ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ : ದಿ. 19-6-2011

ಸ್ನೇಹಿತರೆ, “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ”, ಮತ್ತು “ದೇಶ-ಕಾಲ-ಶ್ರಮ,” ಎಂಬ ನನ್ನ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಭಾನುವಾರದಂದು (19/6/11) ಬೆಳಗ್ಗೆ 10:30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತಿದ್ದೇನೆ. “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ,” ಇಂಗ್ಲಿಷ್‍ನ “Anyway” ಕೃತಿಯ ಅನುವಾದ. ಮೂಲ ಲೇಖಕರು ಕೆಂಟ್ ಎಂ. ಕೀತ್. “ದೇಶ-ಕಾಲ-ಶ್ರಮ” ನಾನು “Outliers” ಬಗ್ಗೆ [...]

ದಲಿತರ ಬಲವರ್ಧನೆ: ಬೇಕಿದೆ ಪೂನಾ ಒಪ್ಪಂದದ ಮರುಚಿಂತನೆ

ಇಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಲೇಖನದ ಕೊಂಡಿ… http://vijaykarnatakaepaper.com/pdf/2011/01/22/20110122a_008101002.pdf

ಹೀಗೊಂದು ಆರು ದಿನದ ಕರ್ನಾಟಕ ಪ್ರವಾಸ…

ಕಳೆದ ಡಿಸೆಂಬರ್ 26 ರಂದು ನಮ್ಮ ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆದಿದ್ದು. ಅಂದು ಬೆಳಗ್ಗೆಯೇ ಹೋಗಿ ಓಟು ಹಾಕಿದೆ. ನಾನು ಓಟು ಹಾಕಿದ ಇಬ್ಬರೂ ಗೆಲ್ಲುವುದಿಲ್ಲ ಎಂದು ಗೊತ್ತಿತ್ತು. ತಾಲ್ಲೂಕು ಪಂಚಾಯಿತಿಗೆ ನಿಂತಿದ್ದ ಅಭ್ಯರ್ಥಿಯೊಬ್ಬರು ಯಾವುದೇ ಕಾರಣಕ್ಕೂ ತನ್ನ ಚುನಾವಣೆಯ ಖರ್ಚಿನ ಮಿತಿ ದಾಟುವುದಿಲ್ಲ ಎಂದು ಗೊತ್ತಿತ್ತು. ಅವರಿಗೆ ನನ್ನ ಪರವಾಗಿ ರೂ.1000 ನೀಡಿ ಅವರ ಪರವಾಗಿ ಒಂದು ಸಣ್ಣ ಸಭೆಯಲ್ಲಿ ಭಾಷಣ ಸಹ ಮಾಡಿದ್ದೆ. ಇನ್ನು ಜಿಲ್ಲಾ ಪಂಚಾಯಿತಿಯಲ್ಲಿ ಕಡಿಮೆ ಕೆಟ್ಟ [...]

ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ…

ಈ ಕೆಳಗಿನದನ್ನು ಈಗ ಚಾಲ್ತಿಯಲ್ಲಿರುವ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬರೆದದ್ದು. ಈಗ ಮತ್ತೊಮ್ಮೆ ಸೂಕ್ತ ಎಂದು ಇಲ್ಲಿ ಹಾಕುತ್ತಿದ್ದೇನೆ. ರವಿ… ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ. ಇಂತಹ [...]

ಸಹನಾಗರೀಕರೆ, ಬೇವು ಬಿತ್ತಿ ಮಾವು ಬೆಳೆಯಲಾಗದು…

ಕರ್ನಾಟಕದ ರಾಜಕಾರಣದ ಬಗ್ಗೆ ಇಂತಹುದೊಂದು ಮಾತನ್ನು ಈಗಾಗಲೆ ಹಲವರು ಬಳಸಿರಬಹುದು. ಹಾಗೆಯೇ ಇದೂ ಸಹ ಕ್ಲೀಷೆ ಆಗಿಬಿಡಬಹುದು. ಅದು ದೇಶದ ದುರಂತ… ಯಾಕೆ ಹೀಗಾಯಿತು? ಕೇವಲ ಜನರೇ ಕಾರಣರೆ? ಅವರಿಗೆ ಆಯ್ಕೆಗಳೇ ಇರಲಿಲ್ಲವೇ? ನಾಯಕರು ಅವರಾಗಿಯೇ ಬರುತ್ತಾರಾ ಅಥವ ಜನ ಮುಂದಕ್ಕೆ ತರುತ್ತಾರಾ? ಪ್ರಜಾರಾಜ್ಯದಲ್ಲಿ ಯಥಾ ಪ್ರಜಾ ತಥಾ ಪ್ರತಿನಿಧಿ. ಅಲ್ಲವೇ? ಉತ್ತಮ ಸಮಾಜದ ಕನಸು ಕಾಣುವುದಕ್ಕೆ ಮತ್ತು ಕ್ರಿಯಾಶೀಲರಾಗುವುದಕ್ಕೆ ಸಮಯ ಬಂದಿದೆಯೇ?

ಮಾಯವಾಗುವುದೆ ಗೋಮುಖ? ಗಂಗೆ ಮತ್ತು ಭವಿಷ್ಯದ ಬಗ್ಗೆ PBS ಡಾಕ್ಯುಮೆಂಟರಿ

Watch the full episode. See more NOW on PBS.