುಷ್ಯರ ಕತೆಗಳಿಂದ ಕೂಡಿದೆ. ಈ ಎಷ್ಟೋ ಜನ ಉನ್ನತ ಮನುಷ್ಯರನ್ನು ಸಣ್ಣ ಮನುಷ್ಯರು ಸಾಂಕೇತಿಕವಾಗಿ ಮತ್ತೆ ಕೆಲವೊಮ್ಮೆ ಅಕ್ಷರಶ: ಗುಂಡು ಹೊಡೆದು ಉರುಳಿಸಿದ್ದಾರೆ. ಈ ಸಣ್ಣ ಜನರು ಆ ದೊಡ್ಡವರನ್ನು ನೋಡಿ ನಕ್ಕಿದ್ದಾರೆ; ಕಾರಾಗೃಹದಲ್ಲಿ ಕೂಡಿ ಹಾಕಿದ್ದಾರೆ; ಗುಂಡು ಹಾರಿಸಿ ಕೊಂದಿದ್ದಾರೆ.</p>
<p><span style="color: #000080;"><span style="color: #000080;"><font color="#000080"><strong>ಮುಕ್ತವಾಗಿ ಆಲೋಚಿಸಿ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರಗಳನ್ನು ಹುಡಕಬಲ್ಲ, ಅವಕಾಶಗಳನ್ನು ಬಳಸಿಕೊಳ್ಳಬಲ್ಲ, ಉದಾರಿಗಳಾದ, ನೀತಿವಂತ, ಹಾಗೂ ಬದ್ಧತೆಯುಳ್ಳ ದೊಡ್ಡ ಮನುಷ್ಯರು ಈ ಪ್ರಪಂಚಕ್ಕೆ ಬೇಕು. ದೊಡ್ಡದೊಡ್ಡ ವಿಚಾರಗಳು, ಅದರಲ್ಲೂ ಪರಿಸ್ಥಿತಿಯನ್ನು ಸುಧಾರಿಸುವ, ಹೊಸಹೊಸ ಆವಿಷ್ಕಾರಗಳಿಗೆ ದಾರಿ ತೋರಬಲ್ಲ, ಹೊಸ ದೃಷ್ಟಿಕೋನವನ್ನು ಪ್ರಚೋದಿಸಬಲ್ಲ ವಿಚಾರಗಳು ಈ ಪ್ರಪಂಚಕ್ಕೆ ಬೇಕು. ನಮ್ಮಲ್ಲಿ ಮಹಾನ್ ಎನ್ನಬಹುದಾದ ಸಮಸ್ಯೆಗಳಿವೆ, ಹಾಗಾಗಿ ನಮಗೆ ಮಹಾನ್ ಆದ ಪರಿಹಾರಗಳು ಬೇಕು. ಯಥಾಸ್ಥಿತಿಯಿಂದ ಆಚೆಗೆ ಉತ್ತಮವಾದ ಪ್ರಪಂಚವನ್ನು ಕಾಣಬಲ್ಲ ದೂರದೃಷ್ಟಿಯುಳ್ಳ ಜನ ನಮಗೆ ಬೇಕು.</strong></font></span><strong></strong></span><strong></strong></p>
<p>ಆದರೆ, ಈ ದೊಡ್ಡದೊಡ್ಡ ವಿಚಾರಗಳುಳ್ಳ ಉನ್ನತ ಮನುಷ್ಯರು ಸಣ್ಣ ಮನಸ್ಸಿನ ಕೀಳು ಜನರಿಗೆ ಅಪಾಯಕಾರಿ. &#8220;ಸಣ್ಣ ಮನುಷ್ಯ&#8221; ಎಂದರೆ ಯಾವುದೋ ಒಂದು ಸಣ್ಣ ಹುದ್ದೆಯಲ್ಲಿರುವ ಅಥವ ಸಣ್ಣ ಪದವಿಯಲ್ಲಿರುವ, ಅಥವ ಹೆಚ್ಚೇನೂ ವಿದ್ಯಾಭ್ಯಾಸವಿಲ್ಲದ ಅಥವ ಶ್ರೀಮಂತನಲ್ಲದ ಮನುಷ್ಯ ಎಂದೇನೂ ಅಲ್ಲ. ಈ &#8220;ಸಣ್ಣ ಮನುಷ್ಯ&#8221; ಬಹಳಷ್ಟು ಸಲ ಒಳ್ಳೆಯ ಮನುಷ್ಯನೆ ಆಗಿರುತ್ತಾನೆ. ಸಂಸ್ಥೆಗೆ ಕಷ್ಟಪಟ್ಟು ದುಡಿಯುವ ನಿಯತ್ತಿನ ಮನುಷ್ಯನೂ, ತನ್ನ ಸಹೋದ್ಯೋಗಿಗಳಿಗೆ ಒಳ್ಳೆಯ ಸ್ನೇಹಿತನೂ ಆಗಿರಬಹುದಾತ. ಒಬ್ಬ ಮನುಷ್ಯನನ್ನು &#8220;ಸಣ್ಣ ಮನುಷ್ಯ&#8221;ನನ್ನಾಗಿ ಮಾಡುವ ವಿಷಯ ಏನೆಂದರೆ ಜೀವನವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಆತನ ಗುಣ. ತನ್ನ ಸ್ವಂತ ಜೀವನಕ್ಕಿಂತ, ಅಥವ ತನ್ನ ಸಂಸ್ಥೆಗಿಂತ, ಅಥವ ತಾನಿರುವ ಸ್ಥಳ ಮತ್ತು ಕಾಲಮಾನಕ್ಕಿಂತ ಆಚೆ ಆತ ನೋಡಲಾರ. ಅವನು ತನ್ನ ದೈನಂದಿನ ಕಾರ್ಯಕ್ರಮಕ್ಕೆ ರೂಢಿಯಾಗಿಬಿಟ್ಟಿರುತ್ತಾನೆ ಮತ್ತು ಅದನ್ನು ಬದಲಾಯಿಸಲು ಸ್ವಲ್ಪವೂ ಇಷ್ಟಪಡುವುದಿಲ್ಲ. ಯಾವುದು ಹೇಗೆ ನಡೆಯುತ್ತಿರುತ್ತದೆಯೊ ಅದೇ ಪರಿಕ್ರಮಕ್ಕೆ ಆತ ಅಂಟಿಕೊಂಡು ಬಿಟ್ಟಿರುತ್ತಾನೆ. ಆದರೆ ಅದು ಯಾಕೆ ಹೀಗೆ ಇದೆ ಎಂದು ಯೋಚಿಸುವುದಿಲ್ಲ. ಪ್ರತಿಯೊಂದೂ ಕ್ರಮಬದ್ಧವಾಗಿಯೇ ನಡೆಯಬೇಕು, ಎಲ್ಲಾ ಅರ್ಜಿಗಳೂ ತ್ರಿಪ್ರತಿಗಳಾಗಿರಬೇಕು ಎನ್ನುವಂತಹ ಅಭ್ಯಾಸಬಲದ ಸಾಧಾರಣ ಆಲೋಚನಾ ಕ್ರಮ ಅವನದು. ಇನ್ನೇನು ಮಾಡಿದರೆ ನಾವು ಈಗ ಮಾಡುತ್ತಿರುವುದಕ್ಕಿಂತ ಉತ್ತಮವಾಗಿ ಮಾಡಬಹುದು ಎಂಬ ಆಲೋಚನೆಯೇ ಬೇಕಾಗಿಲ್ಲ ಅವನಿಗೆ. ಯಾಕೆಂದರೆ, ಹಾಗೇನಾದರೂ ಮಾಡಿದರೆ ಅವನ ಕೆಲಸಕಾರ್ಯಗಳು ಈಗ ಮಾಡುತ್ತಿರುವುದಕ್ಕಿಂತ ಬೇರೆ ತರಹ ಇರುತ್ತವೆ. ಹಾಗಾಗಿ ಅಂತಹ ಹೊಸ ಪ್ರಯತ್ನವನ್ನು, ಬದಲಾವಣೆಯನ್ನು ಆತ ಇಷ್ಟ ಪಡುವುದೇ ಇಲ್ಲ.</p>
<p>ಈ ಸಣ್ಣ ಮನುಷ್ಯ ಬಹಳಷ್ಟು ಸಲ ತನ್ನ ಬಲದ, ತನ್ನ ಪರಿಮಿತಿಯ, ಅಥವ ತನ್ನ ಅನುಕೂಲದ ದೃಷ್ಟಿಯಿಂದಷ್ಟೆ ನೋಡುತ್ತಾನೆ. ಅಷ್ಟೆ ಅಲ್ಲ, ಯಾವುದು ತನಗೆ ಒಳ್ಳೆಯದು ಎನ್ನಿಸುತ್ತದೊ ಅದೇ ತನ್ನ ಕುಟುಂಬಕ್ಕೂ, ಅಥವ ತನ್ನ ಸಂಸ್ಥೆಗೂ, ಅಥವ ತನ್ನ ಸಮುದಾಯಕ್ಕೂ ಒಳ್ಳೆಯದು ಎಂದುಕೊಂಡು ಬಿಡುತ್ತಾನೆ. ಈ ಸಣ್ಣ ಮನುಷ್ಯನ ಜೀವನ ತನ್ನ ತತ್‌ಕ್ಷಣದ ಬೇಕುಬೇಡಗಳಿಗಿಂತ, ಧೈರ್ಯಾಧೈರ್ಯಗಳಿಗಿಂತ ದೊಡ್ಡದಾಗಿರುವುದಿಲ್ಲ. ಒಂದಂತೂ ನಿಶ್ಚಿತ: ಸಣ್ಣ ವಿಚಾರಗಳ ಸಣ್ಣ ಮನುಷ್ಯ ನಮ್ಮನ್ನು ಹೊಸ ಹಿರಿಮೆಯ ಎತ್ತರಗಳಿಗೆ ಅಥವ ಉತ್ತಮ ಜೀವನಕ್ಕೆ ಕರೆದೊಯ್ಯಲಾರ.</p>
<p>ಈ ಪ್ರಪಂಚದಲ್ಲಿ ದೊಡ್ಡ ಮನುಷ್ಯರಿಗಿಂತ ನೂರಾರು ಪಟ್ಟು ಹೆಚ್ಚು ಸಣ್ಣ ಮನುಷ್ಯರಿದ್ದಾರೆ. ಎಲ್ಲಿ ನೋಡಿದರಲ್ಲಿ, ಸಮಾಜದ ಪ್ರತಿಯೊಂದು ಸ್ತರದಲ್ಲಿ, ಎಲ್ಲಾ ತರಹದ ವ್ಯವಹಾರಗಳಲ್ಲಿ, ಉದ್ದಿಮೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ, ಸರ್ಕಾರೇತರ ಸಂಘಸಂಸ್ಥೆಗಳಲ್ಲಿ; ಎಲ್ಲೆಲ್ಲೂ ಅವರೇ ಇದ್ದಾರೆ. ಅವರು ಎಲ್ಲೆಲ್ಲಿ ಇದ್ದಾರೊ ಅಲ್ಲೆಲ್ಲ ದೂರದೃಷ್ಟಿಯುಳ್ಳ, ದೊಡ್ಡದೊಡ್ಡ ಕನಸುಗಳುಳ್ಳ, ಉತ್ತಮ ದೃಷ್ಟಿಕೋನವುಳ್ಳ ದೊಡ್ಡ ಜನರನ್ನು ತುಳಿಯಲು ತಮ್ಮ ಕೈಲಾದದ್ದನ್ನೆಲ್ಲ ಮಾಡುತ್ತಾರೆ.</p>
<p>ಇದು ವಿಷಾದನೀಯ. ಯಾಕೆಂದರೆ, ಈ ಸಣ್ಣ ಮನುಷ್ಯರೂ ಸೇರಿದಂತೆ ನಾವೆಲ್ಲರೂ ಅಂತಿಮವಾಗಿ ಆ ದೊಡ್ಡ ಮನುಷ್ಯರ ಉನ್ನತ ಆಲೋಚನೆಗಳಿಂದ ಲಾಭ ಪಡೆಯುತ್ತೇವೆ. ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಾಗ, ಬಿಕ್ಕಟ್ಟುಗಳು ಸಡಿಲಗೊಂಡಾಗ, ಹೊಸ ಉತ್ಪನ್ನಗಳು ಆವಿಷ್ಕಾರವಾದಾಗ, ಹೊಸ ರೀತಿಯಲ್ಲಿ ಜೀವನವನ್ನು ಜೀವಿಸುವುದು ಕಂಡುಕೊಂಡಾಗ ಅದರ ಪ್ರಯೋಜನಗಳು ನಮಗೆಲ್ಲರಿಗೂ ಲಭಿಸುತ್ತವೆ. ಉನ್ನತವಾದ ದೂರದೃಷ್ಟಿ, ಒಂದು ದೊಡ್ಡ ಕನಸು, ಒಳ್ಳೆಯ ದೃಷ್ಟಿಕೋನ ಅನೇಕ ಹೊಸ ಅವಕಾಶಗಳಿಗೆ ಬಾಗಿಲು ತೆರೆದಾಗ ಮತ್ತು ಹೊಸದಾದ ಅಪೇಕ್ಷಣೀಯ ಫಲಿತಾಂಶಗಳನ್ನು ಒದಗಿಸಿದಾಗ ಅದರಿಂದ ಸಮಾಜದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ. ಆದರೆ ಈ ಸಣ್ಣ ಮನುಷ್ಯರು ಅದರಿಂದ ಬರುವ ವಿಶಾಲವಾದ ಸಮಷ್ಟಿಯ ಹಿತವನ್ನು ಕಾಣಲಾರರು. ಅವರು ಈಗ ತಮಗೆ ಸದ್ಯಕ್ಕಿರುವ ಸಣ್ಣ ಮಟ್ಟದ ಸೌಖ್ಯಕ್ಕೆ ಅಂಟಿಕೊಂಡು ಬಿಡುತ್ತಾರೆ.</p>
<p>ಕೆಲವು ಉನ್ನತವಾದ ವಿಚಾರಗಳು ದೊಡ್ಡ ಮಟ್ಟದ ವೈಫಲ್ಯವನ್ನು ಕಂಡಿವೆ ಎನ್ನುವುದೇನೋ ನಿಜವೆ. ಹಲವಾರು ಉನ್ನತವಾದ ದೂರದೃಷ್ಟಿಯ ಕನಸುಗಳು ದಬಕ್ಕೆಂದು ಬೋರಲು ಬಿದ್ದು ಸೋತಿವೆ. ಆದರೆ ಎಷ್ಟೋ ಸಲ ಒಂದು ವಿಚಾರ ನಿಜವಾಗಲೂ ಯಶಸ್ವಿಯಾಗುತ್ತದೆಯೆ ಎನ್ನುವುದನ್ನು ನಾವು ಸ್ವತಃ ಪ್ರಯತ್ನಿಸದೆ ಹೇಳಲಾಗುವುದಿಲ್ಲ. ಆ ಪ್ರಯತ್ನ ಪ್ರಾಮಾಣಿಕವಾದದ್ದಾಗಿದ್ದು, ಬುದ್ಧಿವಂತಿಕೆಯಿಂದ ಕೂಡಿದ್ದು, ಸಾಕಷ್ಟು ಸಮಯಾವಕಾಶ ಮತ್ತು ಸಂಪನ್ಮೂಲಗಳಿಂದ ಕೂಡಿದ್ದಾಗಿರಬೇಕೆ ಹೊರತು ಸುಮ್ಮನೆ ಒಲ್ಲದ ಮನಸ್ಸಿನಿಂದ, ಬಲವಂತಕ್ಕೆ ಮಾಡುವ ಪ್ರಯತ್ನವಾಗಿರಬಾರದು.</p>
<p>ಜನರಿಗೆ ಮತ್ತು ಸಂಸ್ಥೆಗಳಿಗೆ ಕನಸುಗಳಿರಬೇಕು. ನಾಯಕತ್ವದಲ್ಲಿ ಒಂದು ಮುಖ್ಯವಾದ ಕ್ರಿಯಾಂಶವೇನೆಂದರೆ ಸಂಸ್ಥೆಯ ಅಥವ ತಂಡದ ಉದ್ದೇಶವನ್ನು ನಿಖರವಾಗಿ ನಿರೂಪಿಸಿ ಅದನ್ನು ಸರಿಯಾಗಿ ಅಭಿವ್ಯಕ್ತಪಡಿಸುವುದು. ಆ ಉದ್ದೇಶ ಭವಿಷ್ಯದ ಬಗೆಗಿನ ಒಂದು ಯೋಜನೆಯಾಗಿರಬೇಕು; ಸಂಸ್ಥೆಯ ಮತ್ತು ಅದರಲ್ಲಿ ಪಾಲ್ಗೊಳ್ಳುವ ಜನರಿಗೆ ಭವಿಷ್ಯ ಹೇಗಿರಬಹುದು, ಹೇಗಿರಬೇಕು ಎನ್ನುವುದನ್ನು ಅದು ಸ್ಪಷ್ಟವಾಗಿ ಪ್ರತಿಪಾದಿಸಬೇಕು.</p>
<p>ದೂರದೃಷ್ಟಿಯ ದೊಡ್ಡದೊಡ್ಡ ವಿಚಾರಗಳು ಸವಾಲುಗಳನ್ನು ಸ್ವೀಕರಿಸಲು ಸಿದ್ಧವಿರುವ, ಕಲಿಯಲು ಸನ್ನದ್ಧವಾಗಿರುವ, ಬೆಳೆಯಲು ಇಚ್ಚಿಸುವ, ತಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಿಕೊಳ್ಳಲು ಸಿದ್ಧವಾಗಿರುವ ದೊಡ್ಡ ಮನುಷ್ಯರನ್ನು ಆಕರ್ಷಿಸುತ್ತವೆ. ಏನನ್ನಾದರೂ ಸಾಧಿಸಲು ಜನ ಇಚ್ಚಿಸುತ್ತಾರೆ. ಹಾಗಾಗಿ, ತಾವು ಮಾಡುತ್ತಿರುವುದು ಒಳ್ಳೆಯದು, ಉತ್ತಮವಾದದ್ದು ಎನ್ನುವ ಭರವಸೆ ಅವರಿಗೆ ಬೇಕು. ಅದೇ ರೀತಿ ಅವರಿಗೆ ಕಣ್ಣಿಗೆ ಕಾಣಬಲ್ಲ ಗುರಿಯೂ ಇರಬೇಕು. ಸಣ್ಣ ವಿಚಾರಗಳು ನಮ್ಮಲ್ಲಿನ ಶ್ರೇಷ್ಠತೆಯನ್ನು ಹೊರತರಲಾರವು. ಆದರೆ ದೊಡ್ಡ ವಿಚಾರಗಳು ನಮ್ಮಲ್ಲಿನ ಎಲ್ಲಾ ಒಳ್ಳೆಯದನ್ನು, ಶ್ರೇಷ್ಠವಾದದ್ದನ್ನು ಹೊರತರುತ್ತವೆ.</p>
<p>ನಾವು ಬದುಕುವ ರೀತಿಯನ್ನು ಹಾಗೂ ಪ್ರಪಂಚವನ್ನು ಬದಲಾಯಿಸಿದ ವಿಚಾರಗಳ ದೊಡ್ಡ ಪಟ್ಟಿಯೆ ಇದೆ. ಅಮೆರಿಕದ ಸ್ಥಾಪಕ ಪಿತೃಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಗಣರಾಜ್ಯದ ಕನಸು ಕಂಡರು. ಆ ಕನಸು ಪ್ರಪಂಚದ ಮೂಲೆಮೂಲೆಯಲ್ಲೂ ತನ್ನ ಪ್ರಭಾವ ಬೀರಿದ ರಾಷ್ಟ್ರವೊಂದಕ್ಕೆ ಜನ್ಮ ನೀಡಿತು. ಸೂಸನ್ ಬಿ. ಆಂಥನಿ ಎಂಬ ಹೆಣ್ಣುಮಗಳು ಅಮೆರಿಕದ ಸ್ತ್ರೀಯರಿಗೆ ಮತ ಚಲಾಯಿಸುವ ಹಕ್ಕು ಬರುವ ದಿನದ ಬಗ್ಗೆ ಕನಸು ಕಂಡಳು ಮತ್ತು ಸಮಾಜ ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ ಇಡಲು ಸಾಧ್ಯವಾಗುವಂತೆ ಶ್ರಮಿಸಿದಳು. ಗಾಂಧಿ ಭಾರತದ ಸ್ವಾತಂತ್ರ್ಯದ ಬಗ್ಗೆ ಕನಸು ಕಂಡರು ಮತ್ತು ಅಹಿಂಸಾತ್ಮಕ ಹೋರಾಟದಿಂದ ಕೋಟ್ಯಾಂತರ ಜನ ಸ್ವತಂತ್ರರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ವರ್ಣ ಸಮಾನತೆಯ ಕನಸು ಕಂಡರು. ಆ ಕನಸು ಸರ್ವರಿಗೂ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕಬೇಕೆಂಬ ಕರೆಯನ್ನು ಇವತ್ತಿಗೂ ನಮಗೆಲ್ಲ ಕೊಡುತ್ತಿದೆ.</p>
<p>ಒಳ್ಳೆಯ ತರಬೇತಿ ಪಡೆದ ನರ್ಸುಗಳಿರುವ ಆಧುನಿಕ ಆಸ್ಪತ್ರೆಗಳ ಬಗ್ಗೆ ಫ್ಲಾರೆನ್ಸ್ ನೈಟಿಂಗೇಲ್ ಕನಸು ಕಂಡಳು. ಆ ಕನಸನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿ ಆಧುನಿಕ ನರ್ಸ್ ವೃತ್ತಿಯನ್ನು ಸ್ಥಾಪಿಸಿದಳು. ತನ್ಮೂಲಕ ಸಾವಿರಾರು ಜೀವಗಳನ್ನು ಉಳಿಸಿದಳು. ಥಾಮಸ್ ಆಲ್ವ ಎಡಿಸನ್‌ಗೆ ದೊಡ್ಡ ಕನಸುಗಳಿದ್ದವು. ಆ ಕನಸುಗಳೆ ವಿಶ್ವದಾದ್ಯಂತ ಜನರ ಜೀವನಕ್ರಮವನ್ನೆ ಬದಲಾಯಿಸಿಬಿಟ್ಟ ಎಲೆಕ್ಟ್ರಿಕ್ ಬಲ್ಬ್ ಮತ್ತು ಫೋನೋಗ್ರ್ಯಾಫ಼್ ಸಂಶೋಧನೆಯತ್ತ ಆತನನ್ನು ಕೊಂಡೊಯ್ದವು. ಪೋಲಿಯೋವನ್ನು ತಡೆಗಟ್ಟಬಹುದು ಎಂದು ಜೋನಸ್ ಸಾಲ್ಕ್ ಕನಸು ಕಂಡ. ಲಕ್ಷಾಂತರ ಜನರನ್ನು ಅಂಗವಿಕಲತೆಯಿಂದ ರಕ್ಷಿಸಬಲ್ಲ ವ್ಯಾಕ್ಸಿನ್ ಅನ್ನು ಕಂಡು ಹಿಡಿದ.</p>
<p>ಜಪಾನಿನ ಐಚಿ ಶಿಬಿಸವ ಬದುಕಿದ್ದದ್ದು 1840 ರಿಂದ 1931 ರವರೆಗೆ. ರೈತ ಕುಟುಂಬದಲ್ಲಿ ಜನಿಸಿದ್ದ ಆತ ಜಪಾನಿನ ಹಣಕಾಸು ಮಂತ್ರಿಯಾಗುವ ತನಕ ಬೆಳೆದ. ಕೊನೆಗೆ ತಾನೆ ಸ್ವತಃ ಉದ್ದಿಮೆ ಸ್ಥಾಪಿಸಲು ಆ ಮಂತ್ರಿ ಪದವಿ ತ್ಯಜಿಸಿದ. ಹೊಸಹೊಸ ಉದ್ದಿಮೆಗಳು, ವಾಣಿಜ್ಯ ವ್ಯವಹಾರಗಳು ಇಲ್ಲದೆ ಜಪಾನ್ ಬೆಳೆಯಲಾರದು ಎಂದು ಆತನಿಗೆ ಗೊತ್ತಿತ್ತು. ಹಾಗಾಗಿ ಅವನ್ನು ತಾನೆ ಸ್ಥಾಪಿಸಲು ಮುಂದಾದ. ತನ್ನ ಜೀವಿತಾವಧಿಯಲ್ಲಿ ಆರು ನೂರಕ್ಕಿಂತ ಹೆಚ್ಚು ಸಂಖ್ಯೆಯ ಕಾರ್ಖಾನೆಗಳನ್ನು, ಸಂಸ್ಥೆಗಳನ್ನು ಆತ ಹುಟ್ಟುಹಾಕಿ ಬೆಳೆಸಿದ. ತನ್ನ ಪ್ರತಿಭೆಯನ್ನು ಎಷ್ಟೆಲ್ಲ ಸಾಧ್ಯವೊ ಅಷ್ಟೆಲ್ಲ ಬಳಸಿಕೊಳ್ಳಬೇಕೆಂದು ಆತನಿಗೆ ಗೊತ್ತಿತ್ತು. ಹಾಗಾಗಿ ಅನೇಕ ಆಡಳಿತ ಮಂಡಳಿಗಳಲ್ಲಿ ಅನಧಿಕೃತ ಸಲಹೆಗಾರನಾಗಿ ಸೇವೆ ಸಲ್ಲಿಸಿದ. ತರಬೇತಿ ಕಾರ್ಯಾಗಾರಗಳನ್ನು, ಶಿಬಿರಗಳನ್ನು ಏರ್ಪಡಿಸಿದ. ಅರ್ಥಶಾಸ್ತ್ರದ ಪ್ರಸಿದ್ಧ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನೆರವಾದ.</p>
<p>ಮೆಕ್‌ಡೊನಾಲ್ಡ್ ಸೋದರರು ನಡೆಸುತ್ತಿದ್ದ ಒಂದು ಸಣ್ಣ ಹೋಟೆಲನ್ನು ಈಗಿನ ಫಾಸ್ಟ್-ಫುಡ್ ರೆಸ್ಟಾರೆಂಟ್‌ಗಳಿಗೆ ಮಾದರಿಯಾಗಿ ರೇ ಕ್ರಾಕ್ ಪರಿಭಾವಿಸಿದ. ಆ ಮಾದರಿಯನ್ನು ಆತ ಸಾವಿರಾರು ಸ್ಥಳಗಳಲ್ಲಿರುವ, ಶತಶತಕೋಟಿ ಆದಾಯ ಇರುವ ಈಗಿನ ಅಂತರರಾಷ್ಟ್ರೀಯ ಮೆಕ್‌ಡೊನಾಲ್ಡ್ ಹೋಟೆಲ್ ಸರಣಿಯಾಗಿ ಪರಿವರ್ತಿಸಿದ. ಯಾವುದೇ ತರಹದ ವ್ಯವಹಾರಿಕ ಅನುಭವವಿಲ್ಲದ, ಆಗತಾನೆ ಒಂದು ಸಣ್ಣ ಮಗುವಿನ ತಾಯಿಯಾಗಿದ್ದ ಡೆಬ್ಬಿ ಫೀಲ್ಡ್ಸ್ ಕೇವಲ ಬಿಸ್ಕತ್ತುಗಳನ್ನು ಮಾರುವ ಅಂಗಡಿಯೊಂದನ್ನು ಯಶಸ್ವಿಯಾಗಿ ನಡೆಸುವ ಕನಸು ಕಂಡಳು. ಅದಾದ ಇಪ್ಪತ್ತು ವರ್ಷಗಳ ನಂತರ ಅಮೆರಿಕದಲ್ಲಿ ಮತ್ತು ಇತರ ಹನ್ನೊಂದು ದೇಶಗಳಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚಿನ ಬಿಸ್ಕತ್ ಅಂಗಡಿಗಳನ್ನು ಆಕೆ ಹೊಂದಿದ್ದಳು.</p>
<p>ಹೊಸ ತರಹದ ತ್ವರಿತ ಅಂಚೆ ಸೇವೆಯ ಬಗ್ಗೆ ಫ್ರೆಡ್‌ರಿಕ್ ಸ್ಮಿಥ್ ಆಲೋಚಿಸಿದ. ಆ ಆಲೋಚನೆಯೆ ಸಹಸ್ರಾರು ಕೋಟಿಗಳ ಆದಾಯವಿರುವ, ಆರು ನೂರಕ್ಕೂ ಹೆಚ್ಚಿನ ಕಾರ್ಗೋ ವಿಮಾನಗಳಿರುವ, 61,000 ವಾಹನಗಳಿರುವ, 1,90,000 ನೌಕರರ, ಪ್ರತಿನಿತ್ಯ ಸರಾಸರಿ 30 ಲಕ್ಷ ಟಪಾಲುಗಳನ್ನು ಪ್ರಪಂಚದಾದ್ಯಂತ ವಿತರಿಸುವ ಫೆಡ್‌ಎಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮೂಲ ಕಾರಣವಾಯಿತು.</p>
<p>1844 ರಲ್ಲಿ ಜಾರ್ಜ್ ವಿಲ್ಲಿಯಮ್ಸ್ ಎಂಬಾತ ಲಂಡನ್ನಿನ ಜವಳಿ ಅಂಗಡಿಯಲ್ಲಿ ಸಹಾಯಕ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಮನುಷ್ಯ. ಆಗಿನ ಕಾಲದಲ್ಲಿ ಆತನಂತಹ ಯುವಜನರು ಪ್ರತಿನಿತ್ಯ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದರು. ಅವರು ನಿದ್ದೆ ಮಾಡುತ್ತಿದ್ದದ್ದು ಅವರಂತಹದೆ ಜನರಿಂದ ತುಂಬಿಹೋಗಿರುತ್ತಿದ್ದ ಕೆಲಸದ ಸ್ಥಳದಲ್ಲಿಯೆ. ಆದರೆ ವಿಲ್ಲಿಯಮ್ಸ್‌ಗೆ ತನ್ನಂತೆ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಬಂದ ಯುವಕರಿಗೆ ಕೆಲಸದ ಸ್ಥಳದಿಂದ ಹೊರಗಿನ ಜೀವನವೇ ಇಲ್ಲ, ಇದ್ದರೂ ಅದು ಸರಿಯಾದುದಾಗಿಲ್ಲ ಎಂಬ ಸಂಗತಿ ಬಹಳ ಬಾಧಿಸಿತು. ಹಾಗಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಪೂರಕವಾಗುವಂತೆ ಒಬ್ಬರಿಗೊಬ್ಬರು ಸಹಾಯ ಮಡುವ ಕ್ರಿಶ್ಚಿಯನ್ ಫೆಲೊಷಿಪ್ ಒಂದನ್ನು ಆತ ತನ್ನ ಕೆಲವು ಸಹೋದ್ಯೋಗಿಗಳೊಡನೆ ಸೇರಿ ಪ್ರಾರಂಭಿಸಿದ. ಆತನ ಆ ವಿಚಾರಕಾರ್ಯ ಬೆಳೆಯುತ್ತಾ ಹೋಯಿತು. ಒಂದೂವರೆ ಶತಮಾನದ ನಂತರ ಈಗ ಅದೇ ಗುಂಪು ಯಾವ ಮಟ್ಟಕ್ಕೆ ಬೆಳೆದಿದೆ ಅಂದರೆ, ಒಂದು ನೂರಾ ಮುವ್ವತ್ತು ದೇಶಗಳಲ್ಲಿ ಗಂಡಸರು, ಹೆಂಗಸರು, ಮಕ್ಕಳೂ ಸೇರಿದಂತೆ ಮೂರು ಕೋಟಿಗೂ ಹೆಚ್ಚು ಜನ ತಮ್ಮ ದೈಹಿಕ ಮತ್ತು ಮಾನಸಿಕ ಶಿಸ್ತು ಉಳಿಸಿಕೊಳ್ಳಲು YMCA ಗೆ ಪ್ರತಿನಿತ್ಯ ಹೋಗಿ ಬರುತ್ತಿರುತ್ತಾರೆ.</p>
<p>ಪಾಲ್ ಹ್ಯಾರಿಸ್ ಎನ್ನುವ ಷಿಕಾಗೊ ನಗರದ ವಕೀಲನಿಗೆ ಒಂದು ದೊಡ್ಡ ಯೋಚನೆ ಹುಟ್ಟಿಕೊಂಡಿತು. ತನ್ನ ಆಲೋಚನೆಯನ್ನು ಆತ ತನ್ನ ಮೂವರು ಸ್ನೇಹಿತರೊಂದಿಗೆ 1905 ರಲ್ಲಿ ಹಂಚಿಕೊಂಡ. ಬ್ಯುಸಿನೆಸ್ ಪ್ರಪಂಚದ ಜನರಲ್ಲಿ ಸಮುದಾಯ ಮತ್ತು ಸೇವಾಮನೋಭಾವ ವೃದ್ಧಿಸಲು ಅನುಕೂಲವಾಗುವಂತೆ ಒಂದು ಕ್ಲಬ್ಬನ್ನು ಸ್ಥಾಪಿಸಬೇಕು ಎನ್ನುವುದು ಆತನ ವಿಚಾರ. ಆತನ ಆಲೋಚನೆಯನ್ನು ಅವನ ಸ್ನೇಹಿತರೂ ಅಪ್ಪಿಕೊಂಡರು. ಅದರಿಂದ ಇವತ್ತು ಏನಾಗಿದೆ ಅಂದರೆ, 161 ದೇಶಗಳಲ್ಲಿ ಹಬ್ಬಿರುವ 29000 ರೋಟರಿ ಕ್ಲಬ್ಬುಗಳಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚಿನ ಉದ್ದಿಮೆಸಂಸ್ಥೆಗಳು ಮತ್ತು ವೃತ್ತಿಪರರು ಆ ಸಮುದಾಯ ಭಾವವನ್ನು ಹಂಚಿಕೊಳ್ಳುತ್ತ ಮಾನವೀಯ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.</p>
<p>1976 ರಲ್ಲಿ ಮಿಲ್ಲರ್ಡ್ ಮತ್ತು ಲಿಂಡಾ ಫುಲ್ಲರ್‌ರಿಗೆ ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ ಎಂಬ ದೊಡ್ಡ ಕನಸು ಹುಟ್ಟಿಕೊಂಡಿತು. ತಮ್ಮ ಜೀವಮಾನದಲ್ಲಿ ತಮಗೆಂದೂ ತಲೆಯ ಮೇಲೊಂದು ಸ್ವಂತ ಸೂರು ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ಜನರಿಗೆ ಸ್ವಂತ ಮನೆ ಸಾಧ್ಯವಾಗುವಂತೆ ಮಾಡುವ ದಿಕ್ಕಿನಲ್ಲಿ ತಾವು ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ಅದರಲ್ಲಿ ತೊಡಗಿಸಿಕೊಂಡರು. ಈಗ ಕೇವಲ ೨೫ ವರ್ಷಗಳಲ್ಲಿ, ಪ್ರಪಂಚದಾದ್ಯಂತ 85000 ಮನೆಗಳನ್ನು ಕಟ್ಟಿಸಿ 4,25,000 ಜನರಿಗೆ ಸುರಕ್ಷಿತವಾದ, ಕೈಗೆಟುಕುವ ಬೆಲೆಯಲ್ಲಿ ಮನೆ ಲಭಿಸುವಂತೆ ಮಾಡುವಲ್ಲಿ ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ ಸಫಲವಾಗಿದೆ.</p>
<p>ಹವಾಯಿಯಲ್ಲಿ ಜೀವಿಸುತ್ತಿದ್ದ ಫಿಲಿಫ್ಪೈನ್ಸ್ ಮೂಲದ ಡಾ. ರಮೋನ್ ಕೆ. ಸೈ ಮತ್ತು ಇತರ ಆರು ಜನ ವೈದ್ಯರು 1983 ರಲ್ಲಿ ತಮ್ಮ ತಾಯ್ನಾಡಿನ ಜನರ ಸೇವೆ ಮಾಡಲು ಫಿಲಿಫ್ಪೈನ್ಸ್‌ಗೆ ಹಿಂದಿರುಗಿದರು. ಈ ಸಣ್ಣ ಗುಂಪಿನ ಆಲೋಚನೆ ಕಾಲಕ್ರಮೇಣ ಅಲೋಹ ಮೆಡಿಕಲ್ ಮಿಷನ್ ಎಂಬ ಸಂಸ್ಥೆಯ ಸ್ಥಾಪನೆಗೆ ಕಾರಣವಾಗಿ, ಆ ಸಂಸ್ಥೆಯ ಆರುನೂರು ಜನ ಕಾರ್ಯಕರ್ತರು ಫಿಲಿಫ್ಪೈನ್ಸ್, ಚೀನಾ, ವಿಯೆಟ್ನಾಮ್, ಬಾಂಗ್ಲಾದೇಶ, ಕಾಂಬೋಡಿಯ, ಲಾವೋಸ್ ಮುಂತಾದ ದೇಶಗಳಲ್ಲಿನ ಸುಮಾರು 60,000 ಜನರಿಗೆ ಶಸ್ತ್ರಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ಸೇವೆ ಸಲ್ಲಿಸುವಿಕೆಗೆ ಮೂಲಕಾರಣವಾಗಿದೆ.</p>
<p>ಜನ-ಸಮುದಾಯ-ದೇಶಗಳು ತಮ್ಮತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವಲ್ಲಿ ದೊಡ್ಡದೊಡ್ಡ ವಿಚಾರಗಳು ನೆರವಾಗಿವೆ. ಆ ಉನ್ನತ ವಿಚಾರಗಳು ಅನೇಕ ಜೀವಗಳನ್ನು ಉಳಿಸಿವೆ. ನೈಸರ್ಗಿಕ ಪರಿಸರವನ್ನು ಹಾಗೆಯೆ ಉಳಿಸಿಕೊಳ್ಳಲು ಶಕ್ತವಾಗಿವೆ. ಹೊಸಹೊಸ ಸೇವೆಗಳಿಗೆ ದಾರಿ ತೆರೆದಿವೆ. ಕೋಟ್ಯಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ. ಸಮುದಾಯಗಳನ್ನು ಕಟ್ಟಿವೆ. ದೊಡ್ಡ ವಿಚಾರಗಳು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿವೆ. ಕೋಟ್ಯಾಂತರ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಿವೆ.</p>
<p>ದೊಡ್ಡ ವಿಚಾರಧಾರೆಯನ್ನು ಹೊಂದಿರುವುದು ಅಥವ ದೊಡ್ಡ ಕನಸು ಕಾಣುವುದು ನಿಮ್ಮ ಜೀವನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಮಾಡಬಹುದು. ನೀವು ದೃಷ್ಟಿಯನ್ನು ಕೇಂದ್ರೀಕರಿಸಿ ಒಂದು ಸ್ಪಷ್ಟ ದಿಕ್ಕಿನತ್ತ ಮುನ್ನಡೆಯಲು ಅದು ಕಾರಣವಾಗುತ್ತದೆ. ಯಾವುದೊ ಒಂದು ಸಾಧನೆಗಾಗಿ ಶ್ರಮಿಸಲು ಅದು ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮ ಆ ದೊಡ್ಡ ಆಲೋಚನೆಯನ್ನು ಯಾರಾದರೂ ಹೊಡೆದು ಕೆಳಗುರುಳಿಸಿದರೆ ಅದರಿಂದ ಕುಗ್ಗದೆ ಮತ್ತೆ ಆ ಆಲೋಚನೆಯನ್ನು ನೆಲದಿಂದ ಮೇಲಕ್ಕೆತ್ತಿಕೊಂಡು, ಅದರ ಧೂಳೊರೆಸಿ, ಮತ್ತೆ ಮುನ್ನಡೆಯಿರಿ. ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವತ್ತ ನೀವಿಡುವ ಪ್ರತಿಯೊಂದು ಹೆಜ್ಜೆಯೂ ನಿಮಗೆ ಅಗಣಿತ ಆತ್ಮಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತಾ ಹೋಗುತ್ತದೆ.</p>
<p style="text-align: center;"><strong><big>ಅತ್ಯುನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.<br />
<span style="color: #00e055;">ಆದ್ರೂ, ದೊಡ್ಡದಾಗಿಯೆ ಆಲೋಚಿಸಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%207.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%207.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=50</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%207.mp3" length="13691008" type="audio/mpeg" />
		</item>
		<item>
		<title>ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.</title>
		<link>http://www.ravikrishnareddy.com/anyway-kannada/?p=47</link>
		<comments>http://www.ravikrishnareddy.com/anyway-kannada/?p=47#comments</comments>
		<pubDate>Wed, 24 Dec 2008 19:20:50 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=47</guid>
		<description><![CDATA[ಅದು ಅರವತ್ತರ ದಶಕ. ಅಮೆರಿಕದ ಮಧ್ಯಭಾಗದ ರಾಜ್ಯವೊಂದರ ವಿಶ್ವವಿದ್ಯಾಲಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಅಧ್ಯಾಪಕ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅವುಗಳಲ್ಲಿನ ಒಂದು ಗುಂಪಿಗೆ ನಾನು ಮಾರ್ಗದರ್ಶಕ. ನನ್ನಷ್ಟು ಚಿಕ್ಕ ವಯಸ್ಸಿನವನನ್ನು ಆ ವಿಶ್ವವಿದ್ಯಾಲಯದವರು ಅಲ್ಲಿಯ ತನಕ ನೇಮಿಸಿಕೊಂಡೇ ಇರಲಿಲ್ಲ. ಬಹುಶ: ನನ್ನ ವಯಸ್ಸಿನಿಂದಾಗಿಯೆ ಇರಬೇಕು, ಒಂದು ಸಾಯಂಕಾಲದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಶಿಬಿರದ ನಿರ್ದೇಶಕರು ನನಗೆ ಹೇಳಿದ್ದರು.
ನನ್ನ ಭಾಷಣದ ದಿನ ಹತ್ತಿರವಾಗುತ್ತಿದ್ದಂತೆ ಆ ನಿರ್ದೇಶಕರಿಗೆ ಆತಂಕ [...]]]></description>
			<content:encoded><![CDATA[<p>ಅದು ಅರವತ್ತರ ದಶಕ. ಅಮೆರಿಕದ ಮಧ್ಯಭಾಗದ ರಾಜ್ಯವೊಂದರ ವಿಶ್ವವಿದ್ಯಾಲಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಅಧ್ಯಾಪಕ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅವುಗಳಲ್ಲಿನ ಒಂದು ಗುಂಪಿಗೆ ನಾನು ಮಾರ್ಗದರ್ಶಕ. ನನ್ನಷ್ಟು ಚಿಕ್ಕ ವಯಸ್ಸಿನವನನ್ನು ಆ ವಿಶ್ವವಿದ್ಯಾಲಯದವರು ಅಲ್ಲಿಯ ತನಕ ನೇಮಿಸಿಕೊಂಡೇ ಇರಲಿಲ್ಲ. ಬಹುಶ: ನನ್ನ ವಯಸ್ಸಿನಿಂದಾಗಿಯೆ ಇರಬೇಕು, ಒಂದು ಸಾಯಂಕಾಲದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಶಿಬಿರದ ನಿರ್ದೇಶಕರು ನನಗೆ ಹೇಳಿದ್ದರು.</p>
<p>ನನ್ನ ಭಾಷಣದ ದಿನ ಹತ್ತಿರವಾಗುತ್ತಿದ್ದಂತೆ ಆ ನಿರ್ದೇಶಕರಿಗೆ ಆತಂಕ ಶುರುವಾಯಿತು. ಒಂದು ದಿನ ನನ್ನ ಹತ್ತಿರ ಹಾಗೆಯೆ ಲೋಕಾಭಿರಾಮವಾಗಿ ಮಾತನಾಡಲೆಂಬಂತೆ ಬಂದು, ನಾನು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ತಮಾಷೆಯಾಗಿ ಕೇಳಿದರು. ನಾನು ಏನು ಮಾತನಾಡಿಬಿಡುತ್ತೇನೊ ಎಂಬ ಭಯ ಇದ್ದದ್ದರಿಂದ, ಏನು ಮಾತನಾಡಲಿದ್ದೇನೆ ಎಂದು ತಿಳಿದುಕೊಳ್ಳುವ ಕುತೂಹಲ ಅವರಿಗೆ. ನನ್ನ ಭಾಷಣದ ವಿಷಯವನ್ನು ಕುರಿತು ನಾನು ಇನ್ನೂ ಆಲೋಚಿಸುತ್ತಿದ್ದೆ. ಅದನ್ನೆ ಅವರಿಗೆ ಪ್ರಾಮಾಣಿಕವಾಗಿ ಹೇಳಿದೆ. ಅದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದಂತೆ ಕಾಣಿಸಿತು.</p>
<p>ಕೊನೆಗೂ ತಮ್ಮ ಆತಂಕವನ್ನು ತಡೆಹಿಡಿದುಕೊಳ್ಳಲಾಗದೆ ನೇರವಾಗಿ ವಿಷಯಕ್ಕೇ ಬಂದು ಬಿಟ್ಟರು. ನಾನು ಏನೇನೊ ಮಾತನಾಡಿ ಹುಡುಗರನ್ನು ಉದ್ರೇಕಗೊಳಿಸುವುದು ಅವರಿಗೆ ಬೇಕಾಗಿರಲಿಲ್ಲ. ನಾನು &#8220;ಚಳವಳಿಗಾರ&#8221;ನಂತೆ ಮಾತನಾಡುವುದಾಗಲಿ, &#8220;ವ್ಯವಸ್ಥೆ&#8221;ಯ ವಿರುದ್ಧ ಮಾತನಾಡುವುದಾಗಲಿ ಅವರಿಗೆ ಬೇಕಿರಲಿಲ್ಲ. ನಾನು ಹಾಗೆ ಮಾಡಿದ್ದಾದರೆ ಶಿಬಿರದಲ್ಲಿನ ನನ್ನ ಭವಿಷ್ಯಕ್ಕೆ ಒಳ್ಳೆಯದಲ್ಲ; ನಾನು ಯಾರನ್ನೂ ಕೆಣಕದೆ, &#8220;ನಯವಾದ, ಎಲ್ಲಾ ಚೆನ್ನ&#8221; ಎನ್ನುವಂತಹ ಒಂದೆರಡು ಒಳ್ಳೆಯ ಮಾತನ್ನಷ್ಟೆ ಆಡಬೇಕು ಎಂದು ಅವರು ಬಯಸಿದರು. ನಾನು ಹಾಗೆ ಮಾಡುತ್ತೇನೆ ಎಂದುಕೊಂಡೆ ಅವರು ಈ ಮೊದಲು ನನಗೆ ಭಾಷಣ ಮಾಡಲು ಹೇಳಿದ್ದಿದ್ದು.</p>
<p>ಆ ಸಂಜೆ ಬಂತು. ಆಡಿಟೋರಿಯಮ್‌ನ ವೇದಿಕೆಯ ಮೇಲೆ ಹೋಗಿ, ಮಾತನಾಡಲು ಸಿದ್ಧನಾಗಿ ಪೋಡಿಯಮ್‌ನ ಹಿಂದೆ ನಿಂತೆ. ಮುಂದೆ ನೂರಾರು ಜನ ವಿದ್ಯಾರ್ಥಿಗಳು ಕುಳಿತಿದ್ದರು. ಅವರಲ್ಲಿ ಒಂದಷ್ಟು ಜನ ಮಾತನಾಡುತ್ತಿದ್ದರು; ಒಂದಷ್ಟು ಜನ ತಮ್ಮ ಕುರ್ಚಿಗಳಲ್ಲಿ ಇಳಿಜಾರಿಕೊಂಡು ಕುಳಿತಿದ್ದರು; ಮತ್ತೊಂದಷ್ಟು ವಿದ್ಯಾರ್ಥಿಗಳು ಕೂರಲಾಗದ ರೀತಿ ಚಡಪಡಿಸುತ್ತಿದ್ದರು. ಆಡಿಟೋರಿಯಮ್‌ನ ಹಿಂಭಾಗದ ಎರಡು ಸಾಲುಗಳಲ್ಲಿ ಮಾನವ ಗೋಡೆಯ ರೀತಿ ದೊಡ್ಡವರು, ಅಂದರೆ ಅಧ್ಯಾಪಕರು ಮತ್ತು ವಿದ್ಯಾರ್ಥಿ ಮಾರ್ಗದರ್ಶಕರು ಕುಳಿತಿದ್ದರು.</p>
<p>ನಾನು ನಿರ್ಧಾರ ಮಾಡಿಯಾಗಿತ್ತು. ಅಧ್ಯಾಪಕರನ್ನಾಗಲಿ, ವಿದ್ಯಾರ್ಥಿ ಮಾರ್ಗದರ್ಶಕರನ್ನಾಗಲಿ, ಅಥವ &#8220;ವ್ಯವಸ್ಥೆ&#8221;ಯ ಮೇಲಾಗಲಿ ಆಕ್ರಮಣ ಮಾಡಬಾರದು ಎಂದು ನಾನು ನಿರ್ಧರಿಸಿದ್ದೆ. ಅದಕ್ಕಿಂತಲೂ ಮುಖ್ಯವಾದದ್ದನ್ನು ಮಾಡಬೇಕೆಂದು ತೀರ್ಮಾನಿಸಿದ್ದೆ. ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿ ಕೌನ್ಸಿಲ್‌ಗಳ ಬಗ್ಗೆ ನನ್ನ ಅಭಿಪ್ರಾಯ ಏನು ಎಂದು ಹೇಳಲು, ಅವರಿಗೆ ಸವಾಲು ಹಾಕಲು ತೀರ್ಮಾನಿಸಿದ್ದೆ. ಅವರೊಂದಿಗೆ ಪ್ರಾಮಾಣಿಕವಾಗಿ, ಮುಕ್ತವಾಗಿ ಇರಲು ನಿರ್ಧರಿಸಿದ್ದೆ.</p>
<p>ಭಾಷಣವನ್ನು ಆರಂಭಿಸಿ, ಇಲ್ಲಿರುವ ನಿಮ್ಮಲ್ಲಿನ ಬಹುಪಾಲು ವಿದ್ಯಾರ್ಥಿ ಕೌನ್ಸಿಲ್‌ಗಳು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುವ, ಸ್ವಕೇಂದ್ರಿತ, ಸ್ವಹಿತಾಸಕ್ತಿಯನ್ನಷ್ಟೆ ಬಯಸುವ, ಕಾಲೇಜು ಪ್ರವೇಶಕ್ಕೆ ತಮ್ಮ ಪರಿಚಯ ಪತ್ರ ತಯಾರಿಸುವುದರಲ್ಲಷ್ಟೆ ಮಗ್ನರಾಗಿರುವವರ ಗುಂಪು ಎಂದು ನೇರವಾಗಿ ಹೇಳಿದೆ. ನೀವು ಸುಲಭವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರೆಂದೂ, ಯಾರಿಗೆ ಬೇಕಾಗಲಿ ಬಿಡಲಿ ಪ್ರತಿ ವರ್ಷವೂ ಒಂದೇ ತರಹದ ಚಟುವಟಿಕೆಗಳನ್ನು ಮಾಡುತ್ತಿದ್ದೀರೆಂದು ಹೇಳಿದೆ. ಅವರಲ್ಲಿನ ಬಹುಪಾಲು ಜನ ತಮ್ಮನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳ ಬಗ್ಗೆ, ತಮ್ಮ ವಿದ್ಯಾರ್ಥಿ ಸಂಘದ ಬಗ್ಗೆ ಯಾವುದೆ ಕಾಳಜಿ ಹೊಂದಿಲ್ಲವೆಂದೆ. ನೀವು ನಿಮ್ಮ ಸಹವಿದ್ಯಾರ್ಥಿಗಳು ಹೇಳುವುದನ್ನು ಕೇಳಿಸಿಕೊಳ್ಳಬೇಕೆಂದೂ, ಅವರೊಡನೆ ಹೆಚ್ಚಿಗೆ ಬೆರೆಯಬೇಕೆಂದೂ, ಹಾಗೂ ಕೆಲವೊಬ್ಬರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಒಳ್ಳೆಯದಾಗುವಂತೆ ವ್ಯವಸ್ಥೆಯ ಮುಖಾಂತರವೆ ಪ್ರಯತ್ನಿಸಬೇಕೆಂದೂ ಹೇಳಿದೆ. ನಾನು ಅವರಿಗೆ ಹೇಳಿದ ಮಾತಿನ ಅರ್ಥ ಏನಿತ್ತೆಂದರೆ, ನೀವೆಲ್ಲರೂ ವಂಚಕರು, ಆದರೆ ನೀವು ಹಾಗೆ ಆಗುವ ಅವಶ್ಯಕತೆ ಇಲ್ಲ, ಎಂದಾಗಿತ್ತು. ಅವರು ತಮ್ಮ ಶಾಲೆಯಲ್ಲಿನ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಗಣನೀಯವಾದ ಬದಲಾವಣೆಗಳನ್ನು ತರಬಹುದೆಂದು ಹೇಳಿದೆ.</p>
<p>ಅರ್ಧ ಗಂಟೆಯ ನನ್ನ ಭಾಷಣವನ್ನು ಮುಗಿಸಿದಾಗ, ಅಲ್ಲಿ ಮೌನ ನೆಲೆಸಿತ್ತು. ಕೊನೆಯಲ್ಲಿ ಧನ್ಯವಾದ ಹೇಳಿ ನನ್ನ ಟಿಪ್ಪಣಿಗಳನ್ನು ಕೂಡಿಸಿಕೊಳ್ಳಲು ಆರಂಭಿಸಿದೆ. ಆಗ ಚಪ್ಪಾಳೆ ಬೀಳಲು ಆರಂಭವಾಗಿ, ಅದರ ಸದ್ದು ಕ್ಷಣಕ್ಷಣಕ್ಕೂ ಬೆಳೆಯಿತು. &#8220;ಎಲ್ಲಾ ಚೆನ್ನಾಗಿದೆ, ಎಲ್ಲಾ ಸರಿ&#8221; ಎನ್ನುವಂತಹ ಅತಿವಿನಯದ ತೋರಿಕೆಯ ವಾತಾವರಣವನ್ನು ಭೇಧಿಸುವುದರಲ್ಲಿ ನಾನು ಸಫಲನಾಗಿದ್ದೆ. ವಿದ್ಯಾರ್ಥಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಕೇವಲ ಪಾರ್ಟಿಗಳನ್ನು ಮಾಡಿಕೊಳ್ಳುವ ಬದಲು ಅದಕ್ಕಿಂತ ಮುಖ್ಯವಾದದ್ದನ್ನು ಮಾಡಲು ಹೇಳಿದ್ದೆ. ಅವರಿಗೆ ವಿಷಯ ಮುಟ್ಟಿತ್ತು.</p>
<p>ವಿದ್ಯಾರ್ಥಿಗಳು ಎದ್ದು, ಮುನ್ನುಗ್ಗುತ್ತ ವೇದಿಕೆಗೇ ಬಂದುಬಿಟ್ಟರು. ನನ್ನನ್ನು ತಮ್ಮ ಭುಜದ ಮೇಲೆ ಹೊತ್ತು ಹೊರಕ್ಕೆ ಕೊಂಡೊಯ್ದರು. ಎಲ್ಲೆಲ್ಲೂ ಹರ್ಷ, ಆನಂದ ಉಕ್ಕುತ್ತಿತ್ತು. ಆಚೆ ನಿಂತು ನಾವೆಲ್ಲ ಬಹಳ ಹೊತ್ತು ಮಾತನಾಡಿದೆವು. ನಮ್ಮ ಆ ಮಾತುಕತೆಗಳೆಲ್ಲ ಪ್ರಾಮಾಣಿಕವಾಗಿದ್ದವು. ನಾವು ಈಗ ಮಾಡುತ್ತಿರುವುದಕ್ಕಿಂತ ಇನ್ನೂ ಹೆಚ್ಚಿನ ಕೆಲಸ ಮಾಡಬಹುದು; ನಮ್ಮಂತವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು; ನಮ್ಮ ಶಾಲೆಯ ವಾರ್ಷಿಕ ದಿನಾಚರಣೆಯ ದಿನ ಯಾವ ಹಾಡುಗಳನ್ನು ಹಾಡಿಸಬೇಕು ಎಂದುಕೊಳ್ಳುವುದಕ್ಕಿಂತ ಇನ್ನೂ ಮುಖ್ಯವಾದದ್ದನ್ನು ನಾವು ಮಾಡಬಹುದು; ಎಂದೆಲ್ಲ ಆ ಮಾತುಕತೆ ಹರಿಯಿತು.</p>
<p>ಹಾಗೆಯೆ ಬಹಳ ಹೊತ್ತು ಹೊರಗೆ ನಿಂತು ಮಾತನಾಡಿದ ಮೇಲೆ, ಅಲ್ಲಿದ್ದ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ನನ್ನ ಕೈಕುಲುಕಿ ತಮ್ಮ ರೂಮುಗಳತ್ತ ಹೋಗಲಾರಂಭಿಸಿದರು. ಅವರೆಲ್ಲರೂ ಹೋದ ನಂತರ ನಾನು ನನ್ನ ರೂಮಿನ ಕಡೆ ನಡೆಯಲಾರಂಭಿಸಿದೆ. ದಾರಿಯಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಲ್ಕು ಜನ ನನ್ನನ್ನು ಸುತ್ತುವರಿದು ಬಿಟ್ಟರು. ಅವರಲ್ಲಿ ಶಿಬಿರದ ನಿರ್ದೇಶಕರೂ ಒಬ್ಬರಾಗಿದ್ದರು. ನನ್ನನ್ನು ಈ ಕೂಡಲೆ ಕೆಲಸದಿಂದ ತೆಗೆದು ಹಾಕಿದ್ದೇನೆಂತಲೂ, ತಕ್ಷಣವೆ ಅಲ್ಲಿಂದ ಜಾಗ ಖಾಲಿ ಮಾಡಿಕೊಂಡು ಹೋಗುವಂತೆಯೂ ನನಗೆ ಅವರು ಹೇಳಿದರು.</p>
<p>ಆ ನಾಲ್ಕೂ ಜನ ಬೆಂಗಾವಲಾಗಿ ನನ್ನ ಜೊತೆಯೆ ರೂಮಿಗೆ ಬಂದರು. ಒಳಗೆ ಬಂದಿದ್ದೆ ಬಾಗಿಲಿನ ಚಿಲಕ ಹಾಕಿದರು. ಕೂಡಲೆ ನನ್ನ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಳ್ಳುವಂತೆ ಆದೇಶಿಸಿದರು. ನಾನು ಒಂದು ಫೋನ್ ಕರೆ ಮಾಡಬೇಕೆಂದರೂ ಅವಕಾಶ ಕೊಡಲಿಲ್ಲ. ಯಾರಿಗಾದರೂ ಸಂದೇಶ ಬಿಡುತ್ತೇನೆ ಎಂದರೆ ಅದಕ್ಕೂ ಅವಕಾಶ ಕೊಡಲಿಲ್ಲ. ನನ್ನ ಗುಂಪಿನಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ನನ್ನ ಒಂದೆರಡು ಸ್ವಂತ ಪುಸ್ತಕಗಳನ್ನು ಕೊಟ್ಟಿದ್ದೇನೆ, ಅವನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಹೇಳಿದರೂ, ಅವರದನ್ನು ಕಿವಿಯ ಮೇಲೆಯೆ ಹಾಕಿಕೊಳ್ಳಲಿಲ್ಲ.</p>
<p>ನನ್ನ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡಾದ ಮೇಲೆ ನನ್ನನ್ನು ಅಲ್ಲಿಂದ ನೇರವಾಗಿ ಪಾರ್ಕಿಂಗ್ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆಗಲೆ ಸಿದ್ಧವಾಗಿ ನಿಂತಿದ್ದ ಕಾರೊಂದರ ಹಿಂಭಾಗದಲ್ಲಿ ನನ್ನನ್ನು ಕೂರಿಸಿದರು. ಬಹುಶಃ ಯಾರಾದರೂ ನೋಡುತ್ತಾರೆ ಎಂತಲೋ ಏನೊ, ಹೆಡ್‌ಲೈಟ್‌ಗಳನ್ನು ಸಹ ಹಾಕದೆ ಆ ಕಾರಿನ ಚಾಲಕ ಪಾರ್ಕಿಂಗ್ ಸ್ಥಳದಿಂದ ಹೊರಹೊರಟ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಸುಮಾರು ಇಪ್ಪತ್ತು ಮೈಲುಗಳ ದೂರ ಬಂದ ಮೇಲೆ ಅಲ್ಲೆಲ್ಲಿಯೊ ಇದ್ದ ಒಂದು ಬಸ್ ನಿಲ್ದಾಣದಲ್ಲಿ ನನ್ನನ್ನು ಇಳಿಸಿದರು. ಆ ಬಸ್‌ನಿಲ್ದಾಣದಲ್ಲಿ ಕೂರಲು ಬೆಂಚೊಂದು ಮಾತ್ರ ಇತ್ತು. ಆಗ ರಾತ್ರಿ ಒಂಬತ್ತೂವರೆ. ರಸ್ತೆಯಲ್ಲಿ ಹೋಗುತ್ತಿದ್ದ ಕಾರುಗಳ ಹೆಡ್‌ಲೈಟುಗಳಿಂದ ತೂರಿ ಬರುತ್ತಿದ್ದ ಬೆಳಕನ್ನೆ ನೋಡುತ್ತ ಕತ್ತಲಲ್ಲಿ ಒಬ್ಬನೇ ಕುಳಿತಿದ್ದೆ. ನನಗಾಗ ಹದಿನೆಂಟು ವರ್ಷ ವಯಸ್ಸು ಮತ್ತು ನಾನು ಆಗ ತಾನೆ ಏನೊ ಒಂದು ಹೊಸ ಪಾಠವನ್ನು ಕಲಿತಿದ್ದೆ.</p>
<p>ನಾವು ಪ್ರಾಮಾಣಿಕವಾಗಿ, ತೆರೆದ ಮನಸ್ಸಿನಿಂದ ಇರಲು ತಿರ್ಮಾನಿಸಿದ್ದೆ ಅಂದು ನನ್ನ ಮತ್ತು ಆ ವಿದ್ಯಾರ್ಥಿಗಳ ನಡುವೆ ಪರಸ್ಪರ ವಿಶ್ವಾಸ ಮೂಡುವಂತಹ ಒಂದು ಸಂಬಂಧ ಏರ್ಪಡಲು ಮುಖ್ಯ ಕಾರಣ, ಎನ್ನುವುದೆ ನಾನು ಅಂದು ಕಲಿತ ಪಾಠ. ನಾವು ತೋರಿಕೆಯ ನಟನೆಯನ್ನು ನಿಲ್ಲಿಸಿ ನೈಜವಾಗಿ ಮಾತನಾಡಲು ಆರಂಭಿಸಿದ್ದೆವು. ನಮ್ಮ ಆ ಪ್ರಾಮಾಣಿಕತೆ ಮತ್ತು ಮುಕ್ತತೆ, ತೋರಿಕೆಯ ನಟನೆಯೆ ಮುಂದುವರೆಯಬೇಕು ಎಂದು ಆಶಿಸಿದ್ದ ದೊಡ್ಡವರಲ್ಲಿ ಭಯವನ್ನುಂಟು ಮಾಡಿತು. ನಾನು ಏನು ಹೇಳಿದೆ ಅದು ನನ್ನನ್ನು ದುರ್ಬಲನನ್ನಾಗಿ ಮಾಡಿತು; ನನ್ನನ್ನು ಅಕ್ಷರಶಃ ಊರಿನಿಂದ ಓಡಿಸುವಂತೆ ಮಾಡಿತು. ಆದರೆ ನಾನು ಅದಕ್ಕೆ ವಿಷಾದ ಪಡಲಿಲ್ಲ. ನಾನು ಮತ್ತು ಆ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕ ಬೆಳೆಸಿಕೊಂಡು ಕಳೆದ ಆ ಸಣ್ಣ ಅವಧಿ ನಿಜಕ್ಕೂ ಅಭೂತಪೂರ್ವವಾಗಿತ್ತು.</p>
<p>ಮಹಾನ್ ವ್ಯಕ್ತಿಗಳ ಬಗ್ಗೆ ಯೋಚಿಸಿದಾಗೆಲ್ಲ ನಾನು ಅವರ ಪ್ರಾಮಾಣಿಕತೆ ಮತ್ತು ತೆರೆದಮನಸ್ಸಿನ ಬಗ್ಗೆ ಯೋಚಿಸುತ್ತೇನೆ. ಅವರ ಪ್ರಾಮಾಣಿಕತೆ ಮತ್ತು ನೇರವಂತಿಕೆಯೆ ನನಗೆ ಅವರನ್ನು ಮೆಚ್ಚಲು ಮತ್ತು ನಂಬಲು ಸುಲಭಸಾಧ್ಯವಾಗಿಸುತ್ತದೆ. ಜಾರ್ಜ್ ವಾಷಿಂಗ್‌ಟನ್ನಿನ ಪ್ರಾಮಾಣಿಕತೆಯ ಬಗ್ಗೆ ಅನೇಕ ದಂತಕತೆಗಳೆ ಇವೆ. ಹಾಗೆಯೆ ಅಬ್ರಹಾಂ ಲಿಂಕನ್‌ನನ್ನು &#8220;ಆನೆಸ್ಟ್ ಏಬ್,&#8221; ಅಂದರೆ, ಪ್ರಾಮಾಣಿಕ ಅಬ್ರಹಾಂ ಎಂದೇ ಅನ್ನುತ್ತಿದ್ದರು. ಅಮೆರಿಕದ ಇನ್ನೊಬ್ಬ ರಾಷ್ಟ್ರಾಧ್ಯಕ್ಷ ಹ್ಯಾರಿ ಟ್ರೂಮನ್‌ನಲ್ಲಿ ನಾವು ಮೆಚ್ಚುವ ಅತಿ ದೊಡ್ಡ ಗುಣವೆಂದರೆ ಇದ್ದದ್ದನ್ನು ಇದ್ದಂತೆ ಹೇಳುತ್ತಿದ್ದ ಆತನ ನೇರವಂತಿಕೆ.</p>
<p><span style="color: #000080;"><span style="color: #000080;"><font color="#000080"><strong>ನಾವು ಪರಸ್ಪರರೊಂದಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇದ್ದಾಗ ದೃಢವಾದ ಸಂಬಂಧಗಳನ್ನು ಕಟ್ಟಬಹುದು. ಹಾಗಿದ್ದಾಗ ನಮ್ಮನಮ್ಮ ನಿಲುವುಗಳೇನು ಎನ್ನುವುದು ನಮಗೆ ಗೊತ್ತಿರುತ್ತದೆ. ಪರಸ್ಪರರ ಅವಶ್ಯಕತೆಗಳನ್ನು ಪೂರೈಸುವುದು ಹೇಗೆ ಮತ್ತು ಪರಸ್ಪರರ ಕನಸುಗಳನ್ನು ನನಸು ಮಾಡುವುದು ಹೇಗೆ ಎನ್ನುವುದೂ ನಮಗೆ ಗೊತ್ತಿರುತ್ತದೆ. ಅದಿಲ್ಲದಿದ್ದರೆ, ನಾವು ತಪ್ಪುಗಳನ್ನು ಮಾಡುತ್ತೇವೆ. ನಮಗೆ ಗೊತ್ತಿಲ್ಲದೆ ನಮ್ಮನ್ನು ನಾವೆ ಗಾಸಿ ಮಾಡಿಕೊಳ್ಳುತ್ತೇವೆ ಹಾಗು ಇತರರನ್ನೂ ಗಾಸಿ ಮಾಡುತ್ತೇವೆ.</strong></font></span><strong></strong></span><strong></strong></p>
<p>ಕೌಟುಂಬಿಕ ಜೀವನದಲ್ಲಿ ಮತ್ತು ಹಾಗೆಯೆ ಸಂಘಸಂಸ್ಥೆಗಳ ಸೇವಾಜೀವನದಲ್ಲಿಯೂ ಅತ್ಯಂತ ಮುಖ್ಯವಾದ ವಿಷಯ ಏನೆಂದರೆ ನಂಬಿಕೆ ಮತ್ತು ವಿಶ್ವಾಸ. ನಿಮ್ಮ ಭಾವನೆಗಳನ್ನು, ನಿಮ್ಮ ಆಲೋಚನೆಗಳನ್ನು, ನಿಮ್ಮ ಕನಸುಗಳನ್ನು, ನಿಮ್ಮ ಭಯಗಳನ್ನು ಮುಚ್ಚಿಟ್ಟುಕೊಳ್ಳುವುದರ ಮೂಲಕ ನೀವು ನಂಬಿಕೆಯನ್ನು ಕಟ್ಟಲಾಗುವುದಿಲ್ಲ. ಅವೆಲ್ಲವನ್ನೂ ಹಂಚಿಕೊಳ್ಳುವುದರಿಂದ, ಪ್ರಾಮಾಣಿಕವಾಗಿ, ಮುಕ್ತವಾಗಿ ಇರುವುದರಿಂದ ನೀವು ನಂಬಿಕೆಯನ್ನು ಕಟ್ಟಿ ಬೆಳೆಸುತ್ತೀರಿ. ನಿಮ್ಮ ಸಂಬಂಧಗಳಲ್ಲಿ, ತಂಡದಲ್ಲಿ, ಸಂಸ್ಥೆಯಲ್ಲಿ, ಹಾಗೂ ಸಮುದಾಯದಲ್ಲಿ ನೀವು ಯಶಸ್ವಿಯಾಗಬೇಕಾದರೆ, ನಂಬಿಕೆಯನ್ನು ಬೆಳೆಸುವುದು ನೀವು ಮಾಡಲೇಬೇಕಾದ ಕೆಲಸ. ಅದಿಲ್ಲದೆ ನೀವು ಯಶಸ್ವಿಯಾಗಲಾರಿರಿ.</p>
<p>ಹೌದು, ಜಾಣ್ಮೆಯಿಂದ ಇರಬೇಕಾದದ್ದು ಬಹಳ ಮುಖ್ಯವೆ. ಕೆಲವೊಂದು ವಿಷಯಗಳನ್ನು ಹೇಳುವುದಕ್ಕೆ ಸಮಯ-ಸಂದರ್ಭ ಇರುತ್ತದೆ. ಹಾಗೆಯೆ, ಯಾವ ಸಮಯದಲ್ಲಿಯೂ ಹೇಳಲೇಬಾರದ ಕೆಲವೊಂದು ವಿಷಯಗಳೂ ಇರುತ್ತವೆ. ಅಂತರಂಗದಲ್ಲಿ ಹೇಳಿದ ಕೆಲವೊಂದು ವಿಷಯಗಳ ಗೋಪ್ಯತೆ ಉಳಿಸಿಕೊಳ್ಳುವುದು ವಿಶ್ವಾಸಪೂರ್ವಕ ಸಂಬಂಧದಲ್ಲಿ ಬಹಳ ಮುಖ್ಯವಾದ ಭಾಗ. ಕೆಲವನ್ನು ಕೇವಲ ಒಬ್ಬರಲ್ಲಿ, ಮತ್ತೆ ಕೆಲವನ್ನು ಕೇವಲ ಕೆಲವೇ ಜನರಲ್ಲಿ ಹಂಚಿಕೊಳ್ಳಲು ಮಾತ್ರ ಅವು ಯೋಗ್ಯವಾಗಿರುತ್ತವೆ. ಆದರೆ ನಿಮ್ಮ ಬಹಳಷ್ಟು ದೈನಂದಿನ ವಿಷಯಗಳಲ್ಲಿ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇರಲು ಜಾಣ್ಮೆ ಮತ್ತು ಗೋಪ್ಯತೆಗಳು ಯಾವುದೆ ಅಡ್ಡಿ ಮಾಡುವುದಿಲ್ಲ.</p>
<p>ಹೌದು, ಪ್ರಾಮಾಣಿಕತೆ ಮತ್ತು ಮುಕ್ತತೆ ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ ಎನ್ನುವುದೇನೊ ನಿಜ. ನೀವು ಹಾಗೆ ಮುಕ್ತವಾಗಿ ಇದ್ದಾಗ ನಿಮಗೆ ಗಾಸಿ ಮಾಡುವುದು ಹೇಗೆ, ನಿಮ್ಮ ಮೇಲೆ ಹೇಗೆ ದಾಳಿ ಮಾಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಜನರಿಗೆ ಸುಲಭವಾಗಿ ಗೊತ್ತಾಗಿ ಬಿಡುತ್ತದೆ. ನಿಮ್ಮ ರಕ್ಷಣಾವಲಯದಿಂದ ಹೊರಬಂದ ತಕ್ಷಣ ನಿಮಗೆ ರಕ್ಷಣೆ ಇಲ್ಲವಾಗಿ ಬಿಡುತ್ತದೆ. ಇದು ನಿಮ್ಮ ಅನ್ಯೋನ್ಯ ಸಂಬಂಧಗಳಲ್ಲಷ್ಟೆ ಅಲ್ಲ, ನಿಮ್ಮ ಸ್ನೇಹಿತರ ಗುಂಪುಗಳಲ್ಲಿಯೂ, ನೀವು ಕೆಲಸ ಮಾಡುವ ಸಂಸ್ಥೆಗಳ ವಿಷಯದಲ್ಲಿಯೂ ನಿಜ.</p>
<p>ಆದರೆ, ಇಂತಹ ದುರ್ಬಲತೆಯೂ ಒಳ್ಳೆಯದೆ. ನೀವು ದುರ್ಬಲವಾಗಿದ್ದಾಗ ಜನರೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದು ಸುಲಭವಾಗುತ್ತದೆ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಅವರಿಂದ ಕಲಿಯಲು ಸುಲಭವಾಗುತ್ತದೆ. ಅದೇ ರೀತಿ ಅವರಿಗೂ ಸಹ ನಿಮ್ಮೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಈ ದುರ್ಬಲತೆ ಹೊಸ ಸಂಬಂಧಗಳಿಗೆ, ಹೊಸ ಅವಕಾಶಗಳಿಗೆ, ಹೊಸ ದಾರಿಗಳಿಗೆ, ಹೊಸ ಬದುಕಿಗೆ, ಹಾಗೆಯೆ ಜೊತೆಯಾಗಿ ಕೂಡಿ ಕೆಲಸ ಮಾಡುವುದಕ್ಕೆ ಬಾಗಿಲು ತೆರೆಯುತ್ತದೆ.</p>
<p>ಸಂಘರ್ಷದಿಂದ ಕೂಡಿದ ಈ ಪ್ರಪಂಚ ನಾವು ನಮ್ಮ ರಕ್ಷಣಾವಲಯವನ್ನು ಭದ್ರಪಡಿಸಿಕೊಂಡು, ಕವಚಧಾರಿಗಳಾಗಿ ಓಡಾಡಲು ಪ್ರಲೋಭಿಸುತ್ತದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಒಂದು ನಿರ್ದಿಷ್ಟ ಅಳತೆಯಲ್ಲಿ ಹಿಡಿದಿಟ್ಟು ಕೊಳ್ಳುವುದರ ಮೂಲಕ ಕವಚ ನಿಮ್ಮನ್ನು ರಕ್ಷಿಸುತ್ತದೆ. ಆ ಕವಚ ಎಷ್ಟು ದೊಡ್ಡದಿದೆಯೊ ಅಷ್ಟು ಮಾತ್ರ ನೀವು ಬೆಳೆಯಲು ಸಾಧ್ಯ. ಇನ್ನೂ ಬೆಳೆಯಬೇಕೆಂದರೆ ನೀವು ಆ ರಕ್ಷಣಾಕವಚದಿಂದ ಹೊರ ಬರಲೇ ಬೇಕು.</p>
<p>ಆ ರಕ್ಷಣಾಕವಚದಿಂದ ಹೊರ ಬಂದ ತಕ್ಷಣ ಮತ್ತೆ ನೀವು ದುರ್ಬಲರಾಗಿಬಿಡುತ್ತೀರ. ಆದರೆ ಆ ಅಸುರಕ್ಷಿತೆಯ ಜೊತೆಜೊತೆಗೆ ಬೆಳೆಯುವ ಸ್ವಾತಂತ್ರ್ಯವೂ ಬರುತ್ತದೆ. ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬೆಳೆಯುತ್ತ ಹೋದಂತೆ, ನಿಮಗೆ ಆ ರಕ್ಷಣಾಕವಚದ ಅವಶ್ಯಕತೆ ಇಲ್ಲ ಎಂದು ತಿಳಿಯುತ್ತಾ ಹೋಗುತ್ತದೆ. ನಿಮಗೆ ತಾಕತ್ತು ನಿಮ್ಮ ಒಳಗಿನಿಂದ ಬರುತ್ತದೆ.</p>
<p>ಹಾಗಾಗಿ, ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇರಲು ನಿಮ್ಮ ಕೈಯ್ಯಲ್ಲಿ ಎಷ್ಟೆಲ್ಲ ಸಾಧ್ಯವೊ ಅಷ್ಟೆಲ್ಲ ಮಾಡಿ. ಅದು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ, ಆದರೆ ಆ ದುರ್ಬಲತೆಯೆ ನೀವು ಇತರರೊಂದಿಗೆ ಬೆರೆಯಲು, ಹಾಗೂ ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಕವಚದಿಂದ ಹೊರಬನ್ನಿ. ಪ್ರಾಮಾಣಿಕವಾಗಿ, ಮುಕ್ತವಾಗಿ ಇರುವುದರಿಂದ ಹುಟ್ಟುವ ಅರ್ಥ ಮತ್ತು ಸಂತೃಪ್ತಿಯನ್ನು ಆನಂದಿಸಿ.</p>
<p style="text-align: center;"><strong><big>ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.<br />
<span style="color: #00e055;">ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%206.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%206.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=47</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%206.mp3" length="11855872" type="audio/mpeg" />
		</item>
		<item>
		<title>ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.</title>
		<link>http://www.ravikrishnareddy.com/anyway-kannada/?p=39</link>
		<comments>http://www.ravikrishnareddy.com/anyway-kannada/?p=39#comments</comments>
		<pubDate>Sun, 21 Dec 2008 21:41:47 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=39</guid>
		<description><![CDATA[ನಾನು ಪ್ರೈಮರಿ ಸ್ಕೂಲ್‌ನಲ್ಲಿದ್ದಾಗ ಓದಿದ್ದ ಈಜಿಪ್ಟಿನ ಒಬ್ಬ ಯುವ ಮೇಸ್ತ್ರಿಯೊಬ್ಬನ ಕತೆ ಜ್ಞಾಪಕಕ್ಕೆ ಬರುತ್ತಿದೆ. ಈಜಿಪ್ಟಿನ ರಾಜ ಫೆರೋವಿನ ಪಿರಮಿಡ್ ಒಂದಕ್ಕೆ ತಳಪಾಯ ಹಾಕುವ ಕೆಲಸದ ಉಸ್ತುವಾರಿಯನ್ನು ಆ ಯುವ ಮೇಸ್ತ್ರಿ ನೋಡಿಕೊಳ್ಳುತ್ತಿದ್ದ. ಉರಿಬಿಸಿಲಿನಲ್ಲಿ ನಿಂತು, ಕೆಲಸದಾಳುಗಳನ್ನು ಹುರಿದುಂಬಿಸುತ್ತ, ಅವರ ಕೆಲಸವನ್ನು ಸೂಕ್ಷ್ಮವಾಗಿ ನೋಡಿ ಪರಿಶೀಲಿಸುತ್ತ, ತಪ್ಪುಗಳನ್ನು ತಿದ್ದುತ್ತಿದ್ದ. ಯಾವುದಾದರೂ ಒಂದು ಕಲ್ಲು ಸರಿಯಾಗಿ ಕುಳಿತಿಲ್ಲ ಅಂದರೆ ಅದನ್ನು ಅಲ್ಲಿಗೇ ಬಿಡದೆ, ಪ್ರತಿಯೊಂದು ಕಲ್ಲನ್ನೂ ಸರಿಪಡಿಸಿ, ಎಲ್ಲವೂ ಕ್ರಮಬದ್ಧವಾಗಿ ಕೂರುವಂತೆ ಮಾಡಿಸುತ್ತಿದ್ದ.
ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಮೇಸ್ತ್ರಿ ಕೊನೆಗೂ [...]]]></description>
			<content:encoded><![CDATA[<p>ನಾನು ಪ್ರೈಮರಿ ಸ್ಕೂಲ್‌ನಲ್ಲಿದ್ದಾಗ ಓದಿದ್ದ ಈಜಿಪ್ಟಿನ ಒಬ್ಬ ಯುವ ಮೇಸ್ತ್ರಿಯೊಬ್ಬನ ಕತೆ ಜ್ಞಾಪಕಕ್ಕೆ ಬರುತ್ತಿದೆ. ಈಜಿಪ್ಟಿನ ರಾಜ ಫೆರೋವಿನ ಪಿರಮಿಡ್ ಒಂದಕ್ಕೆ ತಳಪಾಯ ಹಾಕುವ ಕೆಲಸದ ಉಸ್ತುವಾರಿಯನ್ನು ಆ ಯುವ ಮೇಸ್ತ್ರಿ ನೋಡಿಕೊಳ್ಳುತ್ತಿದ್ದ. ಉರಿಬಿಸಿಲಿನಲ್ಲಿ ನಿಂತು, ಕೆಲಸದಾಳುಗಳನ್ನು ಹುರಿದುಂಬಿಸುತ್ತ, ಅವರ ಕೆಲಸವನ್ನು ಸೂಕ್ಷ್ಮವಾಗಿ ನೋಡಿ ಪರಿಶೀಲಿಸುತ್ತ, ತಪ್ಪುಗಳನ್ನು ತಿದ್ದುತ್ತಿದ್ದ. ಯಾವುದಾದರೂ ಒಂದು ಕಲ್ಲು ಸರಿಯಾಗಿ ಕುಳಿತಿಲ್ಲ ಅಂದರೆ ಅದನ್ನು ಅಲ್ಲಿಗೇ ಬಿಡದೆ, ಪ್ರತಿಯೊಂದು ಕಲ್ಲನ್ನೂ ಸರಿಪಡಿಸಿ, ಎಲ್ಲವೂ ಕ್ರಮಬದ್ಧವಾಗಿ ಕೂರುವಂತೆ ಮಾಡಿಸುತ್ತಿದ್ದ.</p>
<p>ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಮೇಸ್ತ್ರಿ ಕೊನೆಗೂ ತಾಳಲಾರದೆ ಅವನಿಗೆ ಬುದ್ಧಿ ಹೇಳಲು ಬಂದ. &#8220;ಈ ಅಡಿಪಾಯ ಭೂಮಿಯ ಒಳಗೆ ಇರುತ್ತದೆ. ಯಾರಿಗೂ ಅದು ಕಾಣಿಸುವುದಿಲ್ಲ. ಅದಕ್ಕೆ ಇಷ್ಟು ಯೋಚನೆ ಮಾಡಬೇಡ. ಯಾರಿಗೂ ಅದು ಗೊತ್ತಾಗುವುದಿಲ್ಲ,&#8221; ಎಂದ.</p>
<p>&#8220;ಯಾರಿಗೆ ಗೊತ್ತಾಗದಿದ್ದರೂ ನನಗೆ ಗೊತ್ತಾಗುತ್ತದೆಯಲ್ಲ?&#8221; ಎಂದ ಆ ಯುವಮೇಸ್ತ್ರಿ, ತನ್ನ ಕೆಲಸ ಮುಂದುವರೆಸಿದ.</p>
<p>ಯಾವುದು ಸರಿಯಾದದ್ದೊ, ಒಳ್ಳೆಯದ್ದೊ, ಮತ್ತು ಸತ್ಯವಾದದ್ದೊ, ಅದನ್ನು ನೀವು ಮಾಡಿದಾಗ ನಿಮಗೆ ಅದು ಗೊತ್ತಿರುತ್ತದೆ ಹಾಗೂ ನಿಮಗೆ ನೆನಪಿನಲ್ಲಿರುತ್ತದೆ. ನಿಮಗೆ ಬೇಕಾದ ಎಲ್ಲಾ ರೀತಿಯ ವೈಯಕ್ತಿಕ ಅರಿವು ಮತ್ತು ಸಂತೋಷವನ್ನು ನಿಮಗದು ನೀಡುತ್ತದೆ.</p>
<p><span style="color: #000080;"><span style="color: #000080;"><strong>ಹೌದು, ನೀವು ಮಾಡುವ ಕೆಲವೊಂದು ಒಳ್ಳೆಯ ಕೆಲಸಗಳು ಗುರುತಿಸಲ್ಪಡುತ್ತವೆ. ಆದರೆ ಹೀಗೆ ಗುರುತಿಸಲ್ಪಟ್ಟ ಒಳ್ಳೆಯ ಕೆಲಸಗಳೂ ಕೆಲವೊಮ್ಮೆ ಜನರಿಂದ ಮರೆಯಲ್ಪಡುತ್ತವೆ. ಇಲ್ಲಿ ಮುಖ್ಯವಾದದ್ದು ಏನೆಂದರೆ, ನಾವು ಮಾಡಿದ ಕೆಲಸವನ್ನು ಯಾರಾದರೂ ಜ್ಞಾಪಕವಿಟ್ಟಿದ್ದಾರೆಯೆ ಎನ್ನುವುದಲ್ಲ. ಒಬ್ಬ ಮನುಷ್ಯನಾಗಿ ನೀವು ಏನು ಎನ್ನುವುದು ಇಲ್ಲಿ ಮುಖ್ಯವಾದದ್ದು. ನೀವು ಹೇಗೆ ಬದುಕುತ್ತೀರಿ ಎನ್ನುವುದು ಮುಖ್ಯ. ನೀವು ಔದಾರ್ಯದಿಂದ, ಪ್ರಾಮಾಣಿಕತೆಯಿಂದ ಬದುಕುತ್ತಿರುವುದೆ ನಿಜವಾಗಿದ್ದರೆ, ನೀವು ಮಾಡಿರುವ ಕೆಲಸ ಬೇರೆಯವರಿಗೆ ಗೊತ್ತಿದೆಯೆ, ಅದನ್ನು ನೆನಪಿಟ್ಟಿದ್ದಾರೆಯೆ ಎನ್ನುವುದರ ಕುರಿತು ನೀವು ಯೊಚಿಸುವುದಿಲ್ಲ.</strong></span></span><strong></strong></p>
<p>ಹಾಗಾಗಿಯೆ, ಒಂದು ಒಳ್ಳೆಯ ಕೆಲಸವನ್ನು ನೀವು ಅನಾಮಿಕರಾಗಿಯೂ ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯದನ್ನು ಮಾಡಿದ್ದೀರಾ, ಅಷ್ಟೆ ಸಾಕು. ಯಾರಿಗೊ ಒಬ್ಬರಿಗೆ ಸಹಾಯ ಮಾಡಿದ್ದೀರ ಅಥವ ನಿಮ್ಮ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದೀರ ಎನ್ನುವುದು ನಿಮಗೆ ಗೊತ್ತಾಗಿದ್ದರೆ ಅಷ್ಟೆ ಸಾಕು.</p>
<p>ಆದ್ದರಿಂದಲೆ, ನೀವು ಮಾಡಿರುವ ಒಳ್ಳೆಯ ಕೆಲಸದಿಂದ ನಿಮ್ಮ ಉತ್ತರಾಧಿಕಾರಿಗೆ ಹೆಸರು ಬಂದರೂ ಪರವಾಗಿಲ್ಲ. ಸಂಘಸಂಸ್ಥೆಗಳಲ್ಲಿ ಇದೆಲ್ಲ ಮಾಮೂಲಾಗಿ ಆಗುವಂತಹುದು. ಯಾರೊ ಒಬ್ಬ ಮ್ಯಾನೇಜರ್ ಇಲಾಖೆಯ ಅಥವ ಕಂಪನಿಯ ಭವಿಷ್ಯದ ಉನ್ನತಿಗೆ ಅಡಿಪಾಯ ಹಾಕಲು ಬಹಳ ಕಷ್ಟಪಟ್ಟು ದುಡಿದಿರಬಹುದು. ಆ ಅಡಿಪಾಯ ಇಲ್ಲದಿದ್ದರೆ ಭವಿಷ್ಯದ ಗೆಲುವು, ಏಳಿಗೆ ಸಾಧ್ಯವಿಲ್ಲ. ಆದರೆ ಆ ಯಶಸ್ಸು ಸಿಕ್ಕಾಗ ಆ ಮ್ಯಾನೇಜರ್ ಅಲ್ಲಿಂದ ಬೇರೆಡೆಗೆ ಹೋಗಿರಬಹುದು ಅಥವ ನಿವೃತ್ತಿಯೂ ಆಗಿ ಬಿಟ್ಟಿರಬಹುದು. ಹಾಗಾಗಿ ಆ ಯಶಸ್ಸಿನ ಕ್ರೆಡಿಟ್ ಆತನ ಉತ್ತರಾಧಿಕಾರಿಗೆ ಸಿಕ್ಕಿರುತ್ತದೆ.</p>
<p>ನಿಮ್ಮ ಸಂಸ್ಥೆಯ ಭವಿಷ್ಯಕ್ಕಾಗಿ ನೀವು ಭದ್ರವಾದ ಅಡಿಪಾಯ ಹಾಕಿದಾಗ, ನೀವು ಮಾಡಿರುವ ಒಳ್ಳೆಯ ಕೆಲಸ ನಿಮಗೆ ಗೊತ್ತಾಗಿರುತ್ತದೆ. ಹಾಗೆಯೆ, ನೀವು ಹಾಕಿದ ಅಡಿಪಾಯದಿಂದ ಕಾಲಾಂತರದಲ್ಲಿ ಸಂಸ್ಥೆಗೆ ಸಿಕ್ಕ ಯಶಸ್ಸನ್ನು ನೋಡಿ ಆಗ ನೀವು ಅಲ್ಲಿ ಇಲ್ಲದಿದ್ದರೂ ನಿಮಗೆ ತೃಪ್ತಿ ದೊರೆಯುತ್ತದೆ.</p>
<p>ಅದೇ ರೀತಿಯಲ್ಲಿ ವಸ್ತುಸ್ಥಿತಿ ಏನೆಂದರೆ, ನೀವು ಪಡೆಯುವ ಯಶಸ್ಸಿನ ಅಡಿಪಾಯಗಳನ್ನು ನಿಮ್ಮ ಹಿಂದಿನವರು ಹಾಕಿರುತ್ತಾರೆ ಎನ್ನುವುದು. ಅದು ನಿಮಗವರು ಕೊಟ್ಟಿರುವ ಕಾಣಿಕೆ. ಆ ಕಾಣಿಕೆಯನ್ನು ಹಿಂದಿರುಗಿಸುವ ದಾರಿ ಏನೆಂದರೆ ಅದನ್ನು ಮುಂದಿನವರಿಗೆ ಕೊಟ್ಟು ಹೋಗುವುದು. ನಿಮ್ಮ ಪಾಲಿಗೆ ಬಂದಿರುವ ಕಾರ್ಯವನ್ನು ಕಷ್ಟಪಟ್ಟು ಮಾಡಿದರೆ ನಿಮ್ಮ ನಂತರ ನಿಮ್ಮ ಸ್ಥಾನವನ್ನು ತುಂಬಲು ಬರುವವರಿಗೆ ಕೊಡಲು ನಿಮ್ಮ ಬಳಿ ಆ ಕಾಣಿಕೆ ಇರುತ್ತದೆ.</p>
<p><span style="color: #000080;"><span style="color: #000080;"><strong>ನಮ್ಮ ದೈನಂದಿನ ಜೀವನದಲ್ಲಿ ನಾವು ಪರಸ್ಪರರಿಗೆ ಮಾಡುವ ಅನೇಕ ಒಳ್ಳೆಯ ಕೆಲಸಗಳಲ್ಲಿ ಒಂದು ಮುಗುಳ್ನಗು ಹುಟ್ಟಿಸುವಂತಹ, ಸ್ಫೂರ್ತಿ ತುಂಬುವಂತಹ ಸಣ್ಣಪುಟ್ಟ ಕೆಲಸಗಳೆ ಹೆಚ್ಚಿನವು. ಕೆಲವೊಮ್ಮೆ, ನಾವು ಬೇರೆಯವರೆಡೆಗೆ ತೋರಿಸುವ ಕನಿಷ್ಠ ಸೌಜನ್ಯವೆ ನಾವು ಮಾಡಬಹುದಾದ ಒಳ್ಳೆಯ ಕೆಲಸ.</strong></span></span><strong></strong></p>
<p>ನಾನಿರುವ ಹವಾಯಿ ದ್ವೀಪ ರಾಜ್ಯದ ಹೊನಲುಲು ನಗರದಲ್ಲಿ ರಾಬ್ಬಿ ಆಲ್ಮ್ ಎನ್ನುವವರೊಬ್ಬರು ಒಬ್ಬ ಯಶಸ್ವಿ ಲಾಯರ್, ಸರ್ಕಾರಿ ಅಧಿಕಾರಿ ಹಾಗೂ ಬ್ಯಾಂಕರ್ ಆಗಿದ್ದರು. ನಮ್ಮ ಸಮುದಾಯದಲ್ಲಿ ನಮ್ಮೆಲ್ಲರ ಜೀವನವನ್ನು ಈಗಿನದಕ್ಕಿಂತ ಹೆಚ್ಚು ನಾಗರೀಕವಾಗಿಯೂ, ಅರ್ಥಪೂರ್ಣವಾಗಿಯೂ ಮಾಡುವುದು ಹೇಗೆ ಎಂದು ಆಲೋಚಿಸಲು ಒಮ್ಮೆ ತಮ್ಮ ಕೆಲವು ಸ್ನೇಹಿತರನ್ನು ಒಂದೆಡೆ ಸೇರಿಸಿದ್ದರು. ಅವರೆಲ್ಲ ಕೂಡಿ &#8220;ಅಲೋಹವನ್ನು ಜೀವಿಸುವುದು&#8221; ಎಂಬ ಕಾರ್ಯಕ್ರಮವನ್ನು ರೂಪಿಸಿದರು. ಹವಾಯಿ ಭಾಷೆಯಲ್ಲಿ &#8220;ಅಲೋಹ&#8221; ಎನ್ನುವುದಕ್ಕೆ ಕುಶಲಸಂಭಾಷಣೆಯ ಹಲೊ ಎನ್ನುವುದರಿಂದ ಹಿಡಿದು ಬೈಬೈ ಎನ್ನುವ ತನಕ ಅನೇಕ ಅರ್ಥಗಳಿವೆ. ಆದರೆ ಅವರು ಯೋಚಿಸುತ್ತಿದ್ದ ಅಲೋಹದ ಅರ್ಥ ಏನೆಂದರೆ, ಪ್ರೀತಿ, ವಿಶ್ವಾಸ, ಕಾಳಜಿ, ಮತ್ತು ಸೌಜನ್ಯ. ಅಲೋಹವನ್ನು ಜೀವಿಸಲು ಅನೇಕ ವಿಧಾನಗಳಿದ್ದರೂ ಅವರು ರೂಪಿಸಿದ ಒಂದು ವಿಧಾನ ಏನೆಂದರೆ, ನಮ್ಮ ದೈನಂದಿನ ಜೀವನದಲ್ಲಿ ಸೌಜನ್ಯದಿಂದ, ಸಂಭಾವಿತನದಿಂದ, ನಾಗರೀಕವಾಗಿ ಜೀವಿಸುವುದು ಮತ್ತು ಅದರ ಜೊತೆಜೊತೆಗೆ ನಮ್ಮ ಜೀವನವನ್ನು ಸುಮಧುರಗೊಳಿಸುವ ಸಣ್ಣಪುಟ್ಟ ಕೆಲಸಗಳನ್ನೂ ಮಾಡುವುದು. ಅದಕ್ಕೆ ಅವರು ಕೊಟ್ಟ ಕೆಲವು ಉದಾಹರಣೆಗಳು ಇಂತಿವೆ:</p>
<ul>
<li>-ಹಿರಿಯರನ್ನು ಮತ್ತು ಮಕ್ಕಳನ್ನು ಗೌರವಿಸಿ.</li>
<li>-ನೀವು ಇರುವ ಸ್ಥಳ ನೀವು ಬಂದಾಗ ಹೇಗಿತ್ತೊ ನೀವು ಬಿಡುವಾಗ ಅದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಿಟ್ಟು ಹೋಗಿ.</li>
<li>-ಯಾರಾದರೂ ಬರುತ್ತಿರುವಾಗ ಅವರಿಗಾಗಿ ಬಾಗಿಲನ್ನು ತೆರೆದಿಟ್ಟುಕೊಂಡಿರಿ.</li>
<li>-ಯಾರಾದರೂ ಬರುತ್ತಿರುವಾಗ ಲಿಫ್ಟ್ ಅನ್ನು ನಿಲ್ಲಿಸಿಟ್ಟುಕೊಳ್ಳಿ.</li>
<li>-ಯಾವ ಗಿಡವಾದರೂ ಸರಿ, ಏನನ್ನಾದರೂ ಸರಿ, ನೆಡಿ.</li>
<li>-ಸೌಜನ್ಯದಿಂದ ನಿಮ್ಮ ವಾಹನವನ್ನು ಓಡಿಸಿ. ಬೇರೆಯವರು ನಿಮ್ಮ ರಸ್ತೆಗೆ ಕೂಡಿಕೊಳ್ಳುತ್ತಿದ್ದರೆ ಅವರನ್ನು ನಿಮ್ಮ ರಸ್ತೆಯ ಒಳಗೆ ಬಿಟ್ಟುಕೊಳ್ಳಿ.</li>
<li>-ಅನ್ಯ ಸಂಸ್ಕೃತಿಯವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ.</li>
<li>-ಶಾಪಿಂಗ್ ಮಾಲ್‌ನಲ್ಲಿ ಸಾಮಾನು ಇಟ್ಟುಕೊಳ್ಳುವ ಕಾರ್ಟ್ ಅನ್ನು ಸರಿಯಾದ ಸ್ಥಾನಕ್ಕೆ ಹಿಂದಿರುಗಿಸಿ.</li>
<li>-ಮನೆಯಿಂದ ಹೊರ ಹೋಗಿ ಪ್ರಕೃತಿಯನ್ನು ಆಸ್ವಾದಿಸಿ.</li>
<li>-ರಸ್ತೆಯಲ್ಲಿನ ಕಸ-ಗಲೀಜನ್ನು ತೆಗೆದು ಕಸದ ಬುಟ್ಟಿಗೆ ಹಾಕಿ.</li>
<li>-ನಿಮ್ಮ ನೆರೆಹೊರೆಯವರೊಡನೆ ಹಂಚಿಕೊಳ್ಳಿ.</li>
<li>-ಮುಗುಳ್ನಗುಗಳನ್ನು ಸೃಷ್ಟಿಸಿ.</li>
</ul>
<p>ಎಲ್ಲರ ಜೀವನವನ್ನೂ ಈಗ ಇರುವುದಕ್ಕಿಂತ ಚೆನ್ನಾಗಿ ಮಾಡಲು ನೀವು ರಾಜಕಾರಣಿಯೊ, ಕಂಪನಿಯ ಮುಖ್ಯಸ್ಥನೊ, ಅಥವ ಬಹಳ ಹೆಸರುವಾಸಿಯಾದ ವೈದ್ಯನೊ ಆಗಿರಲೇಬೇಕಿಲ್ಲ ಎನ್ನುತ್ತಾರೆ &#8220;ಅಲೋಹವನ್ನು ಜೀವಿಸು&#8221; ಗುಂಪಿನವರು. ಕೆಲವೊಮ್ಮೆ ಅತಿ ಸಣ್ಣ ಕೆಲಸ ಬಹಳ ದೊಡ್ಡ ಪರಿಣಾಮವನ್ನು ಬೀರಿರುತ್ತದೆ.</p>
<p>ಹಾಗಾಗಿ, ಅಂಗಡಿಯವನ ಜೊತೆ ಮುಗುಳ್ನಕ್ಕು ಮಾತನಾಡಲು ಸಮಯ ಮಾಡಿಕೊಳ್ಳಿ; ನಿಮ್ಮ ಕಟ್ಟಡಕ್ಕೆ ತಮ್ಮ ಸಾಮಾನುಗಳನ್ನು ಹೊತ್ತು ತರುತ್ತಿರುವವರಿಗೆ ಕೈ ನೀಡಿ; ಸಮುದಾಯದ ಕಾರ್ಯಕ್ರಮವಾದ ನಂತರ ಕುರ್ಚಿಗಳನ್ನು ಎತ್ತಿಡುವವರಲ್ಲಿ ಮೊದಲಿಗರಾಗಿ. ಅದನ್ನು ಯಾರೂ ಗಮನಿಸದೆ ಇರಬಹುದು; ಗಮನಿಸಿದ್ದವರು ಅದನ್ನು ನೆನಪಿಟ್ಟುಕೊಳ್ಳದೆ ಹೋಗಬಹುದು. ಆದರೆ ಹನಿಹನಿಗೂಡಿದರೆ ಹಳ್ಳ ಎನ್ನುವಂತೆ ಈ ತರಹದ ಸಣ್ಣಪುಟ್ಟ ಕೆಲಸಗಳ ಮೂಲಕ ನೀವು ಅವರ ಜೀವನವನ್ನು ಸಂತೋಷಗೊಳಿಸುತ್ತಾ ಹೋಗುತ್ತೀರಿ.</p>
<p>ಒಳ್ಳೆಯ ಕೆಲಸವನ್ನು ಒಳ್ಳೆಯದಕ್ಕಾಗಿ ಮಾಡಿ. ಒಳ್ಳೆಯ ಕೆಲಸ ಮಾಡುವುದು ನಿಮ್ಮ ವ್ಯಕ್ತಿತ್ವದ ಭಾಗವೇ ಆಗಿರುವುದರಿಂದ ಅದನ್ನು ಮಾಡಿ. ಅದು ನೀವು ಬಾಳುತ್ತಿರುವ ನಿಮ್ಮ ಜೀವನದ ಗುಣಮಟ್ಟವನ್ನು ತೋರಿಸುತ್ತದೆ. ನಿಮ್ಮ ಜೀವನದ ಭಾಗ ಅದು. ಯಾರಿಗೆ ಗೊತ್ತಾಗಲಿ ಬಿಡಲಿ, ಯಾರು ನೆನಪಿಟ್ಟುಕೊಳ್ಳಲಿ ಬಿಡಲಿ, ನೀವು ಮಾಡುವ ಒಳ್ಳೆಯ ಕೆಲಸ ನಿಮ್ಮ ಆತ್ಮಸಂತೋಷದ, ನಿಮ್ಮ ಅರಿವಿನ ಮೂಲವಾಗುತ್ತದೆ.</p>
<p style="text-align: center;"><strong><big>ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.<br />
<span style="color: #00e055;">ಆದ್ರೂ, ಒಳ್ಳೆಯದನ್ನು ಮಾಡಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%205.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%205.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=39</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%205.mp3" length="7110656" type="audio/mpeg" />
		</item>
		<item>
		<title>ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.</title>
		<link>http://www.ravikrishnareddy.com/anyway-kannada/?p=36</link>
		<comments>http://www.ravikrishnareddy.com/anyway-kannada/?p=36#comments</comments>
		<pubDate>Wed, 17 Dec 2008 22:34:43 +0000</pubDate>
		<dc:creator>ರವಿ ಕೃಷ್ಣಾ ರೆಡ್ಡಿ</dc:creator>
				<category><![CDATA[ಒಳ್ಳೆಯದನ್ನು ಮಾಡಿ]]></category>

		<guid isPermaLink="false">http://www.ravikrishnareddy.com/anyway-kannada/?p=36</guid>
		<description><![CDATA[ನಾನು ರಾಜ್ಯ ಸರ್ಕಾರದ ಇಲಾಖೆಯೊಂದರ ನಿರ್ದೇಶಕನಾಗಿ ಹಾಗೂ ರಾಜ್ಯಪಾಲರ ಮಂತ್ರಿಮಂಡಲದ ಸದಸ್ಯನಾಗಿ ಆಯ್ಕೆಯಾದಾಗ, ಎಷ್ಟೊಂದು ಜನ ಹೊಸಬರು ಇದ್ದಕ್ಕಿದ್ದಂತೆ ನನ್ನ ಸ್ನೇಹಿತರಾಗಿದ್ದನ್ನು ಕಂಡು ನನಗೆ ಅತ್ಯಾಶ್ಚರ್ಯವಾಯಿತು. ಉದ್ಯಮಿಗಳು, ಜನ ಪ್ರತಿನಿಧಿಗಳಂತಹ ಪ್ರಮುಖರೆಲ್ಲ ನಾನು ಯಾವಾಗ ಭೇಟಿಯಾಗಬೇಕಿದೆ ಅಂದರೆ ಆ ಕ್ಷಣವೆ ಲಭ್ಯವಿರುತ್ತಿದ್ದರು. ಹೇಳಬೇಕೆಂದರೆ, ಕೆಲವರಂತೂ ತಮ್ಮ ಯೋಚನೆ ಮತ್ತು ಯೋಜನೆಗಳಿಗೆ ನನ್ನ ಬೆಂಬಲವನ್ನು ಬಯಸಿ, ತಾವೆ ಖುದ್ದಾಗಿ ಬಂದು ನನ್ನನ್ನು ಕಾಣಲು ಬಯಸುತ್ತಿದ್ದರು. ಸಭೆ-ಸಮಾವೇಶಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ನಾನು ಭಾಷಣ ಮಾಡಲು ಬರಬೇಕೆಂದು ನೂರಾರು ಆಹ್ವಾನಗಳು ಬರುತ್ತಿದ್ದವು. [...]]]></description>
			<content:encoded><![CDATA[<p>ನಾನು ರಾಜ್ಯ ಸರ್ಕಾರದ ಇಲಾಖೆಯೊಂದರ ನಿರ್ದೇಶಕನಾಗಿ ಹಾಗೂ ರಾಜ್ಯಪಾಲರ ಮಂತ್ರಿಮಂಡಲದ ಸದಸ್ಯನಾಗಿ ಆಯ್ಕೆಯಾದಾಗ, ಎಷ್ಟೊಂದು ಜನ ಹೊಸಬರು ಇದ್ದಕ್ಕಿದ್ದಂತೆ ನನ್ನ ಸ್ನೇಹಿತರಾಗಿದ್ದನ್ನು ಕಂಡು ನನಗೆ ಅತ್ಯಾಶ್ಚರ್ಯವಾಯಿತು. ಉದ್ಯಮಿಗಳು, ಜನ ಪ್ರತಿನಿಧಿಗಳಂತಹ ಪ್ರಮುಖರೆಲ್ಲ ನಾನು ಯಾವಾಗ ಭೇಟಿಯಾಗಬೇಕಿದೆ ಅಂದರೆ ಆ ಕ್ಷಣವೆ ಲಭ್ಯವಿರುತ್ತಿದ್ದರು. ಹೇಳಬೇಕೆಂದರೆ, ಕೆಲವರಂತೂ ತಮ್ಮ ಯೋಚನೆ ಮತ್ತು ಯೋಜನೆಗಳಿಗೆ ನನ್ನ ಬೆಂಬಲವನ್ನು ಬಯಸಿ, ತಾವೆ ಖುದ್ದಾಗಿ ಬಂದು ನನ್ನನ್ನು ಕಾಣಲು ಬಯಸುತ್ತಿದ್ದರು. ಸಭೆ-ಸಮಾವೇಶಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ನಾನು ಭಾಷಣ ಮಾಡಲು ಬರಬೇಕೆಂದು ನೂರಾರು ಆಹ್ವಾನಗಳು ಬರುತ್ತಿದ್ದವು. ಅನೇಕ ಸಭೆಗಳಲ್ಲಿ ಸಭೆಗೆ ನಾನೆ ಮುಖ್ಯಅತಿಥಿ ಆಗಿರುತ್ತಿದ್ದೆ. ವರದಿಗಾರರು ತಪ್ಪದೆ ನಿಯಮಿತವಾಗಿ ಕರೆ ಮಾಡಿ ಸಂದರ್ಶನ, ಅಭಿಪ್ರಾಯ ಕೇಳುತ್ತ್ತಿದ್ದರು. ದಿನಪತ್ರಿಕೆಗಳಲ್ಲಿ ಹದಿನೈದು ದಿನಗಳಿಗೆ ಒಮ್ಮೆಯಾದರೂ ಸುದ್ದಿಯಲ್ಲಿರುತ್ತಿದ್ದೆ. ತಿಂಗಳಿಗೆ ಒಂದು ಸಲವಾದರೂ ರೇಡಿಯೋ ಅಥವ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ಅನೇಕ ಜನ ಹೊಸ ಸ್ನೇಹಿತರು ಹುಟ್ಟಿಕೊಂಡು ಬಿಟ್ಟಿದ್ದರು.</p>
<p>ಅದರ ಜೊತೆಗೇ, ಅನೇಕ ಹೊಸ ಶತ್ರುಗಳೂ ಹುಟ್ಟಿಕೊಂಡಿದ್ದರು. ವಾಸ್ತವದಲ್ಲಿ, ಅವರೇನೂ ನನಗೆ ಶತ್ರುಗಳಾಗಿರಲಿಲ್ಲ. ಆದರೆ ಅವರು ಮಾತ್ರ ನನ್ನನ್ನು ತಮ್ಮ ಶತ್ರುವೆಂದು ತಿಳಿದಿದ್ದರು. ಇದನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಕಷ್ಟವಾಗುತ್ತಿತ್ತು. ಯಾಕೆಂದರೆ, ನಾನು ಅವರ ಮೇಲೆ ಎಂದೂ ಯಾವುದೇ ರೀತಿಯಲ್ಲಿ ಕೇಡು ಅಥವ ದಾಳಿ ಮಾಡಿರಲಿಲ್ಲ. ಇನ್ನೂ ಹೇಳಬೇಕೆಂದರೆ, ಅವರಲ್ಲಿ ಬಹಳಷ್ಟು ಜನ ನನಗೆ ಈ ಮುಂಚೆ ಗೊತ್ತೇ ಇರಲಿಲ್ಲ. ನನ್ನ ಮೇಲೆ ದಾಳಿ ಮಾಡುವುದರಿಂದ ರಾಜ್ಯಪಾಲರ ಮೇಲೆ, ಇಲ್ಲವೆ ನನ್ನ ಪಕ್ಷದ ಮೇಲೆ, ಅಥವ ಸರ್ಕಾರದ ಮೇಲೆ ದಾಳಿ ಮಾಡಿದಂತಾಗುತ್ತದೆ ಎಂದುಕೊಂಡು ನನ್ನ ಮೇಲೆ ದಾಳಿ ಮಾಡುತ್ತಿದ್ದರು. ನಾನು ಯಾವತ್ತೂ ಹೇಳಿರದೇ ಇರುವ ಮಾತುಗಳಿಗಾಗಿ, ಮಾಡದೇ ಇರುವ ಕೆಲಸಗಳಿಗಾಗಿ, ಹೀಗೆ ಹೇಳಿದ್ದಾನೆ, ಹಾಗೆ ಮಾಡಿದ್ದಾನೆ ಎಂದು ಸುಳ್ಳುಸುಳ್ಳೆ ದೋಷಾರೋಪಣೆ ಮಾಡುತ್ತಿದ್ದರು.</p>
<p>ಮೇಲ್ನೋಟಕ್ಕೆ ಸ್ನೇಹಿತರು ಎಂದು ತೋರಿಸಿಕೊಳ್ಳುತ್ತಿದ್ದ, ಅದರೆ ಒಳಗೊಳಗೆ ಸದ್ದಿಲ್ಲದೆ ನನ್ನ ಉಚ್ಚಾಟನೆಗೆ ಪ್ರಯತ್ನಿಸುತ್ತಿದ್ದ ಕೆಲವರು ನನ್ನ ಇಲಾಖೆಯ ಒಳಗೇ ಇದ್ದರು. ನಾನು ಬಯಸುತ್ತಿದ್ದ ದಿಕ್ಕಿನಲ್ಲಿ ಇಲಾಖೆ ಹೋಗುವುದು ಅವರಿಗೆ ಬೇಕಿರಲಿಲ್ಲ. ಅದು ಮೊದಲಿನಿಂದಲೂ ಹೇಗಿತ್ತೊ ಹಾಗೆ ಇರಬೇಕೆಂದು ಅವರ ಬಯಕೆ. ಸಾಮೂಹಿಕ ಜವಾಬ್ದಾರಿ ಇರುವ ಉಸ್ತುವಾರಿ ತಂಡವನ್ನು ಕಟ್ಟಲು ನಾನು ಬಯಸಿದರೆ, ಅವರು ಮಾತ್ರ ಯಾರ ಅಧೀನವೂ ಇಲ್ಲದ ತಮ್ಮ ಸರ್ವತಂತ್ರ ಸ್ವತಂತ್ರ ಸಾಮ್ರಾಜ್ಯಗಳನ್ನು ಈಗಿನಂತೆಯೆ ಆಳಬೇಕೆಂದು ಬಯಸಿದ್ದರು. ಇಲಾಖೆಯಲ್ಲಿ ಹೊಸದಾದ ಗುರಿಗಳು, ಹೊಸ ಕಾರ್ಯವಿಧಾನ, ಹಾಗೂ ಚೌಕಟ್ಟನ್ನು ಸ್ಥಾಪಿಸಬೇಕಾದ ಕಷ್ಟತಮ ಗಳಿಗೆ ಅದು.</p>
<p>ರಾಜ್ಯಪಾಲರ ಅಧಿಕಾರಾವಧಿ ಮುಗಿದು, ಇಲಾಖೆಯ ಮುಖ್ಯಸ್ಥನಾಗಿ ನನ್ನ ಅವಧಿಯೂ ಮುಗಿಯುತ್ತ ಬಂತು. ಅಷ್ಟೊತ್ತಿಗೆ ನನ್ನ ಜೊತೆ ಕೆಲಸ ಮಾಡುತ್ತಿದ್ದ ಉದ್ಯಮಿಗಳ ಹಾಗೂ ಸಮುದಾಯ ನಾಯಕರೊಡನೆಯ ನನ್ನ ವೃತ್ತಿಬಾಂಧವ್ಯ ನಿಜಕ್ಕೂ ಆನಂದಿಸುವಷ್ಟು ಚೆನ್ನಾಗಿತ್ತು. ಇಲಾಖೆಯೊಳಗಿನ ಸಹೋದ್ಯೋಗಿಗಳೊಡನೆಯೂ ಒಳ್ಳೆಯ ಒಡನಾಟ ಬೆಳೆದಿತ್ತು. ಅವರೊಡನೆ ಕೆಲಸ ಮಾಡಲು ಖುಷಿಯಾಗುತ್ತಿತ್ತು. ನಾವುಗಳೆಲ್ಲ ನನ್ನ ಅಧಿಕಾರಾವಧಿಯಲ್ಲಿ ಸಾಧಿಸಿದ್ದರ ಬಗ್ಗೆ ನನಗೆ ಹೆಮ್ಮೆಯಾಗುತ್ತಿತ್ತು. ನನ್ನೊಡನೆ ಕೆಲಸ ಮಾಡುತ್ತಿದ್ದವರನ್ನು ನಾನು ಇಷ್ಟಪಡುತ್ತಿದ್ದೆ.</p>
<p>ಆದರೆ, ನನ್ನ ಅವಧಿ ಮುಗಿದು ನಾನು ಕಚೇರಿಯಿಂದ ಹೊರಬಿದ್ದ ಕೊನೆಯ ದಿನ ನನ್ನ ಅನೇಕ ಸಂಬಂಧಗಳು ಬದಲಾದವು. ಆಗ ವಾಣಿಜ್ಯೋದ್ಯಮದಲ್ಲಿ ಒಂದು ಅತ್ಯುತ್ತಮ ಎನ್ನಬಹುದಾದ ಕೆಲಸಕ್ಕೆ ಸೇರಿಕೊಂಡೆ. ಆದರೆ ನಾನು ಆ ಕಂಪನಿಯ ಸಿ.ಇ.ಒ. ಆಗಿರಲಿಲ್ಲ. ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಿಂತ ಕೆಲವು ಹಂತ ಕೆಳಗಿದ್ದ ಹುದ್ದೆ ಅದು. ಅದು ಬಹಳ ಒಳ್ಳೆಯ ಹುದ್ದೆ ಆಗಿದ್ದರೂ, ನಾನೀಗ ಮೊದಲಿನಂತೆ &#8220;ಪ್ರತಿಷ್ಠಿತ&#8221; ಅಲ್ಲ. ನನಗೀಗ ದೊಡ್ಡ ಸ್ಥಾನಮಾನ ಇರಲಿಲ್ಲ. ರಸ್ತೆಯಲ್ಲಿ ನಾನು ಅಡ್ಡ ಸಿಕ್ಕಿದರೆ ಈ ಮುಂಚೆ ನನ್ನೊಡನೆ ಕೆಲಸ ಮಾಡುತ್ತಿದ್ದ ಜನ ಮುಜಗರ ಅನುಭವಿಸುತ್ತಿದ್ದಂತೆ ಕಾಣುತ್ತಿತ್ತು. ಅಧಿಕಾರದ ಮೊಗಸಾಲೆಗಳಲ್ಲಿ ಅವರೀಗಲೂ ಅಧಿಕಾರ ಚಲಾಯಿಸಬಲ್ಲವರಾಗಿದ್ದರೆ, ಈಗ ನಾನೇನೂ ಆಗಿರಲಿಲ್ಲ. ನನಗೀಗ ಯಾವುದೇ ಸಭೆ-ಸಮಾವೇಶಗಳಿಗೆ ಆಹ್ವಾನಗಳು ಬರುತ್ತಿರಲಿಲ್ಲ. ನನ್ನ ಬೆಂಬಲವನ್ನು ಯಾರೂ ಕೋರುತ್ತಿರಲಿಲ್ಲ. ಸಂದರ್ಶನ ಬೇಕೆಂದು ಪತ್ರಕರ್ತರ್‍ಯಾರೂ ಕರೆ ಮಾಡುತ್ತಿರಲಿಲ್ಲ.</p>
<p>ಹೀಗೆ ಇದ್ದಕ್ಕಿದ್ದಂತೆ ಸ್ನೇಹಿತರು ಹಾಗೂ ವೈರಿಗಳು ಹುಟ್ಟಿಬಿಡುವುದನ್ನು ಮತ್ತು ಇದ್ದಕ್ಕಿದ್ದಂತೆ ಅವರನ್ನು ಕಳೆದುಕೊಳ್ಳುವುದನ್ನು ನಾನು ಒಂದು ಸಲಕ್ಕಿಂತ ಹೆಚ್ಚಿನ ಸಲ ಅನುಭವಿಸಿದ್ದೇನೆ. ಇದೇ ತರಹದ ಅನುಭವ ಸಾವಿರಾರು ಜನರಿಗೆ ಆಗಿರುವುದೂ ನನಗೆ ಗೊತ್ತು. ಇದರಿಂದ ನನಗೆ ಆಶ್ಚರ್ಯವಾಗಲಿ, ಭ್ರಮನಿರಸನವಾಗಲಿ ಆಗಲಿಲ್ಲ. ಅದೃಷ್ಟವಶಾತ್, ನಾನು ಇಲಾಖೆಯ ಮುಖ್ಯಸ್ಥನಾಗಿ ನೇಮಕವಾದ ಮೊದಲ ದಿನ ನನ್ನ ಮಾರ್ಗದರ್ಶಿಯೊಬ್ಬರು, &#8220;ಯಾವಾಗಲೂ ನೀನೆ ನಿರ್ದೇಶಕನಾಗಿ ಶಾಶ್ವತವಾಗಿ ಅಲ್ಲಿ ಇರುವುದಿಲ್ಲ ಎನ್ನುವುದನ್ನು ಅಲ್ಲಿರುವಷ್ಟು ದಿನ ಪ್ರತಿದಿನವೂ ಜ್ಞಾಪಕದಲ್ಲಿಟ್ಟುಕೊ,&#8221; ಎಂದು ಹೇಳಿದ್ದರು. ಜನರಿಗೆ ಕಾಣಿಸುವಂತೆ ಲೈಮ್‌ಲೈಟ್‌ನಲ್ಲಿ ಯಾವಾಗಲೂ ಇರುತ್ತೇನೆ ಎನ್ನುವುದು ಸುಳ್ಳು. ಯಾವಾಗಲೂ ಪ್ರಭಾವಿಯಾದ ಹುದ್ದೆಯಲ್ಲಿಯೆ ಇರುತ್ತೇನೆ ಎನ್ನಲಾಗದು. ಸಮಯ ಬಹಳ ಬೇಗ ಹೋಗಿ ಬಿಡುತ್ತದೆ ಎಂಬ ಅರಿವಿನಲ್ಲಿ ನಾನು ಕೆಲಸ ಮಾಡಬೇಕು. ಇದು ಮುಗಿದ ನಂತರ ಹೊಸ ಜಾಗ, ಹೊಸ ಸ್ಥಾನದಲ್ಲಿ ಕೆಲಸ ಮುಂದುವರೆಸುತ್ತಿರುತ್ತೇನೆ. ಆ ಹೊಸ ಸ್ಥಾನ ಈಗಿನದಕ್ಕಿಂತ ಕಡಿಮೆ ಅಧಿಕಾರದ, ಅಷ್ಟೇನೂ ಎದ್ದು ಕಾಣಿಸದ್ದು ಆಗಿರಬಹುದು. ಇದೊಂದು ಹಳೆಯ ನಾಣ್ನುಡಿಯಂತೆ: ನೀನು ಮೇಲಕ್ಕೆ ಹೋಗುತ್ತಿರುವಾಗ ನಿನಗೆ ಜೊತೆ ಸಿಕ್ಕಿದವರೊಡನೆ ಸೌಜನ್ಯದಿಂದ, ಅನುಕಂಪದಿಂದ ನಡೆದುಕೊ; ಯಾಕೆಂದರೆ, ನೀನು ಕೆಳಕ್ಕೆ ಬರುವಾಗ ಎದುರು ಸಿಕ್ಕುವವರು ಇದೇ ಜನ.</p>
<p>&#8220;ಯಶಸ್ವಿ&#8221; ಆದ ಜನ, ತಮಗೆ ಎರಡು ತರಹದ ಸ್ನೇಹಿತರು ಇರುತ್ತಾರೆ ಎನ್ನುವುದನ್ನು ತಿಳಿದುಕೊಂಡಿರುತ್ತಾರೆ. ಒಬ್ಬರು &#8220;ವೈಯಕ್ತಿಕ, ಖಾಸಾ&#8221; ಸ್ನೇಹಿತರಾದರೆ ಮತ್ತೊಬ್ಬರು &#8220;ಸ್ಥಾನಾಧಾರಿತ, ನಮಗಿರುವ ಅಧಿಕಾರ ಸ್ಥಾನದಿಂದ ಹುಟ್ಟುವ&#8221; ಸ್ನೇಹಿತರು. ನೀವು ಯಾವುದೇ ಕಷ್ಟನಷ್ಟಗಳಲ್ಲಿರಲಿ, ಮೇಲಿನ ಸ್ಥಾನದಲ್ಲಿರಲಿ ಇಲ್ಲವೆ ಕೆಳಗಿನ ಸ್ಥಾನದಲ್ಲಿರಲಿ, ಅಥವ ಯಾವುದೇ ಸ್ಥಾನದಲ್ಲಿ ಇಲ್ಲದೆ ಇರಲಿ, ನಿಮ್ಮ ಖಾಸಾ ಸ್ನೇಹಿತ ನಿಮ್ಮೊಡನೆ ಇರುತ್ತಾನೆ. ನಿಮ್ಮ ಬಗ್ಗೆ ಈ ಸ್ನೇಹಿತ ನಿಜವಾಗಲೂ ಕಾಳಜಿಯಿಂದ ಯೋಚಿಸುತ್ತಾನೆ. ನಿಮ್ಮೊಡನೆಯ ಒಡನಾಟವನ್ನು ನಿಜಕ್ಕೂ ಆನಂದಿಸುತ್ತಾನೆ.</p>
<p>ಅದೇ ಈ &#8220;ಸ್ಥಾನಾಧಾರಿತ&#8221; ಸ್ನೇಹಿತ ನಿಮಗಿರುವ ಪ್ರಭಾವ ಅಥವ ಅಧಿಕಾರ ಸ್ಥಾನದ ಸ್ನೇಹಿತ. ಇವನು, ಈಗ ನಿಮಗಿರುವ ಅಧಿಕಾರ ಹಿಂದೆ ಯಾರಿಗಿತ್ತೊ ಆತನ ಸ್ನೇಹಿತನೂ ಆಗಿದ್ದ, ಹಾಗು ನಿಮ್ಮ ಈಗಿನ ಸ್ಥಾನಕ್ಕೆ ಮುಂದೆ ಯಾರು ಬರುತ್ತಾರೊ ಆತನ ಸ್ನೇಹಿತನೂ ಆಗುತ್ತಾನೆ. ಇದು ನೀವು ಮಾಡುತ್ತಿರುವ ಕೆಲಸಕ್ಕೆ, ವ್ಯವಹಾರಕ್ಕೆ ಒಳ್ಳೆಯದು. ನಿಮಗಿಬ್ಬರಿಗೂ ಅನುಕೂಲವಾಗುವ ಒಂದು ಸಂಪರ್ಕಜಾಲವನ್ನು ಈ ಸ್ನೇಹ ಮುಂದುವರೆಸಿಕೊಂಡು ಹೋಗುತ್ತದೆ. ಇದರಲ್ಲಿ ಯಾವುದೇ ದೋಷವಿಲ್ಲ. ಆದರೆ ಈ ಸ್ಥಾನಾಧಾರಿತ ಸ್ನೇಹಿತರನ್ನು ಖಾಸಾ ಸ್ನೇಹಿತರೆಂದು ತಪ್ಪಾಗಿ ಭಾವಿಸಿಕೊಳ್ಳ ಬಾರದು. ಸ್ಥಾನಾಧಾರಿತ ಸ್ನೇಹಿತರು &#8220;ನಿಜವಾದ&#8221; ಸ್ನೇಹಿತರಲ್ಲ.</p>
<p>ಸರ್ಕಾರಿ ಮುಖ್ಯಸ್ಥರು, ಮಿಲಿಟರಿ ಜನರಲ್‌ಗಳು, ದೊಡ್ಡ ದೊಡ್ಡ ಕಂಪನಿಗಳ ಸಿ.ಇ.ಓ.ಗಳು ತಮ್ಮ ಸ್ಥಾನವನ್ನು ಬಿಟ್ಟ ಮೇಲೆ ಅಥವ ತಾವು ನಿವೃತ್ತಿಯಾದ ಮೇಲೆ ತಮ್ಮ ಈ ಸ್ಥಾನಾಧಾರಿತ ಸ್ನೇಹಿತರ ನಡವಳಿಕೆ ಬದಲಾಗುವುದನ್ನು ಕಾಣುತ್ತಾರೆ. ಇವರು ಊಟಕ್ಕೊ, ಕಾಫಿಗೊ ಕರೆದರೆ ಅವರು ಇದ್ದಕ್ಕಿದ್ದಂತೆ ಬ್ಯುಸಿ ಆಗಿ ಬಿಟ್ಟಿರುತ್ತಾರೆ. ಇವರ ಸ್ಥಾನಾಧಾರಿತ ಸ್ನೇಹಿತರು ಮೊದಲಿನಂತೆ ಈಗ ಫೋನ್ ಕರೆಗಳನ್ನು ಹಿಂದಿರುಗಿಸುವುದಿಲ್ಲ. ಇವರು ಮಾಡುವ ಜೋಕ್‌ಗಳಿಗೆ ಈಗ ನಗುವುದಿಲ್ಲ. ಇವರ ಹೊಸಹೊಸ ಐಡಿಯಾಗಳನ್ನು ಪ್ರಶಂಸಿಸುವುದಿಲ್ಲ. ಇದಕ್ಕೆ ಕಾರಣ ಬಹಳ ಸರಳ: ಇವರ ಸ್ಥಾನಾಧಾರಿತ ಸ್ನೇಹಿತರು ಈಗ ಹೊಸ ಮುಖ್ಯಸ್ಥನ ಮೇಲೆ, ಹೊಸ ಜನರಲ್ ಮೇಲೆ, ಹೊಸ ಸಿ.ಇ.ಓ. ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿರುತ್ತಾರೆ. ಅವರಿಗೆ ಈಗ ಹೊಸ ಲಂಚ್‌ಗಳಿಗೆ ಹೋಗುವುದಿರುತ್ತದೆ, ಹಿಂದಿರುಗಿಸಬೇಕಾದ ಹೊಸ ಫೋನ್ ಕರೆಗಳಿರುತ್ತವೆ, ಹೊಸ ಜೋಕ್‌ಗಳಿಗೆ ನಗಬೇಕಿರುತ್ತದೆ, ಹಾಗೂ ಪ್ರಶಂಸಿಸಲು ಹೊಸ ಐಡಿಯಾಗಳಿರುತ್ತವೆ.</p>
<p>ಇದರ ಜೊತೆಗೆ, ಕೆಲವು ನಿಜವಾಗಲೂ ಖೊಟ್ಟಿ, ಕಳ್ಳ ಸ್ನೇಹಿತರು ಹುಟ್ಟಿಕೊಂಡು ಬಿಟ್ಟಿರುತ್ತಾರೆ. ನಿಮ್ಮನ್ನು ಮತ್ತು ನಿಮ್ಮ ಹೊಸ ಸ್ಥಾನವನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಹೀನಾತಿ ಹೀನ ಜನ ಇವರು. ಸ್ಥಾನಾಧಾರಿತ ಸ್ನೇಹಿತರು ಕನಿಷ್ಠ ಪಕ್ಷ ನಿಮಗೆ ಸ್ಥಾನ ಇರುವ ತನಕವಾದರೂ ಒಂದು ಉತ್ತಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಆದರೆ ಈ ಖೊಟ್ಟಿ ಸ್ನೇಹಿತರು ಸ್ನೇಹಿತರಂತೆ ನಟಿಸುತ್ತ, ನಿಮ್ಮನ್ನು ಉಪಯೋಗಿಸಿಕೊಳ್ಳಲು ಒಂದು ಒಳ್ಳೆಯ ಸಮಯಕ್ಕಾಗಿ ಕಾದು, ಉಪಯೋಗಿಸಿಕೊಂಡ ತಕ್ಷಣ ಬೆನ್ನು ತಿರುಗಿಸಿ ಓಡಿ ಬಿಡುತ್ತಾರೆ.</p>
<p>ಇದಕ್ಕಿಂತ ಕೆಟ್ಟದ್ದೆಂದರೆ, ನೀವು ಯಶಸ್ವಿಯಾದಾಗ, ನಿಮಗೆ ನಿಜವಾದ, ಶಾಶ್ವತ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ನಿಮ್ಮ ಯಶಸ್ಸು ಬೇರೊಬ್ಬರಿಗೆ ಬೇಕಿರುತ್ತದೆ. ನೀವು ಗೆದ್ದಾಗ ಬೇರೊಬ್ಬ ಸೋತಿರುತ್ತಾನೆ. ನಿಮ್ಮ ಅದೃಷ್ಟ ಮೇಲಕ್ಕೇರುವುದು ಎಲ್ಲಿಯೊ ಯಾರಿಗೊ ಒಬ್ಬನಿಗೆ ಬೇಡವಾಗಿರುತ್ತದೆ. ಯಾಕೆಂದರೆ, ತನ್ನನ್ನು ತಾನು ನಿಮ್ಮ ಪ್ರತಿಸ್ಪರ್ಧಿ ಎಂದು ಆತ ತಿಳಿದಿರುತ್ತಾನೆ. ಯಾರೊ ಒಬ್ಬರು ಯಶಸ್ವಿಯಾದರೆ ಸಾಕು ಅದನ್ನು ಸಹಿಸಲಾಗದ ಈ ಜನ ಯಶಸ್ವಿಯಾದವನ ಮೇಲೆ ದಾಳಿ ಮಾಡಲು ಅಥವ ಹೇಗಾದರೂ ಸರಿ ಅವಮಾನಕ್ಕೆ ಗುರಿ ಮಾಡಲು ಸಮಯ ಸಂದರ್ಭ ಹುಡುಕುತ್ತಿರುತ್ತಾರೆ. ನಿಮ್ಮ ಕೆಲಸದಲ್ಲಿ ಅಥವ ನಿಮ್ಮ ಸಂಸ್ಥೆಯಲ್ಲಿ ನೀವು ಮೇಲಕ್ಕೆ ಹೋದಷ್ಟೂ ನಿಮ್ಮ ಮೇಲೆ ಗುರಿ ಇಡುವುದು ಸುಲಭವಾಗುತ್ತ ಹೋಗುತ್ತದೆ.</p>
<p>ಶತ್ರುಗಳನ್ನು ಸಂಭಾಳಿಸಲು ಕೆಲವು ಸರಳ ಮಾರ್ಗಗಳಿವೆ. ಮೊದಲನೆಯದಾಗಿ, ಅವರ ನಡವಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮೇಲೆ ಎರಗುತ್ತಿರುವ ಈ ಜನ ತಮ್ಮ ಸದ್ಯದ ಜೀವನದ ಬಗ್ಗೆ ಸಂತೋಷವಾಗಿಲ್ಲ. ತಮ್ಮ ಸೋಲಿನ ಸಂತಾಪದೊಡನೆ ಅವರು ಗುದ್ದಾಡುತ್ತಿದ್ದಾರೆ. ಅವರಿಗೆ ಆಶಾಭಂಗವಾಗಿದೆ ಹಾಗೂ ತಮ್ಮ ಆಶಾಭಂಗಕ್ಕೆ ನಿಮ್ಮನ್ನು ದೂರುತ್ತಿದ್ದಾರೆ. ನೀವು ಅವರು ಗುರಿ ಇಡಲು ಸುಲಭವಾಗಿ ಸಿಗುವ ಒಂದು ಸಂಕೇತ ಆಗಿರಬಹುದು. ಈ ದಾಳಿ ನಿಜವಾಗಲೂ ನಿಮ್ಮನ್ನು ಕುರಿತು ಅಲ್ಲ; ಅದು ಅವರನ್ನು ಕುರಿತೆ. ನೀವು ಇದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಇದನ್ನು ತಾಳ್ಮೆ ಮತ್ತು ಅನುಕಂಪದಿಂದ ಸ್ವೀಕರಿಸಬೇಕು.</p>
<p>ಎರಡನೆಯದು, ಬೇರೆಯವರು ನಿಮ್ಮನ್ನು ಶತ್ರು ಎಂದು ನೋಡುತ್ತಿರುವಾಗ, ನೀವು ಅವರನ್ನು ನಿಮ್ಮ ಶತ್ರುಗಳೆಂದು ಭಾವಿಸಬೇಕಿಲ್ಲ. ಕೆಲವರು ಯಾಕೆ ಇನ್ನೊಬ್ಬರ ಮೇಲೆ ಬೀಳುತ್ತಾರೆ ಎಂದರೆ ಅವರಿಗೆ ತಮ್ಮನ್ನು ಯಾರೂ ಲಕ್ಷಿಸುತ್ತಿಲ್ಲ ಎಂಬ ಭಾವನೆ ಇರುತ್ತದೆಯಾದ್ದರಿಂದ. ತಮ್ಮನ್ನು ಹೀಗಾದರೂ ಗಮನಿಸಲಿ ಎಂದು ಅವರು ನಿಮ್ಮ ಮೇಲೆ ಬೀಳುತ್ತಾರೆ. ಇನ್ನು ಕೆಲವರು ಯಾಕೆ ಹೀಗೆ ಮಾಡುತ್ತಾರೆ ಎಂದರೆ, ಅವರು ತಮ್ಮ ನಂಬಿಕೆಗಳ ಬಗ್ಗೆ ಬಹಳ ಗಾಢವಾದ ವಿಶ್ವಾಸ ಬೆಳೆಸಿಕೊಂಡಿರುತ್ತಾರೆ ಹಾಗೂ ನೀವು ಅದನ್ನು ಅವರ ದೃಷ್ಟಿಕೋನದಿಂದ ಗಮನಿಸುತ್ತಿಲ್ಲ ಎಂದು ಅಸಮಧಾನಗೊಂಡಿರುತ್ತಾರೆ.</p>
<p><span style="color: #000080;"><span style="color: #000080;"><font color="#000080"><strong>ನೀವು ಮಾತ್ರ ಯಾವಾಗಲೂ ಮುಕ್ತ ಮನಸ್ಸಿನಿಂದ ಇರಿ, ನಿಮ್ಮ ಮೇಲೆ ದಾಳಿ ಮಾಡುವವರನ್ನು ಗೌರವಯುತವಾಗಿ ನಡೆಸಿಕೊಳ್ಳಿ, ಅವರು ಹೇಳುವುದನ್ನು ಕೇಳಿಸಿಕೊಳ್ಳಿ, ಹಾಗೂ ಯೋಗ್ಯವಾದ ಸಮಯದಲ್ಲಿ ಅವರಿಗೆ ಲಕ್ಷ್ಯ ಕೊಡಿ. ಅದರಿಂದ ಕೆಲವೊಂದನ್ನು ನೀವು ಕಲಿಯಲೂ ಬಹುದು. ಅದಕ್ಕಿಂತ ಹೆಚ್ಚಾಗಿ, ನೀವು ಅವರನ್ನು ವೈರಿಗಳ ತರಹ ನಡೆಸಿಕೊಳ್ಳದಿದ್ದರೆ ಮುಂದೆಂದಾದರೂ ಅವರು ನಿಮ್ಮ ಸ್ನೇಹಿತರಾಗಲು, ನಿಮ್ಮ ಪರ ಇರಲು ಅವರಿಗೆ ಸುಲಭವಾಗುತ್ತದೆ.</strong></font></span><strong></strong></span><strong></strong></p>
<p>ಕೊನೆಯದಾಗಿ, ನೀವು &#8220;ಯಶಸ್ವಿ&#8221; ಆಗುವುದಕ್ಕಿಂತ ಮೊದಲು ನಿಮ್ಮ ಸಂತಸದ ಮತ್ತು ದು:ಖದ ಗಳಿಗೆಗಳನ್ನು ಹಂಚಿಕೊಂಡ ನಿಮ್ಮ ಮನೆಯವರೊಡನೆ ಮತ್ತು ಧೀರ್ಘಕಾಲದ ಸ್ನೇಹಿತರೊಡನೆ ಇರುವ ನಿಮ್ಮ ಸಂಬಂಧವನ್ನು ಹುಷಾರಾಗಿ ಕಾಪಾಡಿಕೊಳ್ಳಿ. ನಿಮ್ಮ ಮನೆಯವರು ನೀವು ಏನೇ ಆಗಿರಲಿ ನಿಮ್ಮನ್ನು ಪ್ರೀತಿಸುತ್ತಾರೆ. ಮತ್ತು, ನಿಮ್ಮ ಧೀರ್ಘಕಾಲದ ಸ್ನೇಹಿತರು ನಿಮಗಿರುವ ಅಧಿಕಾರ ಅಥವ ಸ್ಥಾನಕ್ಕಾಗಿ ನಿಮ್ಮ ಸ್ನೇಹಿತರಾಗಲಿಲ್ಲ. ಸ್ನೇಹ ಕೊನೆಯವರೆಗೂ ಬಾಳುವುದು ಪರಸ್ಪರರಿಗಿರುವ ಸಮಾನಾಸಾಕ್ತ ವಿಷಯಗಳಿಂದಾಗಿ.</p>
<p>ಶಾಲೆಯಲ್ಲಿ ತಮಗೆ ಕಲಿಸಲಾಗಿರುವ ಒಂದು ಹಾಡನ್ನು ನನ್ನ ಮಕ್ಕಳು ಹಾಡುತ್ತಿರುತ್ತಾರೆ: &#8220;ಹೊಸ ಸ್ನೇಹಿತರನ್ನು ಮಾಡಿಕೊ, ಆದರೆ ಹಳಬರನ್ನು ಬಿಡಬೇಡ. ಒಬ್ಬರು ಬೆಳ್ಳಿಯಾದರೆ, ಮತ್ತೊಬ್ಬರು ಬಂಗಾರ.&#8221; ಜೀವನ ಮುಂದುವರೆದಂತೆಲ್ಲ ಹಳೆಯ ಸ್ನೇಹಿತರು ನಿಮಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಾರೆ, ಹೆಚ್ಚು ಹೆಚ್ಚು ಅರ್ಥವಾಗುತ್ತಾರೆ. ಅವರೊಡನೆಯ ಸ್ನೇಹ ಅಗತ್ಯವಾಗುತ್ತದೆ. ಅದೇ ರೀತಿ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶವೂ ಬರುತ್ತದೆ. ಈ ಹೊಸ ಸ್ನೇಹಿತರಲ್ಲಿ ಕೆಲವರು ನಿಜವಾದ ಸ್ನೇಹಿತರಾಗುತ್ತಾರೆ; ಈ ಹೊಸ &#8220;ಬೆಳ್ಳಿ&#8221; ಒಂದು ದಿನ &#8220;ಬಂಗಾರ&#8221; ಆಗುತ್ತದೆ.</p>
<p><span style="color: #000080;"><span style="color: #000080;"><font color="#000080"><strong>ದೂರದೃಷ್ಟಿ ಮತ್ತು ನೈಪುಣ್ಯತೆಯಿಂದ ಶ್ರಮ ಪಟ್ಟು ದುಡಿಯಿರಿ. ಅನಗತ್ಯವಾದ ಸಂಕೋಚ ಪಟ್ಟುಕೊಂಡು ಯಶಸ್ಸನ್ನು ದೂರ ತಳ್ಳಬೇಡಿ. ಯಾರಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ, ಅವರನ್ನು ತಾಳ್ಮೆ ಮತ್ತು ಅನುಕಂಪದಿಂದ ನಡೆಸಿಕೊಳ್ಳಿ. ಶತ್ರುಗಳನ್ನು ಭವಿಷ್ಯದ ಸಹಚರರನ್ನಾಗಿ, ಸ್ನೇಹಿತರನ್ನಾಗಿ ನೋಡಿ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ &#8220;ನಿಜವಾದ&#8221; ಸ್ನೇಹಿತರಿಗೆ ಯಾವಾಗಲೂ ಹತ್ತಿರವಾಗಿರಿ.</strong></font></span><strong></strong></span><strong></strong></p>
<p>ಇದನ್ನೆಲ್ಲ ಮಾಡಿದರೆ, ಎಷ್ಟೇ ಜನ ಖೊಟ್ಟಿ ಸ್ನೇಹಿತರು, ನಿಜವಾದ ಶತ್ರುಗಳು ಬಂದು ನಿಮ್ಮ ಮನೆಯ ಬಾಗಿಲನ್ನು ಬಡಿಯುತ್ತಿದ್ದರೂ ನೀವು ನಿಮ್ಮ ಜೀವನದಲ್ಲಿ ವೈಯಕ್ತಿಕ ಅರಿವು ಮತ್ತು ಸಂತೋಷವನ್ನು ಕಾಣುತ್ತಿರುತ್ತೀರಿ.</p>
<p style="text-align: center;"><strong><big>ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.<br />
<span style="color: #00e055;">ಆದ್ರೂ, ಯಶಸ್ವಿಯಾಗಿ.</span></big></strong></p>
<hr />ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:<br />
<object width="200" height="30" data="http://audio-pro-central.com/WordPress/wp-content/plugins/audio-player/player.swf" type="application/x-shockwave-flash"><param name="id" value="audioplayer1" /><param name="FlashVars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%204.mp3" /><param name="quality" value="high" /><param name="menu" value="false" /><param name="bgcolor" value="#FFFFFF" /><param name="src" value="http://audio-pro-central.com/WordPress/wp-content/plugins/audio-player/player.swf" /><param name="flashvars" value="playerID=1&amp;soundFile=http://www.vicharamantapa.net/Anyway/Do%20Good%20Anyway%20-%20Chapter%204.mp3" /></object></p>
]]></content:encoded>
			<wfw:commentRss>http://www.ravikrishnareddy.com/anyway-kannada/?feed=rss2&amp;p=36</wfw:commentRss>
		<slash:comments>0</slash:comments>
<enclosure url="http://www.vicharamantapa.net/Anyway/Do%20Good%20Anyway%20-%20Chapter%204.mp3" length="12286080" type="audio/mpeg" />
		</item>
	</channel>
</rss>
