"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಇಲ್ಲಿಗೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು. ಕಲಿಯುಗದಿಂದ ಕೃತಯುಗಕ್ಕೆ ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!! ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!! …ಹಾಯ್ -> ಲವ್ ಯು -> ಬೈ–>

ಸ್ವತಂತ್ರ, ನಿರಂಕುಶಮತಿಗಳು…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 7, 2008 ರ ಸಂಚಿಕೆಯಲ್ಲಿನ ಲೇಖನ) ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಅಮಾನುಷ ಕೃತ್ಯಗಳಲ್ಲಿ ಹಾಲೊಕಾಸ್ಟ್ (ನರಮೇಧ) ಒಂದು. ದೇಶದೇಶಗಳ ನಡುವೆ ಯುದ್ಧಗಳಾಗಿವೆ. ಕ್ರೈಸ್ತ ಮತ್ತು ಮುಸಲ್ಮಾನ ಮತೀಯರ ನಡುವೆ ಜೆರೊಸಲೆಮ್ ಅನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ಎರಡು ಶತಮಾನಗಳ ಕಾಲ ನಿರಂತರ ಕ್ರುಸೇಡ್ ಕದನಗಳಾಗಿವೆ. ಲಕ್ಷಲಕ್ಷ ಜನ ನೆಪೊಲಿಯನ್ನನ ಕಾಲದಲ್ಲಿ ಯುದ್ಧದಿಂದ ಸತ್ತಿದ್ದಾರೆ. ಆದರೆ, ಒಂದು ಮತಕ್ಕೆ ಸೇರಿದ ಇಡೀ ಜನಾಂಗವನ್ನು ತೊಡೆದುಹಾಕಲು ಇಷ್ಟು ವ್ಯವಸ್ಥಿತವಾಗಿ, ಕ್ರೂರವಾಗಿ ಈ ಮಟ್ಟದಲ್ಲಿ ಯಾರೂ ತೊಡಗಿಕೊಂಡಿರಲಿಲ್ಲ. ಜರ್ಮನಿಯ [...]

2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು…

ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ. ಇದೇ ಅವಧಿಯಲ್ಲಿ ಬರೆದಿರುವ ಇತರೆ ಒಂದೆರಡು ಲೇಖನಗಳನ್ನು ಇನ್ನೂ [...]

ಸಂಸ್ಕಾರ ಕಲಿಯದವರು ಮಾಡುವ ತಿಥಿ ಪಾಠ…

(ವಿಕ್ರಾಂತ ಕರ್ನಾಟಕ – ಫೆಬ್ರವರಿ 29, 2008 ರ ಸಂಚಿಕೆಯಲ್ಲಿನ ಬರಹ) ಒಂದೆರಡು ವಾರದ ಹಿಂದೆ ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಭಾಷೆಯ ಬೃಹಸ್ಪತಿಗಳು ಕನ್ನಡದಿಂದ ಹಿಂದಿಗೆ ಅನುವಾದಗೊಂಡಿರುವ ಸಂಸ್ಕಾರ ಕಾದಂಬರಿಯನ್ನು ನಾನ್-ಡಿಟೈಲ್ಡ್ ಪಠ್ಯವಾಗಿ ತರಗತಿಯಲ್ಲಿ ಬೋಧಿಸಲು ಮುಜುಗರವಾಗುತ್ತದೆ ಎಂದು ತಕರಾರು ತೆಗೆದಿದ್ದರು. ಬಹುಶಃ ಆ ತಕರಾರಿಗೆ ಅನೇಕ ಆಯಾಮಗಳಿರಬಹುದು. ಆ ಎಲ್ಲಾ ಆಯಾಮಗಳ ಮಧ್ಯೆಯೂ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಆ ತಕರಾರನ್ನು ತಾತ್ಕಾಲಿಕವಾಗಿ ತಳ್ಳಿ ಹಾಕಿತು. ಆದರೆ, ಕರ್ನಾಟಕದ ಯಾವುದೆ ದಿನಪತ್ರಿಕೆಯಾಗಲಿ, ಯಾವೊಬ್ಬ ಶಿಕ್ಷಣ ತಜ್ಞರಾಗಲಿ, ಕೊನೆಗೆ [...]

ಗಂಡನ ಗೋರಿಯಿಂದ ಗದ್ದುಗೆಯತ್ತ…

(ವಿಕ್ರಾಂತ ಕರ್ನಾಟಕ – ಫೆಬ್ರವರಿ 22, 2008 ರ ಸಂಚಿಕೆಯಲ್ಲಿನ ಬರಹ) ಅಮೆರಿಕದ ರಾಜಕೀಯ ಈಗ ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿ ಬಂದು ನಿಂತಿದೆ. 2009 ರಲ್ಲಿ ಮೊದಲ ಬಾರಿಗೆ ಒಬ್ಬ ಕರಿಯ ಅಥವ ಒಬ್ಬ ಸ್ತ್ರೀ ಅಮೆರಿಕದ ಅಧ್ಯಕ್ಷರಾಗುವ ಐತಿಹಾಸಿಕ ಘಟನೆ ಆಗಿಯೆ ಆಗುತ್ತದೆ ಎಂದು ಖಚಿತವಾಗಿ ಹೇಳಲು ಈ ವರ್ಷದ ನವೆಂಬರ್ ತನಕ ಕಾಯಬೇಕಾದರೂ, ಒಬ್ಬ ನಾಯಕಿ ಅಥವ ಕಪ್ಪುಜನಾಂಗದ ನಾಯಕನೊಬ್ಬ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಪ್ರಮುಖ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವ [...]

ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ?

(ವಿಕ್ರಾಂತ ಕರ್ನಾಟಕ – ಫೆಬ್ರವರಿ 15, 2008 ರ ಸಂಚಿಕೆಯಲ್ಲಿನ ಬರಹ) ಅದು Y2K, ಅಂದರೆ ಇಸವಿ 2000. ನಾನು ಆಗ ಬೆಂಗಳೂರಿನಲ್ಲಿ ಮೊಟೊರೊಲದಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲರಿಗೂ ಗೊತ್ತಿರುವ ಹಾಗೆ ಮೊಟೊರೊಲ ಸೆಲ್‌ಫೋನ್‌ಗಳ ಕಂಪನಿ. ಆ ಸಮಯದಲ್ಲಿ ಈ ಮೊಬೈಲ್ ಫೋನುಗಳ ಲೋಕದಲ್ಲಿನ ಒಂದು ಹೊಸ ತಂತ್ರಜ್ಞಾನದ ಬಗ್ಗೆ ಮತ್ತು ಅದನ್ನು ಫೋನಿನಲ್ಲಿ ಅಳವಡಿಸುವ ವಿವಿಧ ಬಗೆಗಳ ಬಗ್ಗೆ, ಗ್ರಾಹಕರಿಗೆ ಕೊಡಬಹುದಾದ ಹೊಸ ತರಹದ ಸೇವೆಗಳ ಬಗ್ಗೆ, ತನ್ಮೂಲಕ ಮೊಬೈಲ್ ಕಂಪನಿಗಳ ಮತ್ತು ಸರ್ವಿಸ್ ಪ್ರೊವೈಡರ್‌ಗಳ [...]