ಬಂಧುಗಳೇ, ಜಯನಗರ ವಾಸಿಯಾಗಿರುವ ನಮ್ಮೆಲ್ಲರ ಹೆಮ್ಮೆ ಮತ್ತು ಸ್ಫೂರ್ತಿ ಶ್ರೀ.ಹೆಚ್.ಎಸ್.ದೊರೆಸ್ವಾಮಿಯವರನ್ನು ಕಳೆದ ವಾರ ಭೇಟಿ ಮಾಡಿ, ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಚಿಸುತ್ತಿರುವುದರ ಬಗ್ಗೆ ಮತ್ತು ಹಲವು ಸಮಾನಮನಸ್ಕ ಸಂಗಾತಿಗಳು ಈ ಬಗ್ಗೆ ಗುಣಾತ್ಮಕವಾಗಿ ಬೆಂಬಲಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದೆ. ಎಂದಿನಂತೆ ಆಶಾವಾದದಿಂದಲೇ ಮಾತನಾಡಿದ ದೊರೆಸ್ವಾಮಿಯವರು ಈಗಿನಿಂದಲೇ ಮನೆಮನೆಗೆ ತೆರಳಿ ಜನರ ಜೊತೆ ಮಾತನಾಡಲು ಮತ್ತು ರಸ್ತೆಮೂಲೆ-ಸಭೆ ಅಥವ ಜನ ಸೇರುವ ಕಡೆ ಜನರನ್ನು ಉದ್ದೇಶಿಸಿ ಮಾತನಾಡುತ್ತ ಹೋಗಿ […]