K.R. ಶ್ರೀಧರ್ ಮತ್ತು ಬ್ಲೂಮ್ಬಾಕ್ಸ್, ಈ ಎರಡು ಹೆಸರುಗಳು ಮುಂದಿನ ದಿನಗಳಲ್ಲಿ ನಿಮಗೆ ಆಗಾಗ ಕಿವಿಗೆ ಬೀಳಬಹುದು; Clean, Green, ಮತ್ತು Cheap Energy ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಒಂದಾಗಿದ್ದರೆ. ಕೆಳಗಿನ ವಿಡಿಯೊ ನೋಡಿ. ಈ ತಂತ್ರಜ್ಞಾನದ ಪರ-ವಿರುದ್ಧದ ವಾದಗಳನ್ನು ಓದಲು ಈ ಕೆಳಗಿನ ಲಿಂಕ್ನಲ್ಲಿರುವ ಕಾಮೆಂಟ್ಸ್ ವಿಭಾಗಕ್ಕೆ ಹೋಗಿ: http://news.cnet.com/8301-11128_3-10457410-54.html ಈ ತಂತ್ರಜ್ಞಾನ ಮತ್ತಷ್ಟು mature ಆದಮೇಲೆ ಮತ್ತು mass production ಆರಂಭವಾದ ಮೇಲೆ ಈ generatorಗಳು ಇನ್ನೂ ಅಗ್ಗವಾಗಬಹುದು. ಬಹುಶಃ ಹತ್ತು-ಹದಿನೈದು ಲಕ್ಷಕ್ಕೆಲ್ಲ ನಮ್ಮ [...]
ಪ್ರಜಾಪ್ರಭುತ್ವ. ಅದರ ಮುಂದೆ ನನಗೆ ಮಿಕ್ಕೆಲ್ಲವೂ ಚಿಕ್ಕದೆ. ಜೈರಾಮ್ ರಮೇಶ್ ಸದ್ಯಕ್ಕೆ ಭಾರತದಲ್ಲಿ ಬಿಟಿ ಬದನೆ ಇಲ್ಲ ಎಂದಿದ್ದಾರೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ಬಹುಸಂಖ್ಯಾತ ಜನರ ವಿರೋಧವಿದ್ದದ್ದೆ ಪ್ರಮುಖ ಕಾರಣ ಎಂದು ನನ್ನ ಭಾವನೆ. ಮಾತುಕತೆ ಮತ್ತು consensus ಇಲ್ಲದ ಪ್ರಜಾಪ್ರಭುತ್ವ ಒಳ್ಳೆಯದಲ್ಲ. ಹಾಗಾಗಿ ಬಿಟಿ ಬದನೆ ನಿಷೇಧದಿಂದ ನನಗೆ ತೀರ ಬೇಸರವೇನೂ ಇಲ್ಲ. ಮತ್ತು GE ಮತ್ತು ಜೈವಿಕ ಸಂಶೋಧನೆಗಳ ಬಾಗಿಲು ಇದರಿಂದೇನೂ ಮುಚ್ಚಿಲ್ಲ. ಜನ ಹೆಚ್ಚುಹೆಚ್ಚು ತಿಳಿದುಕೊಂಡಂತೆ ಅಕಾರಣ ಭಯಗಳೂ ಕಮ್ಮಿಯಾಗುತ್ತ ಹೋಗುತ್ತದೆ. ನನಗೆ [...]
The for and against debate on BT brinjal cultivation is in full swing in Karnataka and also in some other parts of the country. With Karnataka CM announcing that BT brinjal will not be allowed in Karnataka and it will be conveyed to the Centre, the opposing group has scored a big win. A good [...]
ಮೊದಲಿಗೆ ಸ್ವಲ್ಪ ಸ್ವವಿವರ; ಗೊತ್ತಿಲ್ಲದವರಿಗೆ. ನಾನು ಹಳ್ಳಿಯಿಂದ, ರೈತ ಕುಟುಂಬದಿಂದ ಬಂದವನು. ಹೊಲ-ಗದ್ದೆ-ತೋಟಗಳ ಉತ್ತು-ಬಿತ್ತು-ಬೆಳೆ-ಮಾರಾಟಗಳಲ್ಲಿ ಪಾಲ್ಗೊಂಡವನು. ಒಳ್ಳೆಯ ಬೀಜ ಮತ್ತು ಹಸುಗಳಿಂದ ರೈತನಿಗೆ ಆಗುವ ಲಾಭ ಕಂಡವನು. ಹಾಗೆಯೆ ಆತನ ಜೀವನದ ಅನಿಶ್ಚತೆಯನ್ನು, ಜೀವನದಲ್ಲಿನ ಜೂಜನ್ನು ಸ್ವತಃ ಅನುಭವಿಸಿ ಕಂಡವನು. ಇಂಜಿನಿಯರಿಂಗ್ ಓದುವಾಗ, ಮನೆಯಲ್ಲಿ ಬೇರೆ ಆದಾಯ ಇದ್ದರೂ ನನ್ನ ಹಾಸ್ಟೆಲ್-ಊಟ-ಮತ್ತಿತರ ತಿಂಗಳ ಖರ್ಚುಗಳನ್ನು ನನ್ನ ತಾಯಿ ತಾನು ಸಾಕಿದ್ದ ಸೀಮೆಹಸುವಿನ ಹಾಲು ಮಾರಿ ಬಂದ ಹಣದಿಂದ ನೋಡಿಕೊಳ್ಳುತ್ತಿದ್ದಳು. (ಆಕೆಯ ತಾಯಿ ಇನ್ನೂ ಗಟ್ಟಿಗಿತ್ತಿ. ತನ್ನದೇ ಎಂಟು [...]
ಕಳೆದ ವರ್ಷದ ಅಕ್ಟೋಬರ್ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು. ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ [...]
ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ. ಲೇಖಕ ಕೆ. ಪುಟ್ಟಸ್ವಾಮಿಯವರು “ವಿಕ್ರಾಂತ ಕರ್ನಾಟಕ“ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ [...]