ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್‌ಗಳು…

(ವಿಕ್ರಾಂತ ಕರ್ನಾಟಕ – ಫೆಬ್ರವರಿ 08, 2008 ರ ಸಂಚಿಕೆಯಲ್ಲಿನ ಬರಹ) 2002 ನೆ ಇಸವಿ; ಭಾರತದ ನಂಬರ್ 1 ಮುಖ್ಯಮಂತ್ರಿ ಎಂದು ಬಿರುದಾಂಕಿತರಾಗಿದ್ದ ಎಸ್.ಎಂ. ಕೃಷ್ಣರ ಕಾಲ. ಈಗಿನಂತೆಯೆ ಆಗಲೂ ಬೆಂಗಳೂರಿನ ಸುತ್ತಮುತ್ತ ಐಟಿ ಇಂಡಸ್ಟ್ರಿ ತೀವ್ರವಾಗಿ ಬೆಳೆಯುತ್ತಿತ್ತು. ತನ್ನ ಓರಗೆಯವರಿಗಿಂತ ವೇಗವಾಗಿ ಬೆಳೆಯುತ್ತಿದ್ದ ತನ್ನ ಉದ್ದಿಮೆಗೆ ಬೆಂಗಳೂರಿನಲ್ಲಿ 100 ಎಕರೆ ಜಾಗ ಬೇಕಿದೆ ಎಂದು ಇನ್ಫೋಸಿಸ್ ಸರ್ಕಾರವನ್ನು ಕೇಳಿಕೊಂಡಿತು. ತಕ್ಷಣ ಕರ್ನಾಟಕ ಸರ್ಕಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವಿಧಾನಸೌಧದಿಂದ ಕೇವಲ ಹತ್ತು-ಹನ್ನೆರಡು [...]

ಬರೀ ಒಂದಿಬ್ಬರು ಸ್ಟಾರ್‌ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿರುವ ಕ್ರಿಕೆಟ್…

(ವಿಕ್ರಾಂತ ಕರ್ನಾಟಕ – ಫೆಬ್ರವರಿ 1, 2008 ರ ಸಂಚಿಕೆಯಲ್ಲಿನ ಬರಹ) ಕೋಟ್ಯಾಂತರ ಜನ ಕನ್ನಡಿಗರಿಗೆ ಎನ್ನಲಾಗದಿದ್ದರೂ ಒಂದಷ್ಟು ಲಕ್ಷ ಕನ್ನಡಿಗರಿಗೆ ಪರಿಚಯ ಇರುವವರು ಅವರು. ಹತ್ತಾರು, ಬಹುಶಃ ನೂರಾರು ಕೋಟಿಗಳ ಆಸ್ತಿಯನ್ನೂ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿದ್ದಾರೆ. ಕೆಲವೊಂದು ಸಾಮಾಜಿಕ ಕಾಳಜಿಗಳೂ ಇದ್ದಂತಿವೆ. ಇದೇ ಕಾರಣಕ್ಕೆ ಅವರನ್ನು ನಾನು ಸುಮಾರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಅವರಿಗೂ ಕ್ರೀಡೆಗಳ ಬಗ್ಗೆ ಆಸಕ್ತ್ತಿಯಿತ್ತು. ಹಾಗಾಗಿಯೆ ಅಂದು ಭಾರತದ Pathetic State of Sports ಬಗ್ಗೆ ವಿಷಯ ಬಂತು. [...]

ಅಗಾಧ ಸಾಧ್ಯತೆಗಳ ನ್ಯಾನೊ ಕಾರು

(ವಿಕ್ರಾಂತ ಕರ್ನಾಟಕ – ಜನವರಿ 25, 2008 ರ ಸಂಚಿಕೆಯಲ್ಲಿನ ಬರಹ) ಇಂತಹುದೊಂದು ಸಾಧನೆ ಕೇವಲ ಭಾರತಕ್ಕೇ ಅಲ್ಲ, ಪ್ರಪಂಚಕ್ಕೂ ಬೇಕಾಗಿತ್ತು. ಭಾರತದ ಬಹುಸಂಖ್ಯಾತ ಕೆಳಮಧ್ಯಮವರ್ಗದ ಬಡವರೂ ಕಾರು ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಯಲ್ಲಿ ಕಾರನ್ನು ಒದಗಿಸಬೇಕು ಎಂದುಕೊಂಡ ರತನ್ ಟಾಟಾರ ಕನಸಿನಲ್ಲಿ ವ್ಯಾಪಾರ-ವಹಿವಾಟಿನ ಯೋಚನೆಯೆ ಮೂಲಯೋಚನೆ ಎಂದುಕೊಂಡರೂ, ಟಾಟಾರವರ ನ್ಯಾನೊ ಕಾರಿಗೆ ಅದನ್ನು ಮೀರಿದ ಸಾಧ್ಯತೆಗಳಿವೆ. ಇದು ನಿಜಕ್ಕೂ ಯಶಸ್ವಿಯಾಗಿ ಮಾರಾಟವಾದರೆ, ಜಾಗತಿಕ ಪರಿಸರ, ಭಾರತದ ಆರ್ಥಿಕತೆ, ಭಾರತೀಯರ ಇನ್ನೊವೇಷನ್ ಸ್ಪಿರಿಟ್, ವಿಶ್ವದಾದ್ಯಂತದ ಆಟೊಮೊಬೈಲ್ ಇಂಡಸ್ಟ್ರಿಯ ಸ್ಥಿತಿ [...]

MPEG 4 ಫಾರ್ಮ್ಯಾಟ್‌ನಲ್ಲಿ ಏನೇ ಆಗಲಿ, ಒಳ್ಳೆಯದನ್ನೆ ಮಾಡಿ – ಕೇಳು-ಪುಸ್ತಕ

ಗೆಳೆಯ ಪ್ರದೀಪ್ ಸಿಂಹ (www.humanglory.org), – “ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ – ಒಂದು ಕೇಳು-ಪುಸ್ತಕ” ವನ್ನು MPEG 4 ಫಾರ್ಮ್ಯಾಟ್‌‍ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು ಆಪಲ್ ಕ್ವಿಕ್‌‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು. “ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ” ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ ಅಧ್ಯಾಯಗಳು ಒಂದು ರೀತಿ ಸ್ವತಂತ್ರ ಅಧ್ಯಾಯಗಳು. [...]

ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ – ಒಂದು ಕೇಳು-ಪುಸ್ತಕ

ಸ್ನೇಹಿತರೆ, ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ “ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ” ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ. ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ “Anyway – The [...]

ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ

(ವಿಕ್ರಾಂತ ಕರ್ನಾಟಕ – ಜನವರಿ 11, 2008 ರ ಸಂಚಿಕೆಯಲ್ಲಿನ ಬರಹ) ಇಂಡೋನೇಷ್ಯಾದ ಬಾಲಿ ಪಟ್ಟಣದಲ್ಲಿ ಜಗತ್ತಿನ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಕಳೆದ ತಿಂಗಳು ನಡೆಯಿತು. ಜಗತ್ತೆಲ್ಲ ಕಳೆದ ಶತಮಾನದಿಂದೀಚೆಗೆ ಭೂಮಿಯ ಮೇಲೆ ಘಟಿಸುತ್ತಿರುವ ಹವಾಮಾನದ ವೈಪರೀತ್ಯಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಒಂದು ಒಮ್ಮತದ ತೀರ್ಮಾನಕ್ಕೆ ಬರುತ್ತಿದ್ದರೆ, ಜಗತ್ತಿನ ದೊಡ್ಡಣ್ಣ ಅಮೆರಿಕ ಮಾತ್ರ ಹಠ ಮಾಡುತ್ತಿತ್ತು. “ನಾವು ಇಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಯವನ್ನು ಒಪ್ಪುವುದಿಲ್ಲ; ಇದರ ಬದಲಿಗೆ ನಮ್ಮಂತಹ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು [...]